ವರುಣಗಿರಿ ಯಾದ ಶೃಂಗೇರಿ


Team Udayavani, Jul 20, 2018, 5:04 PM IST

from the trek path.jpg

ಶೃಂಗೇರಿ: ತಾಲೂಕಿನಾದ್ಯಾಂತ ಮುಂಗಾರು ಮಳೆ ಮುಂದುವರಿದಿದ್ದು, ಮಲೆನಾಡು ಈಗ ಮಳೆನಾಡಾಗಿದೆ. ಸತತ ಮಳೆಯಿಂದ ಹಿಂದಿನ ಗತ ವೈಭವ ಮತ್ತೆ ಮರುಕಳಿಸಿದೆ. ಈ ವರ್ಷ ಏಪ್ರಿಲ್‌ನಿಂದ ಮಳೆಯಾಗುತ್ತಿದ್ದು, ಕಳೆದ ಎರಡು ತಿಂಗಳಿಂದ ಸತತವಾಗಿ ಮಳೆಯಾಗುತ್ತಿದೆ. ಜೂನ್‌ ತಿಂಗಳಿನಲ್ಲಿ ದಾಖಲೆ ಮಳೆಯಾಗಿದ್ದರೆ, ಜುಲೈನಲ್ಲಿ ಮಳೆ ಮುಂದುವರಿದಿದ್ದು, ತುಂಗಾ ನದಿಯಲ್ಲಿ ಈ ಸಾಲಿನಲ್ಲಿ ಐದು ಬಾರಿ ಪ್ರವಾಹ ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿ ಸತತ ಮಳೆ ಮತ್ತು ಗಾಳಿಯಿಂದ ಸ್ವಾಭಾವಿಕ ನೀರಿನ ಬುಗ್ಗೆಗಳು ಎಲ್ಲೆಂದರಲ್ಲಿ ಕಾಣಿಸಿಕೊಂಡಿದೆ. ಕೆರೆ-ಕಟ್ಟೆಗಳು, ಬಾವಿಗಳು ಈಗಾಗಲೇ ಭರ್ತಿಯಾಗಿದ್ದು, ಗುಡ್ಡಗಳ ಬಳಿಯಲ್ಲದೇ, ತಗ್ಗು ಪ್ರದೇಶದಲ್ಲಿ ನೀರಿನ ಬುಗ್ಗೆ ಹುಟ್ಟಿಕೊಂಡಿದೆ. ಅನೇಕ ಮನೆಯ ಸುತ್ತಲೂ ನೀರಿನ ಬುಗ್ಗೆಗಳು ಹುಟ್ಟಿಕೊಂಡಿದ್ದು, ಮಣ್ಣಿನ ಮನೆಗಳು ಸತತ ಮಳೆ ಮತ್ತು ಹುಟ್ಟಿಕೊಂಡಿರುವ ನೀರಿನ ಬುಗ್ಗೆಗಳು ಮನೆಗಳಿಗೆ ಅಪಾಯ ಉಂಟು ಮಾಡುವ ಸ್ಥಿತಿಯಲ್ಲಿದೆ.
 
ಮನೆಯಂಗಳ, ಸಿಮೆಂಟ್‌ ನೆಲ ಹಾಸು ಇಲ್ಲದ ಮನೆಯ ಒಳಗಡೆ ನೀರಿನ ಬಗ್ಗೆ ಹುಟ್ಟಿಕೊಳ್ಳುತ್ತಿದೆ. ಇತ್ತೀಚಿನ ವರ್ಷದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಬಹುತೇಕ ಬಾವಿಯಲ್ಲಿ ನೀರು ಉಕ್ಕಿ ಹರಿಯತೊಡಗಿದೆ. 

ಹೆಚ್ಚುತ್ತಿರುವ ನೀರಿನ ಬುಗ್ಗೆ: ವಾಡಿಕೆಗಿಂತ ಬೇಗ ಮುಂಗಾರು ಮಳೆ ಆರಂಭವಾಗಿದ್ದು, ಮಳೆ ಆರಂಭವಾದ ನಂತರ ಬಿಡುವು ನೀಡದೇ ಸುರಿಯುತ್ತಿದೆ. ಇದರಿಂದ ತಾಲೂಕಿನಾದ್ಯಾಂತ ನೀರಿನ ಬುಗ್ಗೆ ಹುಟ್ಟಿಕೊಂಡಿದೆ. ಸತತ ಮಳೆ ಮತ್ತು ಬಿಸಿಲಿನ ವಾತಾವರಣ ಉಂಟಾಗದೆ ಇರುವುದು ನೀರಿನ ಬುಗ್ಗೆ ಹೆಚ್ಚಾಗಲು ಕಾರಣವಾಗಿದೆ.

ಅಪಾಯ ಕಟ್ಟಿಟ್ಟ ಬುತ್ತಿ: ಗ್ರಾಮೀಣ ಪ್ರದೇಶದ ಹಳ್ಳ ಹಾಗೂ ತುಂಗಾ ನದಿಯಲ್ಲಿ ಸಾಮಾನ್ಯ ನೀರಿನ ಮಟ್ಟಕ್ಕಿಂತ ಹೆಚ್ಚು ನೀರು ಹರಿಯುತ್ತಿದೆ. ಇನ್ನೂ ಒಂದುವರೆ ತಿಂಗಳು ಮಳೆಗಾಲವಿದ್ದು, ಇದೇ ರೀತಿ ಮಳೆ ಮುಂದುವರಿದರೆ ಅನೇಕ ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
 
ಸತತ ಗಾಳಿ: ಸತತ ಜಡಿ ಮಳೆ ನಂತರ ಬಿರುಸಿನ ಗಾಳಿ ಬೀಸುತ್ತಿದ್ದು, ಕಳೆದೆರಡು ದಿನಗಳಿಂದ ಗಾಳಿಯ ಪ್ರಮಾಣ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಮನೆಯ ಸಮೀಪ ಕಾಡು ಮರ ಅಥವಾ ತೆಂಗು, ಅಡಕೆ ಮರವಿರುವ ಮನೆಗಳು ಆತಂಕದಲ್ಲಿ ದಿನ ದೂಡುವಂತಾಗಿದೆ. ಮನೆಯ ಸಮೀಪ ವಿದ್ಯುತ್‌ ಲೈನ್‌, ಕಾಡು ಮರಗಳಿದ್ದರೆ ತೆರವುಗೊಳಿಸದಿದ್ದರೆ ತೊಂದರೆಯಾಗುವುದು ಖಚಿತವಾಗಿದೆ.

ಅಪಾಯಕಾರಿ ಮರ: ಶೃಂಗೇರಿ ಜಯಪುರ ರಾಜ್ಯ ಹೆದ್ದಾರಿ ಮೆಣಸೆ ಬಳಿ ಅನೇಕ ಕಾಡು ಮರಗಳಿದ್ದು,ರಸ್ತೆಗೆ ಬಾಗಿಕೊಂಡಿದೆ.ರಸ್ತೆ ಬದಿಯ ಮರಗಳು ಡಾಂಬರು ರಸ್ತೆಗೂ ಹಾನಿ ಉಂಟು ಮಾಡುವುದಲ್ಲದೇ, ಮೇ ಫ್ಲವರ್‌ನಂತಹ ಮರಗಳು ಸೂಕ್ಷ್ಮವಾಗಿದ್ದು, ಬೇಗ ಮುರಿದು ಬೀಳುತ್ತದೆ. ಇದು ದ್ವಿಚಕ್ರ ಹಾಗೂ ಇತರೆ ವಾಹನಗಳಿಗೂ ಅಪಾಯ ಉಂಟು ಮಾಡಲಿದೆ. ಇಂಥಹ ಮರಗಳ ರೆಂಬೆಯನ್ನು ಕಟಾವು ಮಾಡಬೇಕಿದೆ. 

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.