ಭರಮಸಾಗರ: ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು
Team Udayavani, Jul 5, 2022, 3:58 PM IST
ಭರಮಸಾಗರ: (ಚಿತ್ರದುರ್ಗ) : ಸಮೀಪದ ಅಳಗವಾಡಿಯ ಉಣ್ಣೆ ಬಸಪ್ಪನ ಗುಡಿ ಬಳಿ ಚಿರತೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದನ್ನು ಕಾರೊಂದರ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಕೆಲ ದಿನಗಳಿಂದ ಚಿರತೆಗಳು ಅಳಗವಾಡಿ ಗುಡ್ಡಗಳಿಗೆ ಹೊಂದಿಕೊಂಡ ಅರಣ್ಯ ಭಾಗಗಳಲ್ಲಿ ನೆಲೆಸಿದೆ. ಸೋಮವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರಿಗೆ ರಸ್ತೆ ಪಕ್ಕದಲ್ಲಿ ಚಿರತೆ ದರ್ಶನ ನೀಡಿದೆ. ಚಿರತೆಯ ವಿಡಿಯೋ ಮಾಡಿ ಕಾರು ಪ್ರಯಾಣಿಕರು ಸ್ಥಳೀಯ ರೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಚಿರತೆ ವಿಡಿಯೋ ಅಳಗವಾಡಿ ಸುತ್ತಮುತ್ತಲಿನ ಓಬಳಾಪುರ, ಪಳಕೆಹಳ್ಳಿ, ಬಾವಿಹಾಳ್, ಜಮ್ಮೆನಹಳ್ಳಿ, ದೊಡ್ಡಿಗನಾಳ್ , ಹಳವುದರ, ಪುಡಕಲಹಳ್ಳಿ ಸೇರಿದಂತೆ ಇತರೆ ಹಳ್ಳಿಗಳ ಜನರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.
ಇದೀಗ ಚಿರತೆಗಳ ಇರುವಿಕೆ ಸ್ಥಳೀಯ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಮನವರಿಕೆ ಆಗಿದೆ. ಅಲ್ಲದೆ ನಾಲ್ಕಾರು ಚಿರತೆಗಳು ಇಲ್ಲಿನ ಅರಣ್ಯದಲ್ಲಿ ನೆಲೆಸಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.
ಪ್ರತಿ ವರ್ಷ ಈ ದಿನಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ ತರುವಾಯ ಕಾಡು ಹಂದಿಗಳ ಕಾಟ ಶುರುವಾಗುತ್ತಿತ್ತು. ಬಿತ್ತನೆ ಮಾಡಿದ ದಿನದಿಂದ ಸರಿಸುಮಾರು ಹತ್ತು ದಿನಗಳ ವರೆಗೆ ರೈತರಿಗೆ ಬಿತ್ತನೆ ಮಾಡಿದ ಜಮೀನುಗಳನ್ನು ಹಂದಿಗಳ ದಾಳಿಗೆ ತುತ್ತಾಗದಂತೆ ರಾತ್ರಿಯೆಲ್ಲ ಕಾವಲು ಕಾಯಬೇಕಿತ್ತು. ಆದರೆ ಇಲ್ಲಿನ ಗುಡ್ಡಗಳಲ್ಲಿ ಚಿರತೆಗಳು ಇರುವುದರಿಂದಲೇ ಏನು ಈ ವರ್ಷ ಹಂದಿಗಳ ಕಾಟ ಕಡಿಮೆ ಆಗಿದೆ.
ಇದರಿಂದ ನಮ್ಮಲ್ಲಿನ ಬಿತ್ತನೆ ಮಾಡಿದ ಮೆಕ್ಕೆಜೋಳ ಹೊಲಗಳಲ್ಲಿ ರಾತ್ರಿ ಕಾವಲು ಮಾಡುವುದನ್ನು ಕೆಲ ರೈತರು ಕೈ ಬಿಟ್ಟಿದ್ದರು. ಹೀಗಾಗಿ ಚಿರತೆಗಳ ಇರುವಿಕೆ ಈ ಮೊದಲೇ ನಮಗೆ ಖಚಿತವಾಗಿತ್ತು ಎನ್ನುತ್ತಾರೆ ಅಳಗವಾಡಿ ಗ್ರಾಮಸ್ಥರು.
ಒಟ್ಟಾರೆ ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚರಿಸುವವರು ಚಿರತೆಗಳ ದಾಳಿಗೆ ಒಳಗಾಗದೆ ಎಚ್ಚರಿಕೆಯಿಂದ ಓಡಾಡುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ