ಸಾವಿತ್ರಿಬಾಯಿ ಫುಲೆ ಜಯಂತಿ ಶಿಕ್ಷಕಿಯರ ದಿನವಾಗಲಿ
Team Udayavani, Jan 5, 2018, 12:38 PM IST
ಬೀದರ: ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ, ಹಿಂದುಳಿದ ಶೋಷಿತ ಸಮಾಜದ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ
ಶಿಕ್ಷಣದ ಬೀಜ ಬಿತ್ತಿದ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಶಿಕ್ಷಕಿಯರ ದಿನವಾಗಿ ಆಚರಿಸಬೇಕು ಎಂದು ವೇದಿಕೆ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಹೇಳಿದರು.
ವಿದ್ಯಾನಗರ ಕಾಲೋನಿಯ ಬೌದ್ಧ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದಿಂದ ಸಾವಿತ್ರಿಬಾಯಿ
ಫುಲೆ ಅವರ 187ನೇ ಜಯಂತಿ ನಿಮಿತ್ತ ಆಯೋಜಿಸಿದ್ದ “ಅರಿವಿನ ತಾಯಿಗೆ ನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರಯ ಮಾತನಾಡಿದರು.
ಸಂಗೀತಾ ಓಂಕಾರ ಮಾತನಾಡಿ, ದೇಶದ ಮಹಿಳೆಯರ ಏಳ್ಗೆಗಾಗಿ ದುಡಿದ ಸಾವಿತ್ರಿಬಾಯಿ ಫುಲೆ ಅವರ ಜೀವನ
ಚರಿತ್ರೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ವಿಧವೆಯರ ಸ್ವಾಭಿಮಾನ ಎತ್ತಿ ಹಿಡಿದವರು
ಸಾವಿತ್ರಿಬಾಯಿ. ನಾವೆಲ್ಲರೂ ವಿಧವೆಯರಿಗೆ ಗೌರವ ನೀಡಿದಾಗ ಮಾತ್ರ ಫುಲೆ ಅವರ ಕನಸು ನನಸಾಗುತ್ತದೆ ಎಂದು ಹೇಳಿದರು.
ಭಾರತೀಯ ಬೌದ್ಧ ಮಹಾಸಭೆ ಜಿಲ್ಲಾಧ್ಯಕ್ಷ ಜಗನಾಥ ಬಡಿಗೇರ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಮತ್ತು
ಜ್ಯೋತಿಬಾ ಫುಲೆ ಅವರು ತ್ಯಾಗ ಬಲಿದಾನ ನೀಡಿದ ಮಹಿಳೆಯರು ಮತ್ತು ವಿಧವೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ನೀಡಿದ ಕೊಡುಗೆ ಕುರಿತು ಮಾತನಾಡಿದರು.
ತಾಲೂಕು ಸಂಚಾಲಕ ಬಕ್ಕಪ್ಪಾ ದಂಡಿನ್ ಕಾಂತ್ರಿ ಗೀತೆಗಳನ್ನು ಹಾಡಿದರು. ಪ್ರಮುಖರಾದ ಶರಣಪ್ಪಾ ಕುದುರೆ,
ಎಸ್.ಬಿ. ಕುಚಬಾಳ, ಲಕ್ಷ್ಮಣರಾವ್ ಕಾಂಚೆ, ಇಂದುಮತಿ ಸಾಗರ, ಗಂಗಮ್ಮಾ ಫುಲೆ, ಅಂಜಮ್ಮಾ ರೆಡ್ಡಿ, ಶಿವರಾಜ ಪೂಜಾರಿ, ಗೌತಮ ಮುತಂಗಿಕರ್ ಇದ್ದರು. ಅರುಣ ಪಟೇಲ ನಿರೂಪಿಸಿದರು. ಶಾರದಾ ಆಳಂದಕರ್ ಸ್ವಾಗತಿಸಿದರು. ಮೀನಾಕ್ಷಿ ಸಾಗರ ವಂದಿಸಿದರು.
ಸಾವಿತ್ರಿಬಾಯಿ ಫುಲೆ ಕುರಿತು ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವೈಶಾಲಿ ಸಾಗರ,
ದ್ವಿತೀಯ ಸ್ಥಾನ ಪಡೆದ ಶರಣ ಶಿವರಾಜ ಪೂಜಾರಿ ಮತ್ತು ತೃತೀಯ ಸ್ಥಾನ ಪಡೆದ ಮಧು ಫುಲೆ, ಅಂಜಮ್ಮಾ ರೆಡ್ಡಿ ಅವರಿಗೆ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ