ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಮುಂದುವರಿದ ಅನಿರ್ದಿಷ್ಟ ಧರಣಿ
Team Udayavani, Dec 22, 2018, 2:57 PM IST
ಮುದ್ದೇಬಿಹಾಳ: ಪಟ್ಟಣದಲ್ಲಿ ನಡೆಯುತ್ತಿರುವ ಹುನಗುಂದ-ಮ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿ ಅಗಲೀಕರಣ ಬೇಡಿಕೆ ಮುಂದಿಟ್ಟು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ 20 ದಿನ ಪೂರೈಸಿದೆ.
ಈ ಮಧ್ಯೆ ಶುಕ್ರವಾರ ಕಾಮಗಾರಿ ನಿರ್ವಹಿಸುತ್ತಿರುವ ಅಶೋಕಾ ಬಿಲ್ಡಕಾನ್ನ ಸಿಬ್ಬಂದಿ, ಕೆಲಸಗಾರರು ಮತ್ತು ಅಂಜುಮನ್ ಕಾಂಪ್ಲೆಕ್ಸ್ ಬಳಿ ಇರುವ ಕೆಲ ಅಂಗಡಿಕಾರರ ಮಧ್ಯೆ ರಸ್ತೆ ಅಗಲದ ಅಳತೆಗೆ ಸಂಬಂಧಿಸಿದಂತೆ ವಾಗ್ವಾದ ನಡೆದು ಆ ಭಾಗದಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ನಡೆಯಿತು.
ಹೋರಾಟಗಾರರ ಬೇಡಿಕೆಯಂತೆ ಈಗಾಗಲೇ ಒಂದು ಬದಿ ರಸ್ತೆಯನ್ನು ಅಗಲೀಕರಣಗೊಳಿಸುವ ಕಾರ್ಯ ನಡೆದಿದೆ. ಇದಕ್ಕಾಗಿ ರಸ್ತೆ ಕೊನೆ ಭಾಗದಲ್ಲಿ ಪುರಸಭೆ ನಿರ್ಮಿಸಿದ್ದ ಚರಂಡಿ ಸ್ಥಳದಲ್ಲೇ ಹೊಸದಾಗಿ ಚರಂಡಿ ನಿರ್ಮಿಸುವ ಕಾರ್ಯವೂ ಪ್ರಗತಿಯಲ್ಲಿದೆ. ರಸ್ತೆಯ ಇನ್ನೊಂದು ಬದಿ ಅಂಜುಮನ್ ಕಾಂಪ್ಲೆಕ್ಸ್ ಹತ್ತಿರ ಶುಕ್ರವಾರ ರಸ್ತೆ ಅಗಲೀಕರಣ ಕಾಮಗಾರಿಗೋಸ್ಕರ ಚರಂಡಿ ನಿರ್ಮಿಸಲು ಕೆಲಸಗಾರರು ಮುಂದಾದಾಗ ಕೆಲವು ಅಂಗಡಿಕಾರರು ತಕರಾರು ತೆಗೆದು ರಸ್ತೆಯ ವಿಬಿಸಿ ಪ್ರೌಢಶಾಲೆ ಎದುರಿನ ಭಾಗದಲ್ಲಿ ಕಡಿಮೆ ಅಗಲ, ಅಂಜುಮನ್ ಕಾಂಪ್ಲೆಕ್ಸ್ ಭಾಗದಲ್ಲಿ ಹೆಚ್ಚು ಅಗಲ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು.
ಕೆಲಸಗಾರರು ರಸ್ತೆ ಅಳತೆ ಮಾಡಿದಾಗ ಎರಡೂ ಕಡೆ ರಸ್ತೆಯ ಅಳತೆ ಒಂದೇ ಆಗಿತ್ತು. ಆದರೂ ತಕರಾರು ಮುಂದುವರಿಸಿದ
ಕೆಲವರು ಮೂಲ ಯೋಜನೆಯಲ್ಲಿ ಎಷ್ಟು ಅಗಲದ ರಸ್ತೆ ಇದೆಯೋ ಅಷ್ಟೇ ರಸ್ತೆ ಮಾಡಿ, ಹೆಚ್ಚಿಗೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಬೇಸತ್ತ ಕೆಲಸಗಾರರು ಕಾಮಗಾರಿ ಸ್ಥಗಿತಗೊಳಿಸಿ ಸ್ಥಳದಿಂದ ನಿರ್ಗಮಿಸಿದರು. ಹೀಗಾಗಿ ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ ಬೀಳುವ ಸಂಶಯ ತಲೆದೋರಿದಂತಾಗಿದೆ.
20ನೇ ದಿನದಲ್ಲಿ ಧರಣಿ: ಏತನ್ಮಧ್ಯೆ ಧರಣಿಗೆ ಸಂಘಟನೆಗಳ ಬೆಂಬಲ ಹೆಚ್ಚತೊಡಗಿದೆ. ಬುಧವಾರ ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದೂ ಅಲ್ಲದೆ ಹೆದ್ದಾರಿ ಅಗಲೀಕರಣ ಬೇಡಿಕೆ ಈಡೇರಿಕೆ ವಿಳಂಬಗೊಂಡಲ್ಲಿ ಉಗ್ರ ಹೋರಾಟ ನಡೆಸಲೂ ತಾವು ಹಿಂದೇಟು ಹಾಕುವುದಿಲ್ಲ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಬಸವರಾಜ ಅಬ್ಬಿಹಾಳ ಬೆಂಬಲ ಸೂಚಿಸಿ ಮಾತನಾಡಿದರು. ಭೀಮರಾಯ ಬಳವಾಟ, ಶಂಕ್ರುಹಡಪದ, ಶಿವಕುಮಾರ ಬಿದರಕುಂದಿ, ಶಾಂತು ತಾರನಾಳ, ಶಿವು ಹಡಪದ, ಬಸವರಾಜ ಹಡಪದ, ಸಂಗಮೇಶ ಹಡಪದ, ಬಸವರಾಜ ಹಡಪದ ಬಂಗಾರಗುಂಡ, ಬಸವರಾಜ ಗಡೇದ ಪಾಲ್ಗೊಂಡಿದ್ದರು. ಗುರುವಾರ ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕಾಧ್ಯಕ್ಷ ರಾಜೂಗೌಡ ತುಂಬಗಿ, ಸಮಾಜಸೇವಕ ಶ್ರೀನಿವಾಸ ಗಡೇದ, ಮೌನೇಶ ಪತ್ತಾರ ಮತ್ತಿತರರು ಪಾಲ್ಗೊಂಡಿದ್ದರು.
ಶುಕ್ರವಾರದ ಧರಣಿಯಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಸಿದ್ದರಾಜ ಹೊಳಿ, ಪರಮೇಶ ಮಾತಿನ ವಕೀಲರು, ಬಸವರಾಜ ನಂದಿಕೇಶ್ವರಮಠ, ಮಹಾಂತಗೌಡ ಬಿರಾದಾರ, ಮೌನೇಶ ಸೋನಾರ, ಅಯ್ಯೂಬ್ ಮೋಮಿನ, ಶ್ರೀನಿವಾಸ ಹಂಡರಗಲ್ಲ, ಹಸನಲಿ ಬಾಗವಾನ, ಜಾವಿದ ಮೋಮಿನ್ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು
Vijayapura: ಪೋಕ್ಸೋ ಆರೋಪಿಗೆ 5 ವರ್ಷ, ಗಾಂಜಾ ಬೆಳದವನಿಗೆ 3 ವರ್ಷ ಜೈಲು ಶಿಕ್ಷೆ
SSLC Result: ರಾಜ್ಯಕ್ಕೆ 3, ಜಿಲ್ಲೆಗೆ ಮೊದಲ ಸ್ಥಾನ ಪಡೆದ ಪವಿತ್ರಾ
Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ
ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ
Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024