ಇಲಿ ಕಾಟ ತಾಳದೇ ಠಾಣೆಯಲ್ಲಿ ಬೆಕ್ಕು ಸಾಕಿದ ಗೌರಿಬಿದನೂರು ಪೊಲೀಸರು!
Team Udayavani, Jun 27, 2022, 1:52 PM IST
ಗೌರಿಬಿದನೂರು: ಇಲಿಗಳ ಕಾಟದಿಂದ ಹೈರಾಣಾದ ಇಲ್ಲಿನ ವೃತ್ತ ನಿರೀಕ್ಷಕ ಕಚೇರಿ ಸಿಬ್ಬಂದಿ ಠಾಣೆಯಲ್ಲಿ ಬೆಕ್ಕು ಸಾಕಾಣಿಕೆ ಮಾಡಿ, ದಾಖಲೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡದಲ್ಲೇ ವೃತ್ತ ನಿರೀಕ್ಷಕರ ಕಚೇರಿಯೂ ಇದ್ದು, ಇವರು ಬೆಕ್ಕನ್ನು ಸಾಕಿದ್ದಾರೆ.
ಇಲಿಗಳ ಕಾಟ ಹೆಚ್ಚಾಗಿ, ಠಾಣೆಯಲ್ಲಿನ ಕಡತಗಳು, ಹಣ, ಸಮವಸ್ತ್ರ, ಮಹತ್ವದ ದಾಖಲೆಗಳನ್ನು ತಿಂದು ಹಾಕುತ್ತಿದ್ದವು. ಅಲ್ಲದೆ, ಸೆಲ್, ಇನ್ಸ್ಪೆಕ್ಟರ್, ಸಿಬ್ಬಂದಿ ಕೊಠಡಿ, ಕಪಾಟು ಗಳಲ್ಲಿ ಇಲಿಗಳು ಸೇರಿಕೊಂಡು, ಆಗಾಗ ಸದ್ದು ಮಾಡುತ್ತಿ ದ್ದವು. ಇದರಿಂದ ಪೊಲೀಸರು ಸಾಕಷ್ಟು ಕಿರಿಕಿರಿ ಅನು ಭವಿಸು ವಂತಾಗಿತ್ತು. ಇಲಿ ಗಳಿಂದ ದಾಖಲೆ ಕಾಪಾಡಿ ಕೊಳ್ಳುವುದೇ ತಲೆತೋವಾಗಿತ್ತು. ಇದಕ್ಕೆ ಸೂಕ್ತ ಉಪಾಯ ಮಾಡಿದ ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಗಂಗರಾಜು, ತಿಂಗಳ ಹಿಂದೆ ಬೆಕ್ಕಿನ ಮರಿ ತಂದು, ತನ್ನ ಸ್ನೇಹಿತರ ಸಹಾಯದಿಂದ ಅದಕ್ಕೆ ಹಾಲು, ಆಹಾರ ಹಾಕಿ ಸಾಕುತ್ತಿದ್ದಾರೆ. ಈಗಾಗಲೇ ಬೆಕ್ಕಿನ ಮರಿ ದೊಡ್ಡದಾಗಿದ್ದು, ಇಲಿಗಳನ್ನು ಹಿಡಿಯಲು ಶುರು ಮಾಡಿದೆ.
ಈಗಾಗಲೇ ಎರಡು ಮೂರು ಇಲಿಗಳ ಬೇಟೆಯನ್ನೂ ಆಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗುತ್ತಿದ್ದು, ಎರಡು ತಿಂಗಳಿಂದ ಕಚೇರಿಯ ಯಾವುದೇ ಕಡತ, ಸಮವಸ್ತ್ರ ಆಗಲಿ ನಾಶವಾಗುತ್ತಿಲ್ಲ, ಪ್ರತಿದಿನ ಬೆಕ್ಕಿಗೆ ಹಾಲನ್ನು ಸ್ನೇಹಿತರ ಸಹಾಯದಿಂದ ನೀಡಲಾಗುತ್ತಿದೆ ಎಂದು ಗಂಗರಾಜು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್
D. K. Shivakumar-ಎಚ್ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್.ಅಶೋಕ್
Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ
Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ
Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ
MUST WATCH
ಹೊಸ ಸೇರ್ಪಡೆ
Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್
I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್
D. K. Shivakumar-ಎಚ್ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್.ಅಶೋಕ್
JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ
Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ