ಚಳಿಗೆ ಗಡಗಡ-ಗುಮ್ಮಟ ಆವರಿಸಿದ ಮಂಜು


Team Udayavani, Dec 20, 2018, 12:57 PM IST

vij-2.jpg

ವಿಜಯಪುರ: ಗುಮ್ಮಟ ನಗರಿ ಬುಧವಾರ ಅಕ್ಷರಶಃ ನಡುಗಿದೆ. ಪ್ರಸಕ್ತ ವರ್ಷದ ಅತ್ಯಂತ ಕನಿಷ್ಠ ತಾಪಮಾನದ ಚಳಿ ಜೊತೆಗೆ ಅಧಿಕ ಪ್ರಮಾಣದಲ್ಲಿ ಮಂಜು ಮುಸುಕಿದ ಕಾರಣ ಇಡೀ ದಿನ ವಿಜಯಪುರ ಘಡಘಡ ನಡುಗಿದೆ.

ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಅಧಿಕ ಚಳಿ ಆವರಿಸಿದ್ದು, ಬುಧವಾರವಂತೂ ಕಳೆದ ಮೂರು ವರ್ಷಗಳಲ್ಲೇ ಪ್ರಸಕ್ತ ವರ್ಷ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಡಿ. 18ರಂದು 13 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದ ತಾಪಮಾನ, ಡಿ. 19ರಂದು 9.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಸುನಿಂದಲೇ ಅತ್ಯಧಿಕ ಮಂಜು ಆವರಿಸಿದ ಕಾರಣ ಇಡಿ ದಿನ ವಿಜಯಪುರದ ಬಹುತೇಕ ಭಾಗದಲ್ಲಿ ಸೂರ್ಯ ದರ್ಶನವೇ ಇಲ್ಲವಾಗಿತ್ತು.

ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಕೊಂಚ ಬಿಸಿ ತಾಗಿಸುವ ತಾಪ ನೀಡಿದರೂ ಸೂರ್ಯ ಮಾತ್ರ ಬಹುತೇಕ ಮಾಯವೇ ಆಗಿದ್ದ. ಹತ್ತು ವರ್ಷದಿಂದ ಇಂಥ ಮಂಜು ಹಾಗೂ ಚಳಿ ಕಂಡಿರಲಿಲ್ಲ. ಈ ವರ್ಷ ಇಂಥ ಚಳಿ ಹೆಚ್ಚಿಗೆ ಬಿದ್ದಿರುವುದು ನಮ್ಮ ಬಾಲ್ಯದ ಸಂದರ್ಭವನ್ನು ನೆನಪು ಮಾಡಿದೆ. ಮಂಜು ಹೆಚ್ಚಿಗೆ ಬೀಳುವ ಕಾರಣ ಮಳೆ ಕೊರತೆಯ ಮಧ್ಯೆಯೂ ಬೆಳೆದು ನಿಂತ ಬೆಳೆಗಳು ಉತ್ತಮವಾಗಿ ಹೂ ಬಿಟ್ಟು, ಕಾಳು ಕಟ್ಟಲು ಸಹಕಾರಿ ಆಗುತ್ತದೆ ಎನ್ನುತ್ತಾರೆ ಬಸನಗೌಡ ಬಿರಾದಾರ.

ವಿಶ್ವದ ಅಚ್ಚರಿ ಎನಿಸಿರುವ ಐತಿಹಾಸಿಕ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಬಹುಮಹಡಿ ಆಧುನಿಕ
ಕಟ್ಟಡಗಳೆಲ್ಲ ಭಾರಿ ಪ್ರಮಾಣದ ಮಂಜು ಅವರಿಸಿ, ಸಂಪೂರ್ಣ ಮಂಜಿನಲ್ಲೇ ಮುಳುಗಿದ್ದರಿಂದ ಮಧ್ಯಾಹ್ನದವರೆಗೂ ಚಳಿಗೆ ನಡುಗುವಂತಾಗಿದ್ದವು. ನಿತ್ಯವೂ ಸೂರ್ಯೋದಯಕ್ಕೆ ಮುನ್ನವೇ ಗೋಲಗುಮ್ಮಟ ಆವರಣಕ್ಕೆ ವಾಯು ವಿಹಾರಕ್ಕೆ ಬರುತ್ತಿದ್ದ ಸಾರ್ವಜನಿಕರು ಬುಧವಾರ ಕಡಿಮೆ ತಾಪಮಾನ ಹಾಗೂ ಚಳಿ ಅಧಿಕ ಇದ್ದ ಕಾರಣ ಬೆಳಗ್ಗೆ 9ಕ್ಕೆ ಮನೆಯಿಂದ ಹೊರಬಂದರೂ ಮಂಜಿನಿಂದ ಆವರಿಸಿದ್ದ ಮೋಡದ ಹೊದಿಕೆ ಹೊದ್ದಿದ್ದ ಗೋಲಗುಮ್ಮಟ ಕಾಣೆಯಾದ ಅಪರೂಪದ ದೃಶ್ಯ ಸೃಷ್ಟಿಯಾಗಿತ್ತು.

ಭಾರತದ ಆಗ್ನೇಯ ಭಾಗದ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತವಾಗಿ ವೇಗ ಪಡೆದ ಚಂಡಮಾರುತ ಹಾಗೂ ಪಶ್ಚಿಮದಿಂದ ಬೀಸುವ ಗಾಳಿಯ ಪರಿಣಾಮ ತಾಪಮಾನ ಕನಿಷ್ಠ ಮಟ್ಟ ತಲುಪಲು ಕಾರಣವಾಗಿದೆ. ಇದುವೇ ಕನಿಷ್ಠ ತಾಪಮಾನ ಹಾಗೂ ಗರಿಷ್ಠ ಮಂಜು ಆವರಿಸಿಕೊಳ್ಳಲು ಕಾರಣ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಇನ್ನೂ ಒಂದೆರಡು ದಿನ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಜಯಪುರ-ಹಿಟ್ನಳ್ಳಿ ಫಾರ್ಮ್ನ ಹವಾಮಾನ ವಿಭಾಗದ ತಜ್ಞರಾದ ವೆಂಕಟೇಶ್‌ ವಿವರಿಸುತ್ತಾರೆ. 

ಇನ್ನು ಇದೇ ಕೇಂದ್ರದ ಹವಾಮಾನ ತಾಂತ್ರಿಕ ಅಧಿಕಾರಿ ಡಾ| ಶಂಕರ ಕುಲಕರ್ಣಿ ಅವರ ಪ್ರಕಾರ ಕಳೆದ ಮೂರ್ನಾಲ್ಕು
ವರ್ಷಗಳಿಂದ ಕಡಿಮೆ ಮಳೆಯಾಗಿದ್ದು, ಪ್ರಸಕ್ತ ವರ್ಷವೂ ಅತ್ಯಂತ ಕಡಿಮೆ ಮಳೆಯಾಗಿದೆ. ಇದರಿಂದ ಕಪ್ಪು ಮಣ್ಣಿನ
ಈ ಪ್ರದೇಶದಲ್ಲಿ ತೇವಾಂಶ ಪ್ರಮಾಣ ಕಡಿಮೆಯಗುವ ಕಾರಣ ಇಂಥ ವಾತಾವಣರ ಸೃಷ್ಟಿಯಾಗುತ್ತದೆ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.