ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್


Team Udayavani, Dec 9, 2021, 3:01 PM IST

27peanut

ಮುದಗಲ್ಲ: ಸತತ ಮಳೆಯಿಂದ ಹಾಳಾದ ತೊಗರಿ ಕಟಾವು ಮಾಡುವ ರೈತರು ಯಂತ್ರದ ಮೊರೆ ಹೋಗಿದ್ದರಿಂದ ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್‌ ಬಂದಿದೆ.

ಮುದಗಲ್ಲ ಹೊಬಳಿ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಬಂದ ತೊಗರಿಗೆ ಹೂವು, ಕಾಯಿ ಸಂದರ್ಭದಲ್ಲಿ ಫಂಗಸ್‌ ಮತ್ತು ಸಿಡಿ ರೋಗಕ್ಕೆ ತುತ್ತಾಗಿತ್ತು. ಅಳಿದುಳಿದ ತೊಗರಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬೆಂಬಿಡದ ಮಳೆ ಮತ್ತು ಮುಸುಕಿನ ವಾತಾವರಣದಿಂದ ತೊಗರಿ ಕಾಯಿಯೊಳಗೆ ಮೊಳಕೆಯೂಡೆದು ರೈತರು ನಷ್ಟ ಅನುಭವಿಸುವಂತಾಗಿತ್ತು. ಒಂದು ವಾರದಿಂದ ಬಿಸಿಲು ಕಾಣಿಸಿಕೊಂಡಿದ್ದರಿಂದ ತೊಗರಿ ಕಟಾವಿಗೆ ಕೂಲಿಕಾರರ ಕೊರತೆ ಕಾಡಿದ ಕಾರಣ ರೈತರು ಅನಿವಾರ್ಯವಾಗಿ ತೊಗರಿ ಕಟಾವು ಯಂತ್ರಗಳ ದುಂಬಾಲು ಬಿದ್ದಿದ್ದಾರೆ.

ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಜ್ಯದಲ್ಲಿನ ಸುಮಾರು 80ಕ್ಕೂ ಹೆಚ್ಚು ತೊಗರಿ ಕಟಾವು ಯಂತ್ರಗಳು ಬೀಡು ಬಿಟ್ಟಿವೆ. ಎಕರೆಗೆ 1200ರೂ.ದಿಂದ 1300ರೂ ವರೆಗೆ ಕಟಾವು ಮಾಡಲಾಗುತ್ತಿದೆ ಎಂದು ತೊಗರಿ ಬೆಳೆದ ಶಂಕ್ರಪ್ಪ, ಶಂಭುಲಿಂಗಪ್ಪ, ಹನುಮಂತಪ್ಪ, ಶರಣಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ನಾಗಲಾಪೂರ, ಆಮದಿಹಾಳ, ಪಿಕಳಿಹಾಳ, ಹೂನೂರ, ಬನ್ನಿಗೋಳ, ಕಾಚಾಪೂರ, ಕನಸಾವಿ, ಮೆದಕಿನಾಳ, ತಿರ್ಥಭಾವಿ, ಬೈಲಗುಡ್ಡ, ಮೂಡಲದಿನ್ನಿ, ಸುಲ್ತಾನಪೂರ, ಮಟ್ಟೂರ, ತೆರೆಭಾವಿ, ಬುದ್ದಿನ್ನಿ, ಹಡಗಲಿ, ಕನ್ನಾಳ, ಜಕ್ಕರಮಡು ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 2-3ಯಂತ್ರಗಳು ಟಿಕಾಣಿ ಹೂಡಿವೆ.

ಇದನ್ನೂ ಓದಿ:ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರ ಅಸ್ತು; 13 ತಿಂಗಳ ರೈತರ ಹೋರಾಟ ಕೊನೆಗೂ ಅಂತ್ಯ

ಇಳುವರಿ ಕುಂಠಿತ

ಸತತ ಮಳೆಯಿಂದ ತೊಗರಿ ಇಳುವರಿ ಕುಂಠಿತವಾಗಿದೆ. ಕಾಯಿಯೊಳಗೆ ಮೊಳಕೆಯೊಡೆದು ನಷ್ಟವಾಗಿದ್ದು ಒಂದೆಡೆಯಾದರೆ, ತಿಂಗಳ ಹಿಂದೆಯೇ ಕಟಾವು ಮಾಡಬೇಕಾದ ತೊಗರಿ ತಿಂಗಳ ನಂತರ ಕಟಾವು ಮಾಡಿದ್ದರಿಂದ ಕಾಯಿಯೊಳಗಿನ ಕಾಳಿಗೆ ಹಾನಿಯಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೊಗರಿ ಹೆಚ್ಚು ನಷ್ಟವಾಗಿದೆ. ಸುಮಾರು 2600 ಹೆಕ್ಟೇರ್‌ ಪ್ರದೇಶ ತೊಗರಿ ನಷ್ಟವಾಗಿದೆ. ಸರಕಾರಕ್ಕೆ ತೊಗರಿ ವರದಿ ಸಲ್ಲಿಸಲಾಗಿದೆ. ಆಕಾಶ ದಾನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಮುದಗಲ್ಲ

1ಎಕರೆಗೆ 6 ರಿಂದ 7ಕ್ವಿಂಟಲ್‌ ತೊಗರಿ ಇಳುವರಿ ಬರಬೇಕಿತ್ತು. ಆದರೆ 3ರಿಂದ 4 ಕ್ವಿಂಟಲ್‌ ಬರುತ್ತಿದೆ. ಸರಕಾರ ಎಕರೆಗೆ 10 ಸಾವಿರ ರೂ.ಬೆಳೆ ಪರಿಹಾರ ನೀಡಬೇಕು. ಶಂಕ್ರಪ್ಪ ನಾಯ್ಕ, ನಷ್ಟ ಅನುಭವಿಸಿದ ರೈತ

ಸುಮಾರು 7 ಸಾವಿರ ಎಕರೆ ತೊಗರಿ ಕಟಾವು ಮಾಡಿದ್ದೇನೆ. ರೈತರಿಗೆ ಇಳುವರಿ ಕಡಿಮೆಯಾಗಿದೆ. ಪರಶುರಾಮ, ಯಂತ್ರದ ಮಧ್ಯವರ್ತಿ

-ದೇವಪ್ಪ ರಾಠೊಡ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.