ನಗರಸಭೆ ಅಕ್ರಮ ಖಾತೆ ದರ್ಬಾರ್ಗೆ ರಿಯಲ್ ಎಸೇಟ್ ತತ್ತರ
Team Udayavani, Dec 23, 2017, 3:13 PM IST
ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಬ್ರಾಹ್ಮಂಡ ಅಕ್ರಮ ಖಾತೆಗಳ ಹಗರಣ ಸಾರ್ವಜನಿಕ ವಲಯದಲ್ಲಿ ದಿನೇ ದಿನೆ ಭಾರೀ ಸದ್ದು ಮಾಡಿರುವ ಬೆನ್ನಲೇ ಜಿಲ್ಲಾ ಕೇಂದ್ರದ ಸುತ್ತಮುತ್ತ ಗರಿಗೆದರಿದ್ದ ರಿಯಲ್ ಎಸ್ಟೇಟ್ ವಹಿವಾಟಿಗೆ ಹೊಡೆತ ಬಿದ್ದಿದೆ.
ನೋಟ್ ಅಮಾನ್ಯ, ಜಿಎಸ್ಟಿ ತೆರಿಗೆ ಪದ್ಧತಿಯಿಂದ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈಗ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮಗಳ ಖಾತೆಗಳ ಹಗರಣದಿಂದಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ಬಡಾವಣೆಗಳನ್ನು ಸಿದ್ಧªಪಡಿಸಿರುವ ರಿಯಲ್ ಎಸ್ಟೇಟ್ ಕುಳಗಳು ತಮ್ಮ ನಿವೇಶನಗಳ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರದ ಕಾರಣ ಕೈ ಸುಟ್ಟುಕೊಳ್ಳುವಂತಾಗಿದೆ.
ಜಿಲ್ಲೆಯಾದ ನಂತರ ಅದರಲ್ಲೂ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ರಾಜಧಾನಿ ಬೆಂಗಳೂರಿಗೂ ಹತ್ತಿರದಲ್ಲಿದೆ. ಬಹಳಷ್ಟು ರಾಜಕಾರಣಿಗಳು, ಸರ್ಕಾರಿ ನೌಕರರು, ಉದ್ದಿಮೆದಾರರು, ಐಟಿಬಿಟಿ ಉದ್ಯೋಗಿಗಳು ಚಿಕ್ಕಬಳ್ಳಾಪುರ ಸುತ್ತಮುತ್ತ ಭೂಮಿ ಖರೀದಿ ಮಾಡಿ ಬಡಾವಣೆಗಳನ್ನು ಸಿದ್ಧಪಡಿಸಿದ್ದಾರೆ. ಆದರೆ, ನಗರಸಭೆಯಲ್ಲಿ ಆಗೆದಷ್ಟು ಬೆಳಕಿಗೆ ಬರುತ್ತಿರುವ ಭೂ ಅಕ್ರಮಗಳು ಸಾರ್ವಜನಿಕರಲ್ಲಿ ತಲ್ಲಣ ಮೂಡಿಸಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ನಗರಸಭೆ ಅಧಿಕಾರಿಗಳು ಹಣದಾಸೆಗೆ ಬಿದ್ದು ನಕಲಿ ಖಾತೆಗಳ ಮೂಲಕ ಬೇರೊಬ್ಬರಿಗೆ ಖಾತೆಗಳನ್ನು ಮಾಡಿಕೊಟ್ಟಿರುವ ಪ್ರಕರಣಗಳು ಒಂದರ ಮೇಲೊಂದು ಬೆಳಕಿಗೆ ಬರುತ್ತಿರುವುದ ರಿಂದ ಸದ್ಯ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಸುತ್ತಮುತ್ತ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಇದರಿಂದ ಮೂಲ ಸೌಕರ್ಯಗಳೊಂದಿಗೆ ಆಕರ್ಷಕವಾಗಿ ನಗರದ ಸುತ್ತಮುತ್ತ ತಲೆಎತ್ತಿರುವ ನವನವೀಯ ರೀತಿಯ ಬಡಾವಣೆಗಳಲ್ಲಿ ಈಗ ನಿವೇಶನ ಖರೀದಿಸುವವರೇ ಇಲ್ಲವಾಗಿದೆ.
ಬಡಾವಣೆಗಳಲ್ಲಿ ಅಕ್ರಮದ ವಾಸನೆ: ಚಿಕ್ಕಬಳ್ಳಾಪುರ ಸುತ್ತಮುತ್ತ ನಿರ್ಮಿಸಲಾಗಿರುವ ಕೆಲ ಬಡಾವಣೆಗಳು ಅಕ್ರಮದ ಗೂಡಾಗಿವೆ. ಜಿಲ್ಲಾಡಳಿತದಿಂದ ಭೂ ಪರಿವರ್ತನೆಯಾಗದೇ ಕೆಲವರು ಅಕ್ರಮವಾಗಿ ನಿವೇಶನಗಳನ್ನು ವಿಂಗಡಿಸಿ ಬಡವರಿಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಇಂತಹ ಅಕ್ರಮಗಳಿಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರವು ಒಂದಡೆ ಅಧಿಕೃತ ಮುದ್ರೆ ಒತ್ತುತ್ತಿದರೆ ಮತ್ತೂಂದು ನಗರಸಭೆಯಲ್ಲಿಯು ಕೂಡ ಅಕ್ರಮವಾಗಿ ಖಾತೆಗಳು ಆಗಿವೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮಗಳನ್ನು ನೋಡಿ ಲಕ್ಷಾಂತರ ರೂ. ಬಂಡವಾಳ ಹಾಕಿ ಸೈಟು ಖರೀದಿಸಲು ಸಾರ್ವಜನಿಕರು ಹಿಂದೆ ಮುಂದೆ ನೋಡುವಂತಾಗಿದೆ. ಒಂದೇ ಬಾರಿ ದೊಡ್ಡ ಮೊತ್ತವನ್ನು ಹಾಕಿ ಸೈಟು ಖರೀದಿ ಮಾಡಿದರೂ ಅದು ನಕಲಿಯೋ, ಅಸಲಿಯೋ ಎಂಬ ಗೊಂದಲಗಳ ಫಜೀತಿಗೆ ಒಳಗಾಗಿರುವುದರಿಂದ ಬಡಾವಣೆಗಳಲ್ಲಿನ ಹೊಸ ನಿವೇಶನಗಳು ಗಿರಾಕಿಗಳಿಗೆ ಎದುರು ನೋಡುವಂತಾಗಿದೆ.
ನಿವೇಶನದಾರರಲ್ಲಿ ಆತಂಕ: ಈಗಾಗಲೇ ತಮ್ಮ ಕನಸಿನ ಮನೆ ಕಟ್ಟಿಕೊಳ್ಳಲು ಚಿಕ್ಕಬಳ್ಳಾಪುರದ ಲೇಔಟ್ಗಳಲ್ಲಿ ಲಕ್ಷಾಂತರ ರೂ. ನೀಡಿ ನಿವೇಶನ ಖರೀಸಿರುವ ಸಾರ್ವಜನಿಕರಲ್ಲಿ ನಗರಸಭೆಯಲ್ಲಿ ಬಯಲಾಗಿರುವ ಅಕ್ರಮ ಖಾತೆಗಳ ಪ್ರಕರಣದರಿಂದ ಆತಂಕ ಮೂಡಿದೆ. ತಮ್ಮ ನಿವೇಶಗಳ ಖಾತೆ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ದೃಢಪಡಿಸಿಕೊಳ್ಳಲು ನಗರಸಭೆ ಮೆಟ್ಟಿಲು ಹತ್ತಿದ್ದಾರೆ. ಈಗಾಗಲೇ ಸಾವಿರಾರು ಅಕ್ರಮ ಖಾತೆಗಳನ್ನು ಅಧಿಕಾರಿಗಳ ಶಾಮೀಲುನೊಂದಿಗೆನಗರಸಭಾ ಸದಸ್ಯರೇ ಮುಂದೆ ನಿಂತು ಮಾಡಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ
ಬಡಾವಣೆಗಳಲ್ಲಿ ನಿವೇಶನ ಖರೀದಿಗೆ ಹಿಂದೇಟು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಖಾತೆಗಳ ಪ್ರಕರಣದಿಂದ ಚಿಕ್ಕಬಳ್ಳಾಪುರ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯಾಪಾರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಡಾವಣೆಗಳಲ್ಲಿನ ನಿವೇಶನ ಖರೀದಿಸಲು ಸಾರ್ವಜನಿಕರು ಧೈರ್ಯ ತೋರದೇ ಹಿಂದೆ ಮುಂದೆ ನೋಡುತ್ತಿದ್ದಾರೆ.
ಇದರಿಂದ ನಿವೇಶನಗಳ ಬೆಲೆ ಕೂಡ ತುಸು ಕಡಿಮೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ನಡೆಯುತ್ತಿಲ್ಲ ಎಂದು ರಿಯಲ್ ಎಸ್ಟೇಟ್ ವ್ಯಾಪಾರಿ ವಾಪಸಂದ್ರ ಮಂಜುನಾಥ ಅವಲತ್ತುಕೊಂಡಿದ್ದಾರೆ.
“ದಾಖಲಾತಿ ಪರಿಶೀಲಿಸಿ ಬಡಾವಣೆಗೆ ಅನುಮತಿ’ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಬಡಾವಣೆಗಳ ಅನುಮೋದನೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಸೂಕ್ತ ದಾಖಲಾತಿಗಳಿದ್ದು, ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾಗಿದ್ದರೆ ಮಾತ್ರ ನಾವು ಅನುಮತಿ ನೀಡಲಾಗುತ್ತಿದೆ. ಭೂ ಪರಿವರ್ತನೆಯಾಗದ ಅರ್ಜಿಗಳನ್ನು
ನಾವು ತಿರಸ್ಕರಿಸುತ್ತಿದ್ದೇವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಗಂಗಾಧರಸ್ವಾಮಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ