ಸಿದ್ದೇಶ್ವರ ಬ್ಯಾಂಕ್ನ ನಲವತ್ತುಲಕ್ಷ ರೂ. ಕಿತ್ತುಕೊಂಡು ಪರಾರಿ
Team Udayavani, Dec 31, 2017, 11:12 AM IST
ವಿಜಯಪುರ: ನಗರದಲ್ಲಿ ಅತ್ಯಂತ ಜನನಿಬಿಡ ಪ್ರದೇಶದಲ್ಲಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್ನ ಲಕ್ಷಾಂತರ
ಹಣ ಇದ್ದ ಚೀಲವನ್ನು ಸಿನಿಮೀಯ ರೀತಿಯಲ್ಲಿ ಹಾರಿಸಿಕೊಂಡು ಪರಾರಿಯಾಗಿರುವ ಘಟನೆ ಜರುಗಿದೆ.
ಶನಿವಾರ ಬೆಳಗ್ಗೆ ನಗರದ ಸಿದ್ದೇಶ್ವರ ದೇವಸ್ಥಾನದ ಬಳಿ ಇರುವ ಸಿದ್ದೇಶ್ವರ ಬ್ಯಾಂಕ್ನ ಮುಖ್ಯ ಶಾಖೆಯಿಂದ
ನಗರದಲ್ಲಿರುವ ಬ್ಯಾಂಕ್ನ ಶಾಖೆಗಳಿಗೆ ಸುಮಾರು 40 ಲಕ್ಷ ರೂ. ನಗದು ಹಣ ಸಾಗಿಸುವಾಗ ಈ ಕೃತ್ಯ ಜರುಗಿದೆ.
ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು. ಈ ಹಂತದಲ್ಲಿ ವಾಹನದ ಬಳಿ ಕೆಲವು
ನೋಟುಗಳನ್ನು ಚಲ್ಲಿದ್ದ ಕಳ್ಳರು ಭದ್ರತಾ ಸಿಬ್ಬಂದಿ ಗಮನ ಅತ್ತ ಸೆಳೆದು ಹಣ ಇದ್ದ ಚೀಲವನ್ನು ಹಾರಿಸಿಕೊಂಡು ಹೋಗಿದ್ದಾರೆ.
ಇಡಿ ಘಟನೆ ಸಿನಿಮೀಯ ರೀತಿಯಲ್ಲಿ ಜರುಗಿದ್ದು, ತಮ್ಮ ಚಿತ್ತವನ್ನು ಬೇರೆಡೆ ಸೆಳೆದು ಹಣದ ಚೀಲವನ್ನು ಕಳ್ಳರು
ಹೊತ್ತೂಯ್ದಿದ್ದಾರೆ. ಆಗ ಕರ್ತವ್ಯದಲ್ಲಿದ್ದ ತಮಗೆ ಇಡಿ ಘಟನೆ ಗಮನಕ್ಕೆ ಬರದಂತೆ ಈ ಕೃತ್ಯವನ್ನು ಎಸಗಲಾಗಿದೆ
ಎಂದು ಸಿಬ್ಬಂದಿ ಹೇಳಿಕೊಂಡಿದ್ದಾರೆ.
ಕಳ್ಳತನವಾದ ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಕುಲದೀಪ ಜೈನ್, ಎಎಸ್ಪಿ ಶಿವಕುಮಾರ ಗುಣಾರಿ ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲನೆ ದ್ದು ನಡೆಸಿದರು. ಗಾಂಧಿಚೌಕ್ ಠಾಣೆಯಲ್ಲಿ ಪಕ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ