ನಾಯಿ ದಾಳಿಗೆ ಜಿಂಕೆ ಸಾವು
Team Udayavani, Feb 23, 2021, 6:01 PM IST
ಕೊಟ್ಟಿಗೆಹಾರ: ನಾಯಿಗಳ ದಾಳಿಯಿಂದ ಜಿಂಕೆಯೊಂದು ಮೃತಪಟ್ಟ ಘಟನೆ ಉಗ್ಗೆಹಳ್ಳಿಯಲ್ಲಿ ಸೋಮವಾರ ನಡೆದಿದೆ. ಸೋಮವಾರ ನಾಯಿಗಳ ಹಿಂಡು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಿದ್ದು ಉಗ್ಗೆಹಳ್ಳಿಯ ಗ್ರಾಮಕ್ಕೆ ಬಂದ ಜಿಂಕೆ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದೆ.
ಉಗ್ಗೆಹಳ್ಳಿ ಗ್ರಾಮದ ಶಿವಕುಮಾರ್ ಎಂಬುವವರು ಕೂಡಲೇ ಅರಣ್ಯ ಅ ಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅ ಧಿಕಾರಿಗಳು ಆಗಮಿಸಿದ್ದರೂ ಕೂಡ ಜಿಂಕೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಎಸಿಎಫ್ ನಿರ್ಮಲಾ, ಆರ್ಎಫ್ಒ ಮೋಹನ್, ಫಾರೆಸ್ಟರ್ ಶಿವಕುಮಾರ್, ಗಾರ್ಡ್ ನಂದನ್ ಕುಮಾರ್ ಸುರೇಶ್, ಅರಣ್ಯ ವೀಕ್ಷಕ ಮುಳ್ಳಯ್ಯ, ಗ್ರಾಮಸ್ಥರಾದ ಮಂಜುನಾಥ್, ರೇವತಿ, ಶೋಭಾ, ಉಮೇಶ್ ಇದ್ದರು.