Bandipur: ರಾಜಾ, ಹಾಯ್ ಬೇಬಿ ಎಂದ ಕೂಡಲೇ ಓಡೋಡಿ ಬಂದ ರೋಹಿತ್ ಆನೆ! ವಿಡಿಯೋ ವೈರಲ್
Team Udayavani, Sep 3, 2023, 2:54 PM IST
ಗುಂಡ್ಲುಪೇಟೆ(ಚಾಮರಾಜನಗರ): ಮೈಸೂರು ರಾಜ ವಂಶಸ್ಥರಾದ ಜಯಚಾಮರಾಜ ಒಡೆಯರ ಮೊಮ್ಮಗಳು ಶ್ರುತಿ ಕೀರ್ತಿದೇವಿ ರಾಜಾ, ಹಾಯ್ ಬೇಬಿ ಬಾ ಎಂದು ಕೂಗಿದ ಕೂಡಲೇ ರೋಹಿತ್ ಎಂಬ ಆನೆ ಘೀಳಿಟ್ಟು ಓಡೋಡಿ ಬಂದ ಘಟನೆ ಬಂಡೀಪುರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಆಯ್ಕೆಯಾಗಿರುವ 17 ವರ್ಷದ ರೋಹಿತ್ ಎಂಬ ಆನೆಗೂ ಜಯಚಾಮರಾಜ ಒಡೆಯರ ಮೊಮ್ಮಗಳು ಶ್ರುತಿ ಕೀರ್ತಿ ದೇವಿಗು ಅವಿನಾಭಾವ ಸಂಬಂಧವಿದೆ.
ಅನಾಥವಾಗಿದ್ದ ಆರು ತಿಂಗಳ ಮರಿಯಾನೆಯನ್ನು ಶ್ರುತಿಕೀರ್ತಿ ದೇವಿ ತಾಯಿ ದಿ. ವಿಶಾಲಾಕ್ಷಿದೇವಿ ಬಂಡಿಪುರದ ತಮ್ಮ ರೆಸಾರ್ಟ್ ನಲ್ಲಿ 14 ವರ್ಷ ಸಾಕಿ ರೋಹಿತ್ ಎಂದು ನಾಮಕರಣ ಮಾಡಿದರು.
ಆನೆಗೆ 14 ವರ್ಷ ತುಂಬಿದ ನಂತರ ರಾಂಪುರ ಆನೆ ಶಿಬಿರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದರೆ ಶ್ರುತಿ ಕೀರ್ತಿ ದೇವಿ ಅವರಿಗೆ ಆನೆ ಮರಿ ಮೇಲಿನ ಪ್ರೇಮ ಇನ್ನೂ ಕೂಡ ಕಡಿಮೆಯಾಗಿಲ್ಲ.
ರೋಹಿತ್ ನಮ್ಮ ಹತ್ರ ಬಂದಾಗ ಆರು ತಿಂಗಳ ಕೂಸು. ನಮ್ಮ ತಾಯಿ ಅದನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು. ಅದಕ್ಕೆ 14 ವರ್ಷ ತುಂಬಿದ ಬಳಿಕ ಬಂಡಿಪುರ ಆನೆ ಕ್ಯಾಂಪ್ ಗೆ ಹಸ್ತಾಂತರ ಮಾಡಿದ್ದೇವು. ಆದರೆ ಇಂದಿಗೂ ಅದರ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ನನ್ನನ್ನು ಕಂಡರೆ ಆನೆ ಈಗಲೂ ಅಷ್ಟೇ ಪ್ರೀತಿ ತೋರುತ್ತದೆ. ಈಗಲೂ ನನ್ನ ಹುಡುಕಿ ಓಡೋಡಿ ಬರುತ್ತದೆ. ಈ ಮಧ್ಯೆ ಮೈಸೂರು ದಸರಾ ಜಂಬೂ ಸವಾರಿಗೆ ರೋಹಿತ್ ಆಯ್ಕೆ ಆಗಿರೋದು ಖುಷಿ ತಂದಿದೆ. ರೋಹಿತ್ ನಮ್ಮ ಮನೆಯ ಮಗನೇ ಆಗಿದ್ದು, ಪ್ರತಿ ತಿಂಗಳು ರಾಂಪುರ ಕ್ಯಾಂಪ್ ಗೆ ಬಂದು ರೋಹಿತ್ ಜೊತೆಗೆ ಕಾಲ ಕಳೆಯುತ್ತೇನೆ ಎಂದು ಶ್ರುತಿ ಕೀರ್ತಿ ದೇವಿ ಆನೆ ಮೇಲಿನ ಪ್ರೀತಿ ತೆರೆದಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ