ಕುಡಿಯಲು ಯೋಗ್ಯ ನೀರಿದ್ದರೆ ಮಾತ್ರ ಬಳಸಿ: ಡಾ| ಅಗರವಾಲ
Team Udayavani, Aug 26, 2022, 5:31 PM IST
ಬಸವನಬಾಗೇವಾಡಿ: ಕೊಳವೆ-ತೆರೆದ ಬಾವಿಯಿಂದ ಬಳಸುವ ನೀರು ಕುಡಿಯಲು ಯೋಗ್ಯವಿದ್ದರೆ ಮಾತ್ರ ಬಳಸಬೇಕು ಎಂದು ಎನ್ ಸಿಡಿಡಬ್ಲ್ಯೂಎಸ್ಕ್ಯೂ ತಾಂತ್ರಿಕ ತಜ್ಞ ಡಾ| ಸಂಜೀವ ಅಗರವಾಲ ಹೇಳಿದರು.
ತಾಲೂಕಿನ ಯರನಾಳ, ಇಂಗಳೇಶ್ವರ, ಮತಕ್ಷೇತ್ರದ ಮಟ್ಟಿಹಾಳ ಗ್ರಾಮಕ್ಕೆ ಜಲಜೀವನ ಮಿಷನ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜನರೊಂದಿಗೆ ಸಂವಾದ ಪ್ರಗತಿ ಸಮಸ್ಯೆ ಕುರಿತು ಕೇಂದ್ರ, ರಾಜ್ಯ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ದೇಶದ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿವ ನೀರು ನೀಡುವ ಉದ್ದೇಶದಿಂದ ಜೆಜೆಎಂ ಯೋಜನೆಯಡಿ ಈ ಕಾಮಗಾರಿ ಕೈಗೊಂಡಿದೆ. ಕೆಲವು ಗ್ರಾಮಗಳಿಗೆ ಕೊಳವೆ, ತೆರೆದ ಬಾವಿಯಿಂದ ನೀರು ಪೂರೈಸಲಾಗುತ್ತದೆ. ಆ ನೀರು ಕುಡಿಯಲು ಯೋಗ್ಯವಾಗಿದ್ದರೆ ಮಾತ್ರ ಅದನ್ನು ಬಳಸಲು ಸಾಧ್ಯ ಎಂದರು.
ಸಮರ್ಪಕವಾಗಿ ನೀರು ಸರಬುರಾಜು ಆಗದಿದ್ದಲ್ಲಿ ಮತ್ತು ಕಾಮಗಾರಿಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಗ್ರಾಪಂ ದೂರು ನೀಡಬಹುದು. ಕೇಂದ್ರ-ರಾಜ್ಯ ತಂಡದ ತಾಂತ್ರಿಕ ತಜ್ಞರು ಈ ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಬಳಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದರು.
ಈ ವೇಳೆ ಯರನಾಳ ಗ್ರಾಪಂ ಅಧ್ಯಕ್ಷ ಬಸವರಾಜ ಜಾಲಗೇರಿ, ಸದಸ್ಯರಾದ ಕವಿತಾ ಮಣ್ಣೂರಮಠ, ಸಂಗನಗೌಡ ಪಾಟೀಲ, ರಾಮಣ್ಣ ಒಂಟಗುಡಿ, ತಾಂತ್ರಿಕ ಸಲಹೆಗಾರ ಅಪ್ಪರೊ, ವಿಜಯಪುರ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ ಚವ್ಹಾಣ, ಬಸವನಬಾಗೇವಾಡಿ ಎಇಇ ಎಸ್.ಬಿ. ಪಾಟೀಲ, ಎಸ್.ಎಚ್. ಮುದ್ದೇಬಿಹಾಳ, ಅಭಿವೃದ್ಧಿ ಅಧಿಕಾರಿ ರವಿಕುಮಾರ ಗುಂಡಳ್ಳಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು
Vijayapura: ಪೋಕ್ಸೋ ಆರೋಪಿಗೆ 5 ವರ್ಷ, ಗಾಂಜಾ ಬೆಳದವನಿಗೆ 3 ವರ್ಷ ಜೈಲು ಶಿಕ್ಷೆ
SSLC Result: ರಾಜ್ಯಕ್ಕೆ 3, ಜಿಲ್ಲೆಗೆ ಮೊದಲ ಸ್ಥಾನ ಪಡೆದ ಪವಿತ್ರಾ
Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ
ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ
Former CM ಎಸ್.ಎಂ. ಕೃಷ್ಣ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
Modi ಟೀಕೆಗಳನ್ನು ಸಹಿಸುವುದಿಲ್ಲ,ಇತರರ ವಿರುದ್ಧ ಏನನ್ನೂ ಮಾತನಾಡುತ್ತಾರೆ: ಪವಾರ್
Bijapur; ಭಾರೀ ಎನ್ಕೌಂಟರ್ ವೇಳೆ ಸಮವಸ್ತ್ರ ಬದಲಿಸಿದ ನಕ್ಸಲೀಯರು!
Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?