ಸಚಿವ ಸ್ಥಾನ ನೀಡಿದರೆ ಖಂಡಿತ ಬಿಜೆಪಿ ಸೇರುವೆ-ಎನ್. ಮಹೇಶ್
Team Udayavani, Jan 5, 2021, 8:42 PM IST
ಚಾಮರಾಜನಗರ: ಸಚಿವ ಸ್ಥಾನ ನೀಡಿದರೆ ಯಾರು ಬೇಡವೆನ್ನುತ್ತಾರೆ? ಸಚಿವ ಸ್ಥಾನ ಕೊಟ್ಟರೆ ಖಂಡಿತ ಬಿಜೆಪಿ ಸೇರುತ್ತೇನೆ ಎಂದು ಬಿಎಸ್ಪಿ ಉಚ್ಛಾಟಿತ, ಕೊಳ್ಳೇಗಾಲ ಶಾಸಕ, ಎನ್. ಮಹೇಶ್ ಹೇಳಿದರು.
ಹಕ್ಕಿಹಬ್ಬ ಕಾರ್ಯಕ್ರಮ ಉದ್ಘಾಟನೆಗೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಆಗಮಿಸಿದ್ದ ಅವರು, ಬಿಜೆಪಿ ಸೇರುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯಾದ್ಯಂತ ಹಾಗೂ ಕೊಳ್ಳೇಗಾಲ ಕ್ಷೇತ್ರದ ನಮ್ಮ ಕಾರ್ಯಕರ್ತರು ಬಿಜೆಪಿ ಸೇರುವುದಾದರೆ ಒಂದು ಹುದ್ದೆ ಪಡೆದು ಸೇರ್ಪಡೆಯಾಗಿ ಎನ್ನುತ್ತಿದ್ದಾರೆ. ಸಚಿವ ಸ್ಥಾನ ನೀಡಿದರೆ ಖಂಡಿತ ಬಿಜೆಪಿ ಸೇರುತ್ತೇನೆ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ಅವರ ಅತಿರೇಕದ ವರ್ತನೆಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ:ಕ್ಯಾ.ಗಣೇಶ್ ಕಾರ್ಣಿಕ್
ಎನ್. ಮಹೇಶ್ ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವರದಿಯನ್ನು ಉದಯವಾಣಿ ಕಳೆದ ಡಿಸೆಂಬರ್ 3ರಂದು ಮೊದಲು ಪ್ರಕಟಿಸಿತ್ತು. ಈಗ ಎನ್. ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಇದೇ ಮೊದಲ ಬಾರಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ಇದರಿಂದಾಗಿ ಶೂನ್ಯ ಮಾಸ ಕಳೆದು ಸಂಕ್ರಾಂತಿಯ ಬಳಿಕ ಎನ್. ಮಹೇಶ್ ಬಿಜೆಪಿ ಸೇರುವುದು ಖಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ