ಬಾಲರಾಜ್ ಬಳಗದಿಂದ ಆ್ಯಂಬುಲೆನ್ಸ್ಕೊಡುಗೆ
Team Udayavani, Jun 5, 2021, 6:03 PM IST
ಯಳಂದೂರು: ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಕಾಂಗ್ರೆಸ್ನಾಯಕರು ತಮ್ಮ ಕೈಲಾದ ಅಗತ್ಯ ಸೇವೆ ನೀಡುವ ಮೂಲಕಶ್ರಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದರು.
ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್.ಬಾಲರಾಜ್ ಸ್ನೇಹಬಳಗದಿಂದ ಆ್ಯಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ವಾಹನ ಸೇವೆ, ಆಹಾರ ವಿತರಣೆ, ಮಾಸ್ಕ್, ಚಿಕಿತ್ಸೆಗೆನೆರವು ಮತ್ತಿತರ ಸೌಕರ್ಯ ಕಲ್ಪಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಬಾಲರಾಜ್ ಮಾತನಾಡಿ, ತಾಲೂಕಿನಲ್ಲಿಗರ್ಭಿಣಿಯರನ್ನು ಕರೆದೊಯ್ಯುವ ನಗು-ಮಗು ವಾಹನಗಳನ್ನುಮೃತ ದೇಹಗಳನ್ನು ಸಾಗಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ನಮ್ಮ ಸ್ನೇಹ ಬಳಗದಿಂದ ಆ್ಯಂಬುಲೆನ್ಸ್ ಕೊಡುಗೆನೀಡಲಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಜಿಪಂ ಸದಸ್ಯರಾದಜೆ.ಯೋಗೇಶ್, ಜಿಪಂ ಮಾಜಿ ಸದಸ್ಯ ವಡಗೆರೆ ದಾಸ, ತಾಪಂಸದಸ್ಯ ನಿರಂಜನ್, ಪಪಂ ಸದಸ್ಯರಾದ ಮಹೇಶ್, ರಂಗನಾಥ್,ಮಲ್ಲಯ್ಯ, ಮಹದೇವನಾಯಕ, ಮಂಜು, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಅಬ್ಬುಲ್, ಮುಖಂಡರಾದ ನಿಂಗರಾಜು,ಮಲ್ಲು, ಮದ್ದೂರು ಕುಮಾರ್,ಶಾಂತರಾಜು, ಡಾ|ಶ್ರೀಧರ್, ಡಾ|ನಾಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.