ನಿವೃತ್ತ ನೌಕರರಿಗೆ ಸನ್ಮಾನ
Team Udayavani, Aug 4, 2018, 11:54 AM IST
ಮುದ್ದೇಬಿಹಾಳ: ಸರಕಾರಿ ಸೇವೆ ಜನಸಾಮಾನ್ಯರ ಸೇವೆಯಾಗಿದ್ದು ಸರಕಾರಿ ನೌಕರಿ ಪಡೆದ ಪ್ರತಿಯೊಬ್ಬರೂ ಜನಸೇವೆಗೆ ಸದಾಕಾಲ ಮುಂದಾಗಬೇಕು ಎಂದು ಲೋಕೊಪಯೋಗಿ ಇಲಾಖೆ ಸಹಾಯ ಅಧಿಕಾರಿ ಅರುಣಕುಮಾರು ಪಾಟೀಲ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜನರಿಗಾಗಿ ಸರಕಾರ ಸಾಕಷ್ಟು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರಕಾರಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಎಂದರು.
ಇದೇ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರ್.ಎಂ. ಪುರಾಣಿಕಮಠ, ಎಂ.ಎಚ್. ಮನಗೂಳಿ, ಎಂ.ಎ. ಮುಜಾವರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ವೇಳೆ ದಲಿತ ಮುಖಂಡ ಚನ್ನಪ್ಪ ವಿಜಯಕರ್, ಯಲ್ಲಪ್ಪ ಚಲವಾದಿ, ಹರೀಶ ನಾಟಿಕರ, ಕಿರಿಯ ಎಂಜಿನಿಯರ್ ಎ.ಜಿ. ಗುಜರಿ, ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ಬಸನಗೌಡ, ಎಂ.ಎ. ಢವಳಗಿ, ಎ.ಬಿ.ಅಂಕಲಗಿ, ಆನಂದ ಆರೋಢ, ಬಿ.ವಿ.ಮಠ, ಜಿ.ಎಸ್.ಕಂಠಿ, ಐ.ಎಸ್.ಹಿರೇಮಠ, ಮಹಾಂತೇಶ ಬಿರಾದಾರ, ನಾಗಮ್ಮ ತಳವಾರ, ಶೈಲಾ ಡೊಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು