ರೈತರ ಬದುಕು ನುಂಗಿದ ಕಾರಂಜಾ ಹಿನ್ನೀರು; 2 ಸಾವಿರ ಎಕರೆ ನೀರು ಪಾಲು

ಮರಖಲ, ಬೋತಗಿ, ಮರಕುಂದಾ ಮತ್ತು ಮೊಗದಾಳ್‌ ಗ್ರಾಮದ ರೈತರು ಸಂಕಷ್ಟಕ್ಕೀಡಾಗಿದ್ದಾರೆ

Team Udayavani, Jan 25, 2021, 4:05 PM IST

ರೈತರ ಬದುಕು ನುಂಗಿದ ಕಾರಂಜಾ ಹಿನ್ನೀರು; 2 ಸಾವಿರ ಎಕರೆ ನೀರು ಪಾಲು

ಬೀದರ: ಹುಲುಸಾಗಿ ಕಡಲೆ, ಕಬ್ಬು ಬೆಳೆದು ಕೈತುಂಬ ದುಡ್ಡು ಕಾಣುತ್ತಿದ್ದ ನೂರಾರು ರೈತರು ಹಿನ್ನೀರಿನ ಸಂಕಟದಿಂದ ದಿಗಿಲುಗೊಂಡಿದ್ದಾರೆ. ವರ್ಷ ಪೂರ್ತಿ ಹೊಟ್ಟೆ ತುಂಬಿಸುತ್ತಿದ್ದ ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಿ ಅನ್ನದಾತರನ್ನು ಅಕ್ಷರಶಃ ಸಂತ್ರಸ್ತರನ್ನಾಗಿಸಿದೆ. ಇದು ನೆಲ ನುಂಗಿ-ರೈತರ ಬದುಕು ಕಿತ್ತುಕೊಂಡ ಕಾರಂಜಾ ಜಲಾಶಯದ ಹಿನ್ನೀರಿನ ಕರುಣಾಜನಕ ಕಥೆ.

ಜಿಲ್ಲೆಯ ರೈತರಿಗೆ ಜೀವನಾಡಿ ಆಗಿರುವ “ಕಾರಂಜಾ’ ಈ ಭಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತ ಕುಟುಂಬಗಳನ್ನು ಮಾತ್ರ ಕಣ್ಣೀರಲ್ಲೇ ಕೈತೊಳೆಯುವಂತೆ ಮಾಡಿದೆ. ಜಲಾಶಯದ ಹಿನ್ನೀರಿನಿಂದ 10ಕ್ಕೂ ಹೆಚ್ಚು ಗ್ರಾಮಗಳ ಸ್ವಾಧೀನವಲ್ಲದ ಎರಡು ಸಾವಿರಕ್ಕೂ ಅ ಧಿಕ ಜಮೀನು ನೀರು ಪಾಲಾಗಿದ್ದು, ಕೃಷಿಕರ ನೆಮ್ಮದಿಯನ್ನೇ ಕಸಿದುಕೊಂಡಿದೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸ್ವಂತ ಜಮೀನಿನಲ್ಲಿ ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತರು ಈಗ ಬೇರೆಡೆ ಕೂಲಿ ಮಾಡಬೇಕಾದ ಸ್ಥಿತಿ ಇದೆ.

ಕೆಲ ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದ ಕಾರಂಜಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನಾಲ್ಕು ವರ್ಷಗಳ ಬಳಿಕ ಕಾರಂಜಾ ಒಡಲು ಮೈದುಂಬಿಕೊಂಡಿದ್ದರಿಂದ ಮೊದಲು ಸಂತಸಪಟ್ಟಿದ್ದ ರೈತರು ಇದೀಗ ದಿಕ್ಕು ತೋಚದವರಂತಾಗಿದ್ದಾರೆ. ಜಲಾಶಯದ ನೀರು ಹೊರಬಿಟ್ಟರೂ ಒಳಹರಿವು
ಜಾಸ್ತಿಯಾಗಿರುವುದರಿಂದ ನೀರಿನ ಸಂಗ್ರಹ 7.56 ಟಿಎಂಸಿ ಮಟ್ಟಕ್ಕೇರಿದ್ದು, (ಆ.24ಕ್ಕೆ (6.73) ಲೈವ್‌ ಗ್ರಹ ಇದೆ) ಇದರಿಂದ ನೂರಾರು ರೈತರ ಜಮೀನಿಗೆ
ನೀರು ನುಗ್ಗಿ ಸಾಕಷ್ಟು ಬೆಳೆ ಹಾನಿಯಾಗಿದೆ.

ಬೀದರ ದಕ್ಷಿಣ ಮತ್ತು ಹುಮನಾಬಾದ ಕ್ಷೇತ್ರದ ಬಗದಲ್‌, ಬಾಪುರ್‌, ನಿಡವಂಚಾ, ಬಂಬುಳಗಿ, ರೇಕುಳಗಿ, ಹೊಚಕನಳ್ಳಿ, ಖೇಣಿ ರಂಜೋಳ, ಹಿಲಾಲಪುರ, ಮರಖಲ, ಬೋತಗಿ, ಮರಕುಂದಾ ಮತ್ತು ಮೊಗದಾಳ್‌ ಗ್ರಾಮದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಸೊಯಾ, ಹೆಸರು ನೀರು ಪಾಲಾಗಿದ್ದರೆ, ಈಗ ಕಡಲೆ, ಕಬ್ಬು ಮತ್ತು ತೋಟಗಾರಿಕೆ ಬೆಳೆ ನೀರಿನಿಂದ ಜಲಾವೃತವಾಗಿ ಕೊಳೆತು ಹೋಗುತ್ತಿವೆ. ಕೆಲವೆಡೆ ನೀರಿನಿಂದ ದಾರಿ ಇಲ್ಲದೇ
ಕಟಾವಿಗೆ ಬಂದ ಕಬ್ಬು ಕಾರ್ಖಾನೆಗೆ ಸಾಗಿಸಲು  ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿ, ಹಿನ್ನೀರಿನಿಂದಾಗಿ ಅಂದಾಜು 100 ಕೋಟಿ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಆದರೆ, ಬೆಳೆ ಪರಿಹಾರ ಮಾತ್ರ ರೈತರ ಕೈಸೇರಿಲ್ಲ. ಕೆಲವರಿಗೆ ಬಂದರೂ ಮೂರ್‍ನಾಲ್ಕು ಸಾವಿರ ರೂ. ಬಂದಿದೆ.

ಇನ್ನು ಹೆಚ್ಚುವರಿ ಜಮೀನಿನಲ್ಲಿ ಹಿನ್ನೀರು ಆವರಿಸಿ ಸಂಕಷ್ಟ ಎದುರಿಸುತ್ತಿರುವ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ.

ಸಂತ್ರಸ್ತರ ಪರಿಹಾರ ಕಗ್ಗಂಟು ಜಿಲ್ಲೆಯ ಏಕೈಕ ಜಲಾಶಯ ಕಾರಂಜಾಗೆ ಜಮೀನು ನೀಡಿದ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ವಿಷಯ ಕಗ್ಗಂಟಾಗಿಯೇ ಉಳಿದಿದ್ದು, ಎಲ್ಲ ಸರ್ಕಾರಗಳು ಕೇವಲ ಭರವಸೆಯನ್ನೇ ನೀಡುತ್ತ ಬಂದಿವೆ. 1981-82ರಲ್ಲಿ ಕೇವಲ ಮೂರು ಸಾವಿರ ರೂ.ಗೆ ಎಕರೆಯಂತೆ 15 ಸಾವಿರ ಎಕರೆ ಭೂಮಿ ಸ್ವಾ ಧೀನಪಡಿಸಿಕೊಂಡಿದ್ದ ಸರ್ಕಾರ ನಂತರ ಕೋರ್ಟ್‌ ಮೆಟ್ಟಿಲೇರಿದ ಕೆಲ ರೈತರಿಗೆ ಎಕರೆಗೆ 7-8 ಲಕ್ಷ ರೂ. ಪರಿಹಾರ ಒದಗಿಸಿದೆ. ಇನ್ನುಳಿದ ರೈತರ ಭೂಮಿಗೂ ಅದೇ ಮಾದರಿ ಪರಿಹಾರ ನೀಡಬೇಕೆಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ನಂತರ 2015ರಲ್ಲಿ ಹಿನ್ನೀರಿಗಾಗಿ 1200 ಎಕರೆ ಭೂಮಿ ಸ್ವಾ ಧೀನಪಡಿಸಿಕೊಂಡ ಸರ್ಕಾರ 3 ರಿಂದ 12 ಲಕ್ಷ ರೂ. ಪರಿಹಾರ ಕೊಟ್ಟು ರೈತರಲ್ಲೇ ತಾರತಮ್ಯ ಮಾಡಿದೆ. ಈ ಒತ್ತುವರಿ ಜಮೀನಿಗೂ ಎಕರೆಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂಬ ಒತ್ತಾಯ ಇದೆ.

ಅನುಭವ ಮಂಟಪಕ್ಕೆ ನೂರಾರು ಕೋಟಿ ರೂ. ನೀಡುವ ಸರ್ಕಾರಕ್ಕೆ ರೈತರ ಗೋಳು ಕೇಳುತ್ತಿಲ್ಲ. ಕಾರಂಜಾ ಹಿನ್ನೀರಿನಿಂದಾಗಿ ಸ್ವಾಧೀನವಲ್ಲದ ಎರಡು ಸಾವಿರ ಎಕರೆ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಂಡು ಎಕರೆಗೆ 25 ರಿಂದ 30 ಲಕ್ಷ ರೂ. ಪರಿಹಾರ ನೀಡಲಿ, ಇಲ್ಲವೇ ಹಿನ್ನೀರು ನಿಲ್ಲದಂತೆ ವೈಜ್ಞಾನಿಕ ಕ್ರಮ ಕೈಗೊಳ್ಳಲಿ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜ.25ರಿಂದ ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ.

ಚಂದ್ರಶೇಖರ ಪಾಟೀಲ ಹೊಚಕನಳ್ಳಿ,
ಅಧ್ಯಕ್ಷರು, ಕಾರಂಜಾ ಮುಳುಗಡೆ
ಸಂತ್ರಸ್ತರ ಹಿತರಕ್ಷಣಾ ಸಮಿತಿ

*ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.