ಮೈಸೂರು ದಸರಾ: ಬಂಡೀಪುರದಿಂದ ಹೊರಟ ಚೈತ್ರ-ಲಕ್ಷ್ಮೀ ಆನೆಗಳು
Team Udayavani, Aug 6, 2022, 8:27 PM IST
ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯದಿಂದ ಮೈಸೂರು ದಸರಾಗೆ ಹೊರಟ ಚೈತ್ರ ಮತ್ತು ಲಕ್ಷ್ಮೀ ಎರಡು ಆನೆಗಳಿಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರುವ ಮೂಲಕ ನಾಡ ದಸರಾಗೆ ಕಳುಹಿಸಿ ಕೊಡಲಾಯಿತು.
ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚೈತ್ರ ಮತ್ತು ಲಕ್ಷ್ಮೀ ಆನೆಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಗೋಪಾಲಸ್ವಾಮಿ ಬೆಟ್ಟದ ಅರ್ಚಕರಾದ ಗೋಪಾಲಕೃಷ್ಣ ಭಟ್ಟರಿಂದ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆನೆಗಳಿಗೆ ಪೂಜೆ ಸಲ್ಲಿಸಿ ಬಾಳೆಹಣ್ಣು, ಬೆಲ್ಲ, ಕಬ್ಬು ತಿನ್ನಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್, ನಾಡಹಬ್ಬ ಮೈಸೂರು ದಸರಾಗೆ ಬಂಡೀಪುರದಿಂದ 48 ವರ್ಷದ ಚೈತ್ರ ಮತ್ತು 22 ವರ್ಷದ ಲಕ್ಷ್ಮೀ ಎರಡು ಹೆಣ್ಣಾನೆಗಳು ಹೋಗುತ್ತಿದೆ. ಸದ್ಯ ನಾಗರಹೊಳೆಗೆ ಆನೆಗಳು ತೆರಳುತ್ತಿದ್ದು, ನಂತರ ಗಜ ಪಯಣದೊಂದಿಗೆ ಮೈಸೂರಿಗೆ ಹೋಗಲಿವೆ. ಒಟ್ಟು 9 ಆನೆಗಳ ಪೈಕಿ ಬಂಡೀಪುರದಿಂದ 2 ಆನೆಗಳು ಹೋಗುತ್ತಿರುವುದು ನಮಗೆ ಹೆಮ್ಮೆ. ಹಿಂದೆಯೂ ಕೂಡ ಚಾಮರಾಜನಗರದಿಂದ ದಸರಾಗೆ ಸಾಕಷ್ಟು ಬಾರಿ ಆನೆಗಳನ್ನು ಕಳುಹಿಸಿಕೊಡಲಾಗಿತ್ತು. ಈಗಲೂ ಅದು ಮುಂದುವರೆದಿದೆ. ಇದರಿಂದ ಬಂಡೀಪುರ ಹೆಮ್ಮೆ ಇನ್ನಷ್ಟು ಇಮ್ಮುಡಿಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಜಗದೀಪ್ ಧನ್ಕರ್ ನೂತನ ಉಪರಾಷ್ಟ್ರಪತಿ : ನಿರೀಕ್ಷಿತ ಭರ್ಜರಿ ಜಯ
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶಕುಮಾರ್ ಮಾತನಾಡಿ, ಮೈಸೂರು ದಸರಾಗೆ ಬಂಡೀಪುರದಿಂದ ಹಿಂದೆ ಜಯಪ್ರಕಾಶ ಎಂಬ ಒಂದು ಆನೆ ಹೋಗುತ್ತಿತ್ತು. ಆದರೆ ಈ ವರ್ಷ ಮೂರು ಆನೆಗಳು ತೆರಳುತ್ತಿದ್ದು, ಮೊದಲ ಹಂತವಾಗಿ ಚೈತ್ರ ಮತ್ತು ಲಕ್ಷ್ಮೀ ಆನೆಗಳು ತೆರಳುತ್ತಿದ್ದು, ಎರಡನೇ ಹಂತದಲ್ಲಿ ಪಾರ್ಥ ಸಾರತಿ ಎಂಬ ಆನೆ ಹೋಗಲಿದೆ. ಚೈತ್ರ ಆನೆ ಈ ಹಿಂದೆ ದಸರಾಗೆ ಹೋಗಿತ್ತು. ಮೊದಲ ಬಾರಿಗೆ ಲಕ್ಷ್ಮೀ ಆನೆ ತೆರಳುತ್ತಿದೆ. ಮುಂದೆ ಸುಮಾರು 5 ಆನೆಗಳನ್ನು ದಸರಾಗೆ ಕಳುಹಿಸಲು ತರಬೇತಿ ನೀಡಿ ಸಿದ್ಧಗೊಳಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲತ್, ತಹಸೀಲ್ದಾರ್ ಸಿ.ಜಿ.ರವಿಶಂಕರ್, ಎಸಿಎಫ್ ಕೆ.ಪರಮೇಶ್, ರವೀಂದ್ರ, ನವೀನ್, ಆರ್ಎಫ್ಓ ಗಳಾದ ನವೀನ್ಕುಮಾರ್, ಲೋಕೇಶ್, ನಾಗೇಂದ್ರನಾಯಕ, ಶ್ರೀನಿವಾಸ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ