ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮ ಆರಂಭ
Team Udayavani, Apr 12, 2021, 8:10 PM IST
ವಿಜಯಪುರ: ಆರನೇ ವೇತನಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಏಪ್ರಿಲ್ 7ರಿಂದ ಆರಂಭಿಸಿರುವ ಅನಿ ರ್ದಿಷ್ಟಾವಧಿ ಮುಷ್ಕರ 5ನೇ ದಿನವೂ ಮುಂದುವರಿದಿದೆ. ಈ ಮಧ್ಯೆ ಸರ್ಕಾರದ ನಿರ್ದೇಶನದ ಮೇಲೆ ಜಿಲ್ಲೆಯಲ್ಲಿ ಮುಷ್ಕರ ನಿರತರ ವಿರುದ್ಧ ವಿವಿಧ ರೀತಿಯ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಗೆ ಬಿರುಸುಗೊಂಡಿದೆ.
ಈಗಾಗಲೇ ಹಲವು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ, ಮತ್ತೆ ಕೆಲವರನ್ನು ವಿವಿಧ ವಿಭಾಗ, ಘಕಟಗಳಿಗೆ ವರ್ಗಾವಣೆ ಮಾಡಿ, ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ನಾಲ್ವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದು, ಮೂವರ ಬಂಧನವಾಗಿದೆ. ಸೋಮವಾರ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸಂಬಳ ನೀಡದಿರಲು ನಿರ್ಧರಿಸುವಂಥ ಹಲವು ಕಠಿಣ ಕ್ರಮಕ್ಕೆ ಮುಂದಾಗಿದೆ.
ನಾಲ್ವರು ಸೇವೆಯಿಂದಲೇ ವಜಾ: ಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಮುಷ್ಕರಕ್ಕೆ ಬೆಂಬಲಿಸಿದ ಆರೋಪದಲ್ಲಿ 4 ಸಿಬ್ಬಂದಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ. ಮತ್ತೂಂದೆಡೆ 6 ಸಿಬ್ಬಂದಿಯನ್ನು ವಿವಿಧ ಘಟಕ, ವಿಭಾಗಗಳಿಗೆ ವರ್ಗಾಣೆ ಮಾಡಿದ್ದು ರವಿವಾರ ಅವರನ್ನೆಲ್ಲ ವರ್ಗಾವಣೆಗೊಂಡ ಸ್ಥಳಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾದ ವರದಿ ಮಾಡಿಕೊಳ್ಳಲು ಬಿಡುಗಡೆ ಮಾಡಲಾಗಿದೆ.
ನಾಲ್ವರ ವಿರುದ್ಧ ದೂರು-ಮೂವರ ಬಂಧನ: ಈ ಮಧ್ಯೆ ಬಸ್ ಸಂಚಾರ ಸೇವೆಗೆ ತೆರಳುತ್ತಿದ್ದ ಸಿಬ್ಬಂದಿಯ ಕರ್ತವ್ಯಕ್ಕೆ ಜಿಲ್ಲೆಯ ಎರಡು ಕಡೆ ನಾಲ್ವರು ಅಡ್ಡಿಪಡಿಸಿದ ಆರೋಪದಲ್ಲಿ ನಾಲ್ವರು ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ತಾಳಿಕೋಟೆ ನಿಲ್ದಾಣ, ಘಟಕದ ಬಳಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ತಾಳಿಕೋಟೆ ಘಟಕದ ಇಬ್ಬರು ಹಾಗೂ ಮಂಗಳೂರು ವಿಭಾಗದ ಓರ್ವ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಲ್ಲಿನ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.
ಮತ್ತೂಂದೆಡೆ ತಾಳಿಕೋಟೆ ನಿಲ್ದಾಣದಿಂದ ಸಿಂದಗಿ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದ ಬಸ್ನ್ನು ದೇವರಹಿಪ್ಪರಗಿ ಬಳಿ ತಡೆದು, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿರೇಮಠ ಎಂಬ ಚಾಲಕನ ವಿರುದ್ಧ ದೂರು ದಾಖಲಾಗಿದೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಸುದ್ದಿ ತಿಳಿಯುತ್ತಲೇ ಸದರಿ ಆರೋಪಿತ ಚಾಲಕ ಪೊಲೀಸರ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದಾನೆ.
ಇಂದು ಕರ್ತವ್ಯಕ್ಕೆ ಬಂದರೆ ಸಂಬಳ: ಈ ಮಧ್ಯೆ ಮಷ್ಕರ ನಿರತ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸಂಬಳ ನೀಡದಿರಲು ನಿರ್ಧರಿಸಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಸಂಸ್ಥೆಗೆ ಆರ್ಥಿಕ ಆದಾಯವೂ ಇಲ್ಲದೇ, ಪ್ರಯಾಣಿಕರ ಕೊರತೆಯ ಕಾರಣ ಓಡಿಸಿದ ಬಸ್ಗಳೂ ನಿರೀಕ್ಷಿತ ಆದಾಯ ತಂದಿಲ್ಲ. ಇಂತ ಕಾರಣಗಳಿಂದ ಏಪ್ರಿಲ್ 12ರಿಂದ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಸಂಬಳ ನೀಡುವಂತಿಲ್ಲ. ಒಂದೊಮ್ಮೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೋಮವಾರವೇ ಸಂಬಳ ನೀಡುವಂತೆ ಸೂಚಿಸಿದೆ. ಮನೆಗೆ ತೆರಳಿ ಮನವಿ: ಈ ಮಧ್ಯೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮುಷ್ಕರ ನಿರತ ಸಿಬ್ಬಂದಿ ಮನೆ ಮನೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಿದ್ದಾರೆ. ಸೇವೆಗೆ ಬರದಿದ್ದಲ್ಲಿ ಮನೆ ಹಂಚಿಕೆ ರದ್ದು ಮಾಡುವ ತಿಳಿವಳಿಕೆ ನೋಟಿಸ್ ನೀಡಿದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಮನೆಗೆ ತೆರಳಿದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರೀತಿಯಿಂದ, ಒತ್ತಡ ಹೇರುವ ಕೆಲಸದಲ್ಲೂ ನಿರತರಾಗಿದ್ದಾರೆ. ಮನೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೂ ಮೊಬೈಲ್ ಮೂಲಕ ಮಕ್ಕಳೊಂದಿಗೆ ಮಾತನಾಡಿಸಿ ಮುಷ್ಕರ ಬಿಟ್ಟು ಸೇವೆಗೆ ತೆರಳಿ ಎಂದು ಭಾವನಾತ್ಮಕವಾಗಿ ಸಿಬ್ಬಂದಿಯನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಮಿಕ ಮುಖಂಡರ ಜೊತೆ ಸಭೆ: ಮತ್ತೂಂದೆಡೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾ ಧಿಕಾರಿ ನಾರಾಯಣ ಕುರುಬರ ಅವರು ಜಿಲ್ಲೆಯಲ್ಲಿರುವ ಸಾರಿಗೆ ಸಂಸ್ಥೆಯ ಕಾರ್ಮಿಕರ 9 ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.
ಸರ್ಕಾರ ನೀಡಿರುವ ಸೂಚನೆಯಂತೆ ನಿಗಮಗಳ ಆರ್ಥಿಕ ಸ್ಥಿತಿಗತಿ, ಮುಷ್ಕರದಿಂದ ಸಾರ್ವಜನಿಕರಲ್ಲಿ ಮೂಡಿರುವ ಆಕ್ರೋಶ, ಸಂಸ್ಥೆಗೆ ಆದಾಯದ ಕೊರತೆ, ಆರ್ಥಿಕ ನಷ್ಟ, ಕೌಟುಂಬಿಕ ಸಮಸ್ಯೆಗಳ ಉಲ್ಬಣದಂಥ ಸಂಗತಿಗಳನ್ನು ಮುಂದಿಟ್ಟು ಮುಷ್ಕರ ಬಿಟ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ