ತೊಗರಿ ಖರೀದಿಯಲ್ಲಿ ಅಕ್ರಮ: ತನಿಖೆಗೆ ಆಗ್ರಹ
Team Udayavani, Feb 25, 2020, 12:20 PM IST
ಭಾಲ್ಕಿ: ಬೀದರ ಜಿಲ್ಲಾದ್ಯಂತ ತೊಗರಿ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್ಗೆ 100 ರೂ. ವಸೂಲಿ ಮಾಡುವುದರೊಂದಿಗೆ ಅವ್ಯವಹಾರ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿದ ಕರವೇ ಪದಾಧಿಕಾರಿಗಳು, ತೊಗರಿ ಖರೀದಿ ಕೇಂದ್ರ ಆರಂಭ ಮಾಡಿರುವುದು ರೈತರಿಗೆ ಸಂತೋಷವಾದರೂ, ಸಹಕಾರ ಸಂಘದವರು ಬಡ ರೈತರಿಂದ ಪ್ರತಿ ಕ್ವಿಂಟಲ್ಗೆ 100 ರೂ. ಪಡೆಯುತ್ತಿರುವುದು ವಿಶಾದದ ಸಂಗತಿಯಾಗಿದೆ. ಈ ಕುರಿತು ಕರವೇ ಪ್ರತಿಭಟನೆ ನಡೆಸಿದರೆ, ಸಹಕಾರ ಸಂಘಗಳ ಕಾರ್ಯದರ್ಶಿಗಳು ಇಲ್ಲಸಲ್ಲದ ಸಬೂಬು ಹೇಳಿ ರೈತರನ್ನು ಸುಲಿಯುತ್ತಲಿದ್ದಾರೆ. ವೇರ್ಹೌಸ್ ವ್ಯವಸ್ಥಾಪಕರಿಗೆ, ಹಮಾಲಿ ಕೂಲಿಯಾಳುಗಳಿಗೆ, ಖಾಲಿ ಗೋಣಿಚೀಲ ತರಲು, ವಾಹನ ಚಾಲಕರಿಗೆ ನೀಡಲು ಹಣ ಬೇಕು. ಅದಕ್ಕಾಗಿ ರೈತರ ಹತ್ತಿರ ಹಣ ಪಡೆಯುತ್ತಿದ್ದೇವೆ ಎಂದು ನೇರವಾಗಿಯೇ ತಿಳಿಸುತ್ತಾ ಸುಲಿಗೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಕಿಡಿ ಕಾರಿದ್ದಾರೆ. ರೈತರ ಹತ್ತಿರ ಹಣ ಪಡೆಯಬಾರದು ಎಂದು ಸರ್ಕಾರದ ಆದೇಶವಿದ್ದರೂ, ಸಹಕಾರ ಸಂಘದ ಪದಾಧಿಕಾರಿಗಳು ರೈತರನ್ನು ರಾಜಾರೋಷವಾಗಿ ಸುಲಿಯತ್ತಲಿದ್ದಾರೆ. ಕಾರಣ ತಕ್ಷಣವೆ ಇತ್ತಕಡೆ ಗಮನ ಹರಿಸಿ ರೈತರ ಸುಲಿಗೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ರೈತರು ಸಾಗಿಸಿದ ಉದ್ದು, ಹೆಸರು ಬೆಳೆಯನ್ನು ಸರ್ಕಾರ ಖರೀದಿಸಿದ್ದು, ಮೂರು ವರ್ಷಗಳಿಂದ ಸರ್ಕಾರದಿಂದ ಕೆಲ ರೈತರಿಗೆ ಹಣ ಜಮಾ ಮಾಡಿಲ್ಲ. ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ರೈತರಿಗೆ ಎಲ್ಲ ಬಾಕಿ ಹಣ ಕೊಡಬೇಕು ಎಂದು ಆಗ್ರಹಿಸಿದರು. ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ, ರಮೇಶ ಚಿದ್ರಿ, ಸಂಗಮೇಶ ಗುಮ್ಮೆ, ಮಾಳಸಕಾಂತ , ಅನೀಲ ದಾಡಗೆ, ಸಂತೋಷ ಪಾಟೀಲ, ಜಗನಾಥ ಪಾತ್ರೆ, ಮಹಾದೇವ ಸೂರ್ಯವಂಶಿ, ಸುದೀಪ ತುಗಾವೆ, ಕಿರಣ ಪಾಟೀಲ, ಬಂಡೆಪ್ಪಾ ಕರಸಣ್ಣಾ, ಮಹೇಶ ಬಿರಾದಾರ, ಓಂ ಬಿಜಿಪಾಟೀಲ, ಅಜಯ ಕರಸಣ್ಣಾ, ಸಂದೀಪ, ನಾಗೇಶ, ಶಿವಕುಮಾರ, ವರುಣ ಸೇರಿದಂತೆ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!