ಕಾಲಜ್ಞಾನದಲ್ಲಿ ಕೊರೊನಾಗೆ ಕೋಟಿ ಬಲಿ


Team Udayavani, Mar 20, 2020, 1:16 PM IST

ಕಾಲಜ್ಞಾನದಲ್ಲಿ ಕೊರೊನಾಗೆ ಕೋಟಿ ಬಲಿ

ಚಿಂತಾಮಣಿ: ದಿನೇ ದಿನೆ ಕೋವಿಡ್ 19 ವೈರಸ್‌ ಹೆಚ್ಚುತ್ತಿರುವುದು ಕಂಡರೆ ದೈವ ಪುರುಷರೆಂದೇ ಪ್ರಸಿದ್ಧಿ ಪಡೆದಿದ್ದ ಆಂಧ್ರದ ಪೂತಲೂರು ವೀರಬ್ರಹ್ಮಯ್ಯ ಹೇಳಿದ ಪ್ರತಿಯೊಂದು ಮಾತು ಸತ್ಯವಾಗಿದೆ. ಅವರು ತಮ್ಮ ಕಾಲಜ್ಞಾನದಲ್ಲಿ 300 ವರ್ಷಗಳ ಹಿಂದೆಯೇ ಕೊರಂಗಿ (ಕೊರೊನಾ) ಕಾಯಿಲೆ ಬಗ್ಗೆ ದಾಖಲಿಸಿದ್ದು, ಸದ್ಯ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸುತ್ತಿದೆ. ವೀರಬ್ರಹ್ಮಯ್ಯ ತಮ್ಮ ಕಾಲಜ್ಞಾನದಲ್ಲಿ ಬರೆದ ಪ್ರತಿಯೊಂದು ವಿಚಾರವು 20-21 ನೇ ಶತಮಾನದಲ್ಲಿ ನಡೆದಿದ್ದರಿಂದ ಕಾಲಜ್ಞಾನ ನೂರಕ್ಕೆ ನೂರರಷ್ಟು ಸತ್ಯ ಎನ್ನುವಂತಾಗಿದೆ.

ಕಾಲಜ್ಞಾನದಲ್ಲೇನಿದೆ ?: ಪೂತಲೂರಿನ ವೀರಬ್ರಹ್ಮಯ್ಯನವರು ಬರೆದ ಕಾಲಜ್ಞಾನದ 140ನೇ ಪದ್ಯದಲ್ಲಿ “ಈಶಾನ್ಯ ದಿಕ್ಕಿನ ವಿಷಗಾಳಿ ಪುಟ್ಟೇನು ಲಕ್ಷಲಾದಿ ಪ್ರಜಲು ಸಚ್ಚೆರಯ್ಯ ಕೊರಂಗಿಯನು ಜಬ್ಬು ಕೋಟಿಮಂದಿಕಿ ತಗುಲಿ ಕೊಡಿಲಾಗಾ ತೂಗಿ ಸಚ್ಚೇರಯ್ಯ’ ಎಂದು ದಾಖಲಾಗಿದೆ. ಅಂದರೆ ಬ್ರಹ್ಮಯ್ಯ ಈ ಪದ್ಯದಲ್ಲಿ ಚೀನಾವನ್ನು ಈಶಾನ್ಯ ದಿಕ್ಕಿಗೆ ಹೋಲಿಸಿದ್ದು, ಕೋವಿಡ್ 19 ವನ್ನು ಕೊರಂಗಿ ಎಂದು ಬರೆದಿದ್ದು, ಬ್ರಹ್ಮಯ್ಯರು ಬರೆದ ಎಲ್ಲಾ ವಿಷಯಗಳು ಸತ್ಯ ಎನ್ನುವಂತಾಗಿದೆ. ಕೊರೊನಾಗೆ ಕೋಟಿ ಮಂದಿ ಬಲಿಯಾಗುವರು ಎಂದು ಪ್ರಸ್ತಾಪಿಸಲಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಕಾಲಜ್ಞಾನದ ಒಂದು ತುಣುಕು ಸಂಪೂರ್ಣ ವಿವರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರವಚನಕಾರ ಟಿಎಲ್‌ ಆನಂದ್‌, ಅತೀಂದ್ರಿಯ ಜ್ಞಾನ ಪಡೆದ ಜ್ಞಾನಿಗಳು ಕಾಲಜ್ಞಾನ-ಭವಿಷ್ಯವಾಣಿಯನ್ನು ನುಡಿದಿರುತ್ತಾರೆ. ಅಂತಹ ಕಾಲಜ್ಞಾನಿಗಳಲ್ಲಿ ಕೈವಾರದ ತಾತಯ್ಯನವರು ಹಾಗೂ ಪೂತಲೂರಿನ ವೀರಬ್ರಹ್ಮಯ್ಯ ನವರು ಪ್ರಮುಖರು. ವೀರ ಬ್ರಹ್ಮಯ್ಯನವರು ರಚಿಸಿರುವ ಕಾಲಜ್ಞಾನದಲ್ಲಿ ಮುಂದೊಂದು ದಿನ “”ಕೋರಂಗಿ” ಎನ್ನುವ ಹೊಸ ಕಾಯಿಲೆಗೆ ಹೆಚ್ಚು ಜನ ಮರಣಿಸುವರು ಎಂಬ ಉಲ್ಲೇಖವಿರುವುದಾಗಿ ತಿಳಿದುಬಂದಿದೆ ಎಂದರು. ಒಟ್ಟಾರೆ ಕಾಲಜ್ಞಾನ ಮಾನವಕೋಟಿಗೆ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-gudibande

Gudibande: ಬೆಳ್ಳಂಬೆಳಗ್ಗೆ ಶೂಟ್ ಔಟ್, ಓರ್ವ ಸಾವು

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Chikkaballapur: Siddaramaiah should resign if there is morality: MP Dr K Sudhakar

Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್

Mysore ಮೂಡಾ ಹಗರಣ… ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ: ನಟ ಚೇತನ್ ಆರೋಪ

MUDA Scam: ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ… ಸಿಬಿಐ ತನಿಖೆಗೆ ವಹಿಸಿ: ನಟ ಚೇತನ್

4-gudibande

Gudibanda: ಎರಡು ಪ್ರತ್ಯೇಕ ಅಪಘಾತ; ಒಬ್ಬ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.