ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
Team Udayavani, Nov 12, 2019, 1:48 PM IST
ಕಮಲನಗರ: ಪಟ್ಟಣದ ರೈಲ್ವೆ ಗೇಟ್ ಬಳಿಯ 3ನೇ ವಾರ್ಡ್ನಲ್ಲಿ ಸುಮಾರು 5 ತಿಂಗಳುಗಳಿಂದ ಕುಡಿಯುವನೀರಿನ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಮವಾರ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಐದು ತಿಂಗಳುಗಳಿಂದ ಬಡಾವಣೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಆದರೆ, ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ. ದಿನ ನಿತ್ಯದ ಜೀವನ ಕಷ್ಟಕರವಾಗಿದೆ. ಗ್ರಾಪಂ ಅವ್ಯವಸ್ಥೆಯಿಂದ ನೀರು ಸರಬರಾಜು ಮಾಡದಿರುವುದರಿಂದ ಸಂಕಷ್ಟ ಹೆಚ್ಚಿದೆ ಎಂದು ಮಹಿಳೆಯರು ಆರೋಪಿಸಿದರು.
ಬಡಾವಣೆಯಲ್ಲಿ ಕೊಳವೆ ಬಾವಿ ಇದೆ. ಕಳೆದ ವರ್ಷ ಮಳೆ ಅಭಾವದಿಂದ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿತ್ತು. ಮೋಟಾರ್ ಸಹ ಕೆಟ್ಟು ಹೋಗಿತ್ತು. ಇದರಿಂದ ನೀರಿನ ಸಮಸ್ಯೆ ಗಂಭಿರವಾಗಿದ್ದ ಕಾರಣ ಪಂಚಾಯತದಿಂದ ಮೂರು-ನಾಲ್ಕು ದಿನಗಳಿಗೊಮ್ಮೆ ನೀರಿನ ಟ್ಯಾಂಕರ್ ಕಳುಹಿಸಿತ್ತಿದ್ದರು. ಆ ನೀರು ಬಡಾವಣೆಯ ಜನರಿಗೆ ಸಾಕಾಗುತ್ತಿದ್ದಿಲ್ಲ. ಈಗ ಅದೂ ಇಲ್ಲದೇ ಬೇರೆ ಬೇರೆ ವಾರ್ಡ್ಗಳಿಗೆ ತೆರಳಿ ಇತರ ಕೊಳವೆಬಾವಿಗಳಿಂದ ನೀರು ತರುವಂತಾಗಿದೆ. ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ಕೊಳವೆಬಾವಿಯಲ್ಲಿ ನೀರಿದ್ದರೂ ಮೋಟಾರ್ ದುರುಸ್ತಿ ಮಾಡದಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯ ಮಹಿಳೆಯರಾದ ನಾಗಮ್ಮಾ ವಡ್ಡರ, ನರಸಮ್ಮಾ ವಡ್ಡರ, ಮಹೇರೂನಬಿ ಖುರೇಶಿ, ಫರಜನಾ ಶೇಖ, ಅರ್ಷಲಿ ಬಿರಾದಾರ, ಮೀನಾ ಬಿರಾದಾರ, ಅರ್ಷದ ಶೇಖ, ಮೋಯಿನ ಮನಿಯಾರ, ಸಲ್ಮಾನ ಖುರೇಶಿ, ಫೇರೋಜ ಬಾಗವಾನ, ಅಶೋಕ ಹಡಪದ, ಅಮಜತ ಶೇಖ, ಆದಮ, ಅಲಿಮೋದ್ದಿನ ಬಾಗವಾನ, ಅಖೀಲ ಬಾಗವಾನ, ಶಿವಪ್ಪಾ ಬಿರಾದಾರ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ