ಚಿಂತಾಮಣಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ| ಕೊಲೆಯಲ್ಲಿ ಅಂತ್ಯ
Team Udayavani, Sep 13, 2021, 9:25 PM IST
ಚಿಂತಾಮಣಿ : ಕ್ಷುಲ್ಲಕ ಕಾರಣಕ್ಕೆ ಇಬ್ಬರ ವ್ಯಕ್ತಿಗಳ ಮದ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದಲ್ಲಿಸೋಮವಾರ ನಡೆದಿದೆ.
ನಗರದ ಆಗ್ರಹಾರ ನಿವಾಸಿ ಸೈಯದ್ ಮುಷ್ಠಾಕ್ ಎಂಬಾತ ಕೊಲೆಯಾಗಿದ್ದು, ಮೃತನಿಗೆ ಆರೋಪಿ ಮೂರು ಬಾರಿ ಚಾಕುಗಳಿಂದ ಇರಿತಿರುವುದಾಗಿ ತಿಳಿದು ಬಂದಿದೆ.
ನಗರದ ಆಜಾದ್ ಚೌಕದಲ್ಲಿ ಮೃತ ವ್ಯಕ್ತಿ ಸೈಯದ್ ಮುಷ್ಠಾಕ್ ಮತ್ತೊಬ್ಬರ ಮದ್ಯೆ ಗಲಾಟೆ ಅಗಿದ್ದು ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆರೋಪಿ ಮುಷ್ಠಾಕ್ ಗೆ ಚಾಕುವಿನಿಂದ ಇರಿದಿದ್ದಾನೆ.
ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ ಪಿ ಮಿಥುನ್ ಕುಮಾರ್, ಡಿವೈ ಎಸ್ ಪಿ ಲಕ್ಷ್ಮಯ್ಯ ಘಟಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.