ತಂದೆಯ ಸಾವಿನ ಸುದ್ದಿ ಬಂದಾಗ ಅಂಬಿ ಮಂಗಳೂರಿನಲ್ಲಿದ್ದರು!


Team Udayavani, Nov 26, 2018, 11:32 AM IST

ambi.jpg

ಮಂಗಳೂರು: “ಕುದುರೆಮುಖ ಚಿತ್ರದ ಶೂಟಿಂಗ್‌ ಚಿಕ್ಕ ಮಗಳೂರಿನಲ್ಲಿ ನಡೆಯುತ್ತಿತ್ತು. ಪಡುವಾರಹಳ್ಳಿ ಪಾಂಡವರು ಶೂಟಿಂಗ್‌ ಮಂಗಳೂರಿನಲ್ಲಿ. ನನ್ನ ಬಳಿ ಡೇಟ್ಸ್‌ ಇರಲಿಲ್ಲ. ನೀನೇ ಬರಬೇಕು ಎಂದು ನಿರ್ದೇಶಕ ಪುಟ್ಟಣ್ಣ ಒತ್ತಾಯಿಸಿದ್ದರು. ಹಾಗೆ ಚಿಕ್ಕಮಗಳೂರಿನಿಂದ ಹೊರಟು ಮಂಗಳೂರು ಸರ್ಕಲ್‌ಗೆ ಬಂದಿದ್ದೆ. ಅಲ್ಲಿಗೆ ಬಂದ ಸ್ನೇಹಿತರು ಶೂಟಿಂಗ್‌ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗುವ ಬದಲು ಗೆಸ್ಟ್‌ಹೌಸ್‌ಗೆ 
ಕರೆದು ಕೊಂಡು ಹೋದರು. ಶೂಟಿಂಗ್‌ ಎಲ್ಲಿ ಎಂದು ಕೇಳಿದಾಗ ನನ್ನ ತಂದೆಯ ಸಾವಿನ ಸುದ್ದಿಯನ್ನು ಅವರು ನೀಡಿದರು…’ 

ಹೀಗೆಂದು ಕೆಲವೇ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು ನಟ ಅಂಬರೀಷ್‌! ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌, ನಟ ಅಂಬರೀಷ್‌ ಅವರ ಸಾವಿನ ಸುದ್ದಿಯಿಂದ ನಾಡು ದುಃಖತಪ್ತವಾಗಿದೆ. ಈ ಹಿರಿಯ ನಟ ಅಂಬರೀಷ್‌ ಅವರು ಒಬ್ಬ ನಟ ನಾಗಿ ಮತ್ತು ರಾಜಕಾರಣಿಯಾಗಿ ಹಲವು ಬಾರಿ ಮಂಗಳೂರು ಮತ್ತು ಕರಾ ವಳಿಗೆ ಬಂದು ಹೋಗಿದ್ದರು. ಅಂಬರೀಷ್‌ ಅವರ ಕರಾವಳಿ ನಂಟಿನ ಬಗ್ಗೆ ಮೆಲುಕು ಹಾಕಿದಾಗ ಇಂಥ ಹಲವು ಗಮನಾರ್ಹ ಸಂಗತಿಗಳು ನೆನಪಾಗುತ್ತವೆ. ಸಿನೆಮಾ ಮೂಲಕವೇ ಎಲ್ಲೆಡೆ ಜನಪ್ರೀತಿ ಗಳಿಸಿದ ಅಂಬರೀಷ್‌ ಸಿನೆಮಾ ಶೂಟಿಂಗ್‌ ಸಮಯದಲ್ಲಿ ಆಗಾಗ್ಗೆ ಕರಾವಳಿಗೆ ಆಗಮಿಸುತ್ತಿದ್ದರು. ಸಚಿವರಾಗಿದ್ದಾಗ, ಕೆಲವು ವರ್ಷಗಳ ಹಿಂದೆ ಒಂದೆರಡು ಬಾರಿ ಕರಾವಳಿಗೆ ಆಗಮಿಸಿದ್ದರು.

ಅಂಬರೀಷ್‌ ಅವರು ಮಂಗಳೂರಿಗೆ ಬಂದರೆ ಬಹುತೇಕ ಆಗಿನ ಹೊಟೇಲ್‌ ವುಡ್‌ಸೈಡ್‌ (ಈಗಿನ ಸಿಟಿ ಸೆಂಟರ್‌ ಇರುವ ಜಾಗ)ನಲ್ಲಿ ಉಳಿದು ಕೊಳ್ಳುತ್ತಿದ್ದರು. ಬಹುತೇಕ ಸ್ನೇಹಿತರು ಆ ವೇಳೆ ಅಂಬರೀಷ್‌ ಅವರನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಿದ್ದರು. ಮಾಲಕರಾದ ಅಪ್ಪಾಜಿ ನಾಯ್ಕ ಅವರ ಜತೆಗೆ ಸ್ನೇಹ ಸಂಪಾದಿಸಿದ್ದ ಅವರು ಆತ್ಮೀಯ ಒಡನಾಡಿಯಾಗಿದ್ದರು. 

ವಾಮಂಜೂರಿನ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಸ್ಯಾಂಡಲ್‌ವುಡ್‌ನ‌ ಎಲ್ಲ ಕಲಾವಿದರನ್ನು ಮಂಗಳೂರಿಗೆ ಕರೆ ತಂದು ಇಲ್ಲಿ ಸಂಗೀತ ರಸಮಂಜರಿಯನ್ನು ಆಯೋಜಿಸಿದ್ದರು. 1991ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸಂಘಟಿಸಿದ್ದ ಈ ಸಂಗೀತ ಕಾರ್ಯಕ್ರಮದಲ್ಲಿ  ಡಾ| ರಾಜ್‌ಕುಮಾರ್‌ ಸಹಿತ ಸ್ಯಾಂಡಲ್‌ವುಡ್‌ನ‌ ಖ್ಯಾತ ಕಲಾವಿದರು ಭಾಗವಹಿಸಿದ್ದರು. ಎಲ್ಲ ಕಲಾವಿದರನ್ನು ಜೋಡಿಸಿ ಕಾರ್ಯ  ಕ್ರಮ ಆಯೋಜನೆಯ ಜವಾಬ್ದಾರಿಯನ್ನು ಅಂಬರೀಷ್‌ ಅವರೇ ವಹಿಸಿಕೊಂಡಿದ್ದರು ಎಂದು ನೆನಪು ಮಾಡು ತ್ತಾರೆ ತಮ್ಮ ಲಕ್ಷ್ಮಣ. 

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ “ಉದಯವಾಣಿ’ ಜತೆಗೆ ಮಾತನಾಡಿ, ಕರಾವಳಿ ಭಾಗದೊಂದಿಗೆ ಅಂಬರೀಷ್‌ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಕೆಲವು ಸಿನೆಮಾಗಳ ಶೂಟಿಂಗ್‌ ಸಮಯದಲ್ಲಿ ಅವರು ಮಂಗಳೂರಿನಲ್ಲಿಯೇ ಉಳಿದು ಕೊಳ್ಳುತ್ತಿದ್ದರು. ವಿಶೇಷವಾಗಿ ಅವರು ಮಂಗಳೂರು ವ್ಯಾಪ್ತಿಯಲ್ಲಿ ಹಲವು ಜನ ಸ್ನೇಹಿತರನ್ನು ಹೊಂದಿದ್ದರು. ಅಶಕ್ತ ಮಕ್ಕಳಿಗೆ ನೆರವು ನೀಡುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಂಬರೀಷ್‌ ಅವರ ನೇತೃತ್ವದಲ್ಲಿಯೇ ಸಂಗೀತ ರಸಮಂಜರಿ ಕಾರ್ಯಕ್ರಮವನ್ನೂ ನಡೆಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. 

ಸೋಮೇಶ್ವರದಲ್ಲಿ  “ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ’!
1989ರಲ್ಲಿ ಬಂದ “ಇಂದ್ರಜಿತ್‌’ ಸಿನೆಮಾದ ಅಂಬರೀಷ್‌ ಮತ್ತು ದೀಪಿಕಾ ಜೋಡಿಯ ಅತ್ಯಂತ ಜನಪ್ರಿಯ ಹಾಡು “ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ… ಆ ಚಂದ್ರನಾ ಆಗಮನಾ…’ ಶೂಟಿಂಗ್‌ ಸೋಮೇಶ್ವರದಲ್ಲಿ ನಡೆದಿತ್ತು. ಇನ್ನು ಅಂಬರೀಷ್‌, ಶ್ರೀನಾಥ್‌ ಮತ್ತು  ಶಿವರಾಮ್‌ ತಾರಾಗಣದಲ್ಲಿ  ಮೂಡಿಬಂದ “ಶುಭಮಂಗಳ’ ಸಿನೆಮಾದ ಶೂಟಿಂಗ್‌ ಮಂಗಳೂರಿನಲ್ಲಿ  ನಡೆದಿತ್ತು. ಇದರ ಬಹುತೇಕ ಚಿತ್ರೀಕರಣ ಕರಾವಳಿಯಲ್ಲಿಯೇ ಆಗಿತ್ತು ಎಂಬುದು ವಿಶೇಷ. ನಗರದ ಫಳ್ನೀರ್‌ನ ಮನೆಯೊಂದರಲ್ಲಿ  ಇದರ “ಸೂರ್ಯಂಗೂ ಚಂದ್ರಂಗೂ ಬಂದರೆ ಮುನಿಸು’ ಹಾಡಿನ ಚಿತ್ರೀಕರಣ ನಡೆದಿತ್ತು. ಉಳಿದಂತೆ ಪಡುವಾರಹಳ್ಳಿ ಪಾಂಡವರು, ಒಂಟಿ ಸಲಗ ಸಹಿತ ಕೆಲವು ಸಿನೆಮಾಗಳಲ್ಲಿ ಅಭಿನಯಿಸುವ ಕಾರಣಕ್ಕಾಗಿ ಅಂಬರೀಷ್‌ ಅವರು ಕರಾವಳಿಗೆ ಬಂದಿರುವ ಬಗ್ಗೆ ಹಾಗೂ ಇಲ್ಲೇ ಉಳಿದುಕೊಂಡಿರುವ ಬಗ್ಗೆ ಉಲ್ಲೇಖವಿದೆ. 

 ದಿನೇಶ್‌ ಇರಾ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.