ಜಾನಪದ ಸಂಸ್ಕೃತಿ ತಾಯಿ ಬೇರು
ಜಾನಪದ ಸಾಹಿತ್ಯ ಮೂಲ ಹಳ್ಳಿ•ಜನಜೀವನದ ಸಂಕೇತ ಜಾನಪದ
Team Udayavani, Aug 25, 2019, 9:50 AM IST
ಚಿತ್ತಾಪುರ: ಕನ್ನಡ ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಉದ್ಘಾಟಿಸಿದರು.
ಚಿತ್ತಾಪುರ: ಜಾನಪದ ಕ್ಷೇತ್ರವು ಎಲ್ಲ ಸಾಹಿತ್ಯ, ಸಂಸ್ಕೃತಿಗೂ ತಾಯಿ ಬೇರು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಹೇಳಿದರು.
ಪಟ್ಟಣದ ಆರ್.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಬುದ್ಧಿ, ಮನಸ್ಸು ವಿಕಾಸವಾದಂತೆಲ್ಲ ಜಾನಪದ ಕಲೆಗಳು ಹೊರಹೊಮ್ಮಿದವು. ಜಾನಪದವು ಜನ ಸಮುದಾಯದ ಸಾಮಾಜಿಕ ಜೀವನದ ಸಂಕೇತ. ರಾಷ್ಟ್ರೀಯ ಸಂಸ್ಕೃತಿಯ ತಾಯಿ ಬೇರು ಎಂದು ಹೇಳಿದರು.
ಜಾನಪದ ಕ್ಷೇತ್ರವು ಮನುಷ್ಯನ ಜೀವನ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಮನುಷ್ಯನ ವೈವಿಧ್ಯಮಯ ಬದುಕಿನ ಗುಣಲಕ್ಷಣಗಳನ್ನು ಪದಗಳ ಮೂಲಕ ಕಟ್ಟಿಕೊಡುತ್ತದೆ. ಮಾನವ ಸಂಸ್ಕೃತಿಯ ಆರಂಭದಿಂದಲೇ ಆರಂಭವಾದ ಜಾನಪದ ಮಾನವ ಕುಲ ಉಳಿದಿರುವವರೆಗೂ ಉಳಿಯುತ್ತದೆ ಎಂದರು. ಪ್ರಾಚಾರ್ಯ ಡಾ| ವಿಜಯಕುಮಾರ ಸಾಲಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯದ ಮೂಲ ಹಳ್ಳಿಗಳಿಂದ ಕೂಡಿದ್ದು, ಇಂದಿಗೂ ಜಾನಪದ ಸೊಗಡು ಜೀವಂತಿಕೆ ಹಳ್ಳಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.
ಪ್ರಾಧ್ಯಪಕ ಡಾ| ಬಿ.ಕೆ. ಪಂಡಿತ ವಿಶ್ವ ಜಾನಪದ ದಿನಾಚರಣೆ, ಪ್ರೊ| ಮಲ್ಲಪ್ಪ ಮಾನೇಗಾರ ವಿಶ್ವ ಬುಡಕಟ್ಟು ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಚನ್ನವೀರ ಕಣ್ಣಗಿ, ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ಪಾಟೀಲ, ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಮಾರುತಿ ಎಂ. ಮಾತನಾಡಿದರು.
ಇದೇ ವೇಳೆ ಜಾನಪದ ಕಲಾವಿದರಾದ ಗುರುಲಿಂಗಯ್ಯಸ್ವಾಮಿ ಮುತ್ತಗಾ, ಶಂಕ್ರಮ್ಮ ರಾಮತೀರ್ಥ, ದುಂಡಪ್ಪ ಗುಡ್ಲಾ ಕೊಲ್ಲೂರ, ಬಸವರಾಜ ಅವಂಟಿ ದಿಗ್ಗಾಂವ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಎ.ಜಿ. ಖಾನ್, ಡಾ| ಸಾವಿತ್ರಿ ಕುಲಕರ್ಣಿ, ಡಾ| ಸಾವಿತ್ರಿ ದೇಸಾಯಿ, ಡಾ| ನುಜಹತ್ ಪರವೀನ್, ಪೂಜಾ ಹೊನಗುಂಟಿ, ವಿನಯ ಕಣ್ಣೂರ್, ಕಜಾಪ ಪದಾಧಿಕಾರಿಗಳಾದ ಜಗದೇವ ಕುಂಬಾರ, ರಾಜೇಂದ್ರ ಕೊಲ್ಲೂರ, ಬಸವರಾಜ ಹೊಟ್ಟಿ ಇತರರು ಇದ್ದರು. ಮಲ್ಲಪ್ಪ ಪ್ರಾರ್ಥಿಸಿದರು, ಡಾ| ಅನೀಲ ಮಂಡೋಲಕರ್ ಸ್ವಾಗತಿಸಿದರು, ಡಾ| ಶರಣಪ್ಪ ದಿಗ್ಗಾಂವ ನಿರೂಪಿಸಿದರು, ಮರೇಪ್ಪ ಮೇತ್ರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ