ವಿಜಯ ದಶಮಿ ಸಡಗರ
ಬನ್ನಿ ಮರಕ್ಕೆ ಪೂಜೆ -ಬನ್ನಿ ವಿನಿಮಯ ಬೃಹತ್ ರಾವಣ ಪ್ರತಿಕೃತಿ ದಹನ
Team Udayavani, Oct 9, 2019, 2:48 PM IST
ಬೀದರ: ಜಿಲ್ಲಾದ್ಯಂತ ವಿಜಯ ದಶಮಿಯನ್ನು (ದಸರಾ) ಹಬ್ಬವನ್ನು ಮಂಗಳವಾರ ಸಡಗರ ಸಂಭ್ರಮ ಆಚರಿಸಲಾಯಿತು. ನಗರ ಹಾಗೂ ಪಟ್ಟಣದ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿತ್ತು. ವಯಸ್ಕರು ಸೇರಿದಂತೆ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮನೆ ಮನೆಗಳಲ್ಲಿ ಸ್ಥಾಪಿಸಿದ ಘಟ ಹಾಗೂ ಬೆಳೆದು ನಿಂತ ಬೆಳೆಗೆ ವಿಶೇಷ ಪೂಜೆ ನಡೆಸಲಾಯಿತು. ಮನೆಯಲ್ಲಿನ ಆಯುಧಗಳಿಗೆ ಜನರು ಪೂಜೆ ಮಾಡಿದರೆ, ಇತರೆ ಇಲಾಖೆಗಳಲ್ಲಿ ಕೂಡ ಪೂಜೆಯ ಸಂಭ್ರಮ ಹೆಚ್ಚಿತ್ತು.
ನಗರದ ಹಳ್ಳದಕೇರಿ, ದೇವಿ ಕಾಲೋನಿ, ಮಂಗಲಪೇಟ್, ದರ್ಜೆಗಲ್ಲಿ, ಬ್ರಗ್ಮನವಾಡಿಯ ಭವಾನಿ ಮಂದಿರಗಳಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ಸಾವಿರಾರು ಭಕ್ತರು ದೇವಸ್ಥಾನಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಪರಸ್ಪರ ಶುಭ ವಿನಿಮಯ: ಗ್ರಾಮೀಣ ಪ್ರದೇಶದ ರೈತ ಬಾಂಧವರು ವಿಜಯ ದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ನಿಮಿತ್ತ ವಿಶೇಷವಾಗಿ ಹೋಳಿಗೆ, ಪಾಯಸ ಸೇರಿದಂತೆ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿ ಕುಟುಂಬ ವರ್ಗ, ಆಪ್ತರೊಂದಿಗೆ ಸವಿದರು. ನಂತರ ಸಂಜೆ ಮಕ್ಕಳು, ಹಿರಿಯರು ಸೇರಿ ಬನ್ನಿ ಮರದ ಪೂಜೆ ಮಾಡಿ ಬನ್ನಿ ಹಂಚಿಕೊಂಡು ಶುಭ ಕೋರಿದರು.
ರಾವಣ ದಹನ ಕಾರ್ಯಕ್ರಮ: ವಿಜಯದಶಮಿ ನಿಮಿತ್ತ ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ವಿವಿಧ ಸಾತಿಕ ಕಾರ್ಯಕ್ರಮಗಳು ಜರುಗಿದವು. ರಾಮಲೀಲಾ ಪ್ರದರ್ಶನ ಮನಸೂರೆಗೊಂಡಿತ್ತು. ಪ್ರಮುಖ ರಸ್ತೆಗಳಲ್ಲಿ ದೇವಿ ಮೂರ್ತಿಯ ಮೆರವಣಿಗೆ ವೈಭವದಿಂದ ನೆರವೇರಿಸಲಾಯಿತು. ನಂತರ 45 ಅಡಿ ಎತ್ತರದ ರಾವಣನ ಪ್ರತಿಕೃತಿ ದಹಿಸಲಾಯಿತು. ದಹನ ಕಾರ್ಯಕ್ರಮ ನೋಡಲು ಸಾವಿರಾರು ಜನರು ಸೇರಿದ್ದರು.
ಮಾಜಿ ಸಚಿವ, ಶಾಸಕ ಬಂಡೆಪ್ಪ ಖಾಶೆಂಪೂರ್, ಎಂಎಲ್ಸಿ ರಘುನಾಥರಾವ್ ಮಲ್ಕಾಪೂರೆ, ಪ್ರಥಮ ದರ್ಜೆ ಗುತ್ತೆದಾರ ಗುರುನಾಥ ಕೊಳ್ಳುರ್, ಈಶ್ವರ ಸಿಂಗ್ ಠಾಕೂರ್, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ, ರಾಮಲೀಲಾ ಸಮಿತಿ ಚಂದ್ರಶೇಖರ ಗಾದಾ, ಉತ್ಸವ ಸಮಿತಿ ಸಂಸ್ಥಾಪಕ ಈಶ್ವರಸಿಂಗ್ ಠಾಕೂರ್, ಮಹೇಶ್ವರ ಸ್ವಾಮಿ ಹಾಗೂ ಅಧಿ ಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್