ರಸಗೊಬ್ಬರ ಅಂಗಡಿ ದಾಖಲೆ ಪರಿಶೀಲಿಸಿದ ಕೃಷಿ ಅಧಿಕಾರಿಗಳು
Team Udayavani, Dec 9, 2021, 3:09 PM IST
ದೇವದುರ್ಗ: ಪಟ್ಟಣದ ವಿನಾಯಕ ಟ್ರೇಡರ್ಸ್, ಎಂಎಸ್ ಪಾಟೀಲ್ ಫರ್ಟಿಲೈಸರ್ಸ್, ಶ್ರೀದೇವಿ ಟ್ರೇಡರ್ಸ್, ಶ್ರೀಗುರು ಟ್ರೇಡರ್ಸ್ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಸಹಾಯಕ ಕೃಷಿ ನಿರ್ದೇಶಕಿ ಡಾ| ಎಸ್. ಪ್ರಿಯಾಂಕ ಭೇಟಿ ನೀಡಿ ದಾಖಲಾತಿ ಪರಿಶೀಲನೆ ನಡೆಸಿದರು.
ಈ ವೇಳೆ ಪರವಾನಗಿ ಮತ್ತು ಸಮರ್ಪಕ ದಾಖಲೆಗಳಿಲ್ಲದೇ ತೆರೆಯಲಾದ ಎಂ.ಎಸ್ ಪಾಟೀಲ್ ಫರ್ಟಿಲೈಸರ್ಸ್ ಹಾಗೂ ಶ್ರೀದೇವಿ ಟ್ರೇಡರ್ಸ್ ಅಂಗಡಿಗಳನ್ನು ಮುಚ್ಚಿಸಲಾಯಿತು. ನ್ಯೂನತೆಗಳನ್ನು ಸರಿಪಡಿಸಿಕೊಂಡು ನಂತರ ಪರವಾನಗಿ ನೀಡಲಾಗುವುದು ಎಂದು ಅಂಗಡಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಇನ್ನುಳಿದ ಕೆಲ ಅಂಗಡಿಗಳಲ್ಲಿ ದರಪಟ್ಟಿ, ದಾಸ್ತಾನು ಪುಸ್ತಕ ದಾಖಲೆಗಳು ಇಲ್ಲದಿರುವುದರಿಂದ ಏಳು ದಿನದ ಒಳಗೆ ಉತ್ತರ ನೀಡುವಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದರು. ಯಾವುದೇ ಕಾರಣಕ್ಕೆ ರೈತರಿಗೆ ಮೋಸ ಆಗದಂತೆ ಅಂಗಡಿ ಮಾಲೀಕರು ಎಚ್ಚರ ವಹಿಸಬೇಕು. ಪದೇ-ಪದೇ ಇಂತಹ ತಪ್ಪು ಘಟನೆಗಳು ಆಗದಂತೆ ನಿಗಾವಹಿಸಬೇಕು. ಪ್ರತಿಯೊಬ್ಬ ರಸಗೊಬ್ಬರ ಮಾರಾಟ ಅಂಗಡಿ ಮಾಲೀಕರು ದಾಸ್ತಾನು ದರದ ಪಟ್ಟಿಯನ್ನು ಅಂಗಡಿ ಮುಂಭಾಗದಲ್ಲಿ ಬೋರ್ಡ್ ಹಾಕಬೇಕು. ಕೃಷಿ ಇಲಾಖೆ ನಿಯಮಗಳು ತಪ್ಪದೇ ಪಾಲಿಸಬೇಕು ಎಂದು ಮಾಲೀಕರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ