ಸೌರ ಶಕ್ತಿಯಿಂದ ಓಡುತ್ತೆ ಈ ಸೈಕಲ್!
Team Udayavani, Aug 15, 2021, 2:09 PM IST
ಬೀದರ: ನಗರದ ಗುರುನಾನಕ್ ದೇವ್ಇಂಜಿನಿಯರಿಂಗ್ ಕಾಲೇಜಿನ ಅಂತಿಮವರ್ಷದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ವಿಭಾಗದ ವಿದ್ಯಾರ್ಥಿಗಳು ತೈಲ ಅಷ್ಟೇ ಅಲ್ಲನಿರ್ವಹಣೆಗೂ ನಯಾಪೈಸೆ ಖರ್ಚಿಲ್ಲದ ಸೌರವಿದ್ಯುತ್ ಚಾಲಿತ ಪರಿಸರ ಸ್ನೇಹಿ ಸೈಕಲ್(ಬೈಕ್)ಆವಿಷ್ಕರಿಸಿದ್ದಾರೆ.
ವಿಭಾಗದ ಎಚ್ಒಡಿ ಡಾ|ಕೆ.ನೀಲಶೆಟ್ಟಿಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಚಿನ್ರಾಠೊಡ, ಉಜಾಲಾ ರಾಠೊಡ, ವೈಷ್ಣವಿದೇಶಮುಖ ಹಾಗೂ ಅಖೀಲಾ ರೆಡ್ಡಿ ಕಾಲೇಜು ಪ್ರೊಜೆಕ್ಟ್ಗಾಗಿ ಈ ಸೋಲಾರ್ ಬೈಸಿಕಲ್ಅಭಿವೃದ್ಧಿಪಡಿಸಿದ್ದಾರೆ.ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಪರ್ಯಾಯ ಇಂಧನ ಚಾಲಿತ ವಾಹನಗಳಅಭಿವೃದ್ಧಿಯತ್ತ ಹೊಸ ಹೊಸ ಪ್ರಯತ್ನಗಳುನಡೆಯುತ್ತಲೇ ಇವೆ. ಈ ವಿದ್ಯಾರ್ಥಿಗಳ ತಂಡತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇಬಳಸಿಕೊಂಡು ಸೈಕಲ್ ರೂಪಿಸಿದೆ.
ನೋಡಲಷ್ಟೇ ಅಲ್ಲ ಚಲಾಯಿಸಲು ಬೈಕ್ನಂತೆಕಾಣುತ್ತಿದೆ.ಈ ಸೈಕಲ್ ಅನ್ನು ಒಂದು ತಿಂಗಳಲ್ಲಿತಯಾರಿಸಿರುವ ವಿದ್ಯಾರ್ಥಿಗಳು ಒಟ್ಟು 25ಸಾವಿರ ರೂ. ಖರ್ಚು ಮಾಡಿದ್ದಾರೆ. ಇದಕ್ಕೆಬೇಕಾದ ಸೋಲಾರ್ ಪ್ಯಾನಲ್, ಬ್ಯಾಟರಿಸೇರಿದಂತೆ ಕಚ್ಚಾ ವಸ್ತುಗಳನ್ನು ಹೈದ್ರಾಬಾದ್ನಲ್ಲಿಖರೀದಿಸಿದ್ದರೆ, ಗುಜರಿ ಅಂಗಡಿಯಿಂದ ಸೈಕಲ್ಪಡೆದಿದ್ದಾರೆ. 48 ವೋಲ್ಟ್ ಮೋಟಾರ್, 12ವೋಲ್ಟ್- 25 ವ್ಯಾಟ್ ಸಾಮರ್ಥ್ಯದ ಒಂದುಸೋಲಾರ್ ಪ್ಯಾನಲ್ ಬಳಸಿದ್ದಾರೆ. ಸೌರವಿದ್ಯುತ್ನಿಂದ ಓಡಾಡುವ ಈ ಸೈಕಲನ್ನುಬಿಸಿಲಿಲ್ಲದಿದ್ದಾಗ 12 ವೋಲ್ಟ್ನ ನಾಲ್ಕುಬ್ಯಾಟರಿಗಳನ್ನು ಚಾರ್ಜ್ ಮಾಡಿಯೂನಡೆಸಬಹುದು.
ಒಂದು ವೇಳೆ ಸೋಲಾರ್,ಬ್ಯಾಟರಿಗಳು ಕೈಕೊಟ್ಟರೂ ಕಾಲಿನಿಂದತುಳಿದುಕೊಂಡು ಸೈಕಲ್ ಚಲಾಯಿಸಿಕೊಂಡುಮನೆಗೆ ತಲುಪಬಹುದು.ಈ ಬ್ಯಾಟರಿಗಳನ್ನು ನಾಲ್ಕು ಗಂಟೆಗಳಕಾಲ ಚಾರ್ಜ್ ಮಾಡಿದರೆ 30 ಕಿ.ಮೀ.ವರೆಗೂ ಓಡಾಡಬಹುದು. ಜತೆಗೆಸೋಲಾರ್ ಅಳವಡಿಸಿರುವ ಕಾರಣ ಸೈಕಲ್ಚಾಲನೆಯಾಗುತ್ತಲೇ ಬ್ಯಾಟರಿಗಳು ಚಾರ್ಜ್ಆಗುತ್ತವೆ. ಹೀಗಾಗಿ ಎಷ್ಟು ಮೈಲಿ ಹೋದರೂತೊಂದರೆಯಾಗಲ್ಲ. ಈ ಸೈಕಲ್ ಎಂತಹರಸ್ತೆಯಾದರೂ ಸರಿ ಸಲೀಸಾಗಿ ಓಡುತ್ತದೆಎನ್ನುತ್ತಾರೆ ಸಾಧಕ ವಿದ್ಯಾರ್ಥಿಗಳು.
75 ಕೆ.ಜಿ ಭಾರ ಹೊತ್ತುಕೊಂಡು ಸಾಗಬಲ್ಲಸಾಮರ್ಥ್ಯ ಇದಕ್ಕಿದ್ದು, ಬ್ಯಾಟರಿ ಪ್ರಮಾಣಹೆಚ್ಚಿಸಿದ್ದಲ್ಲಿ ಸಾಮರ್ಥ್ಯವೂ ಅಧಿಕ ಆಗಲಿದೆ. ಪ್ರತಿಗಂಟೆಗೆ 30 ಕಿ.ಮೀ ವೇಗದಲ್ಲಿ ಓಡುವ ಬ್ಯಾಟರಿಚಾಲಿತ ಈ ಸೈಕಲ್ ಇಡೀ ಕಾಲೇಜಿನಲ್ಲಿ ಈಗಮನ್ನಣೆ ಪಡೆದಿದೆ. ಸದ್ಯ ಈ ಸೈಕಲ್ ನೋಡಲುದಿನಕ್ಕೆ ಹತ್ತಾರು ಕಾಲೇಜು ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ.
ಶಶಿಕಾಂತ ಬಂಬುಳಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ