ಮೃತಪಟ್ಟ ಅನಾಥ ವೃದ್ಧೆಗೆ ಅಂತ್ಯಸಂಸ್ಕಾರ: ಮಾನವೀಯತೆ ಮೆರೆದ ಯುವಕರು
Team Udayavani, Oct 7, 2020, 10:18 AM IST
ಚಿಕ್ಕಮಗಳೂರು: ಮೃತಪಟ್ಟ ಅನಾಥ ವೃದ್ಧೆಗೆ ಅಂತ್ಯಸಂಸ್ಕಾರ ನೆರವೇರಿಸಿ ಯುವಕರು ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಕಳೆದ 15 ದಿನಗಳಿಂದ ವೃದ್ಧೆಯೋರ್ವರು ಅನಾರೋಗ್ಯಕ್ಕೀಡಾಗಿದ್ದರು. ಆದರೇ ಕೋವಿಡ್ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳು ಹಿಂದೇಟು ಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ಸ್ಥಳೀಯ ಯುವಕರಾದ ಅಭಿಷೇಕ್, ವಿಕ್ಕಿ, ಯೂನಸ್, ಪರ್ವೇಜ್ ಊಟ, ತಿಂಡಿ ನೀಡಿ ಕೊನೆ ಕ್ಷಣದವರೆಗೂ ಆರೈಕೆ ಮಾಡಿದ್ದಾರೆ. ಮಾತ್ರವಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದರು.
ಇದನ್ನೂ ಓದಿ: ಶಾಕಿಂಗ್ ಸಮೀಕ್ಷೆ: ಜಗತ್ತಿನ 35%ರಷ್ಟು ಮಹಿಳೆಯರಿಗೆ ಸೈಬರ್ ಹಿಂಸೆ; ಏನಿದು ?
ಆದರೇ ತೀವ್ರ ಅನಾರೋಗ್ಯದಿಂದ ವೃದ್ಧೆ ಮೃತಪಟ್ಟಿದ್ದರಿಂದ ಮಾನವೀಯತೆ ಮೆರೆದ ಯುವಕರು ಅಂತ್ಯಕ್ರಿಯೆ ನಡೆಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ಥೆ ಮತ್ತು ಆರೋಪಿ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು: ಉ.ಪ್ರ ಪೊಲೀಸರು