ಬಂಟ್ವಾಳ: ಬಡ ಕುಟುಂಬಕ್ಕೆ ಈಗಲೂ ಮುಳಿಹುಲ್ಲಿನ ಸೂರು
Team Udayavani, Jan 7, 2019, 5:52 AM IST
ಬಂಟ್ವಾಳ : ಸರಕಾರ ನೀಡುವ ಸವಲತ್ತುಗಳು ಗ್ರಾಮಾಂತರ ಜನತೆಗೆ ಮುಟ್ಟಿಸುವಲ್ಲಿನ ವೈಫಲ್ಯಕ್ಕೆ ಸಾಕ್ಷಿಯೋ ಎಂಬಂತೆ ಬಂಟ್ವಾಳ ತಾ|ನಲ್ಲಿ 5 ಬಡ ಕುಟುಂಬಗಳು ಮುಳಿ ಹುಲ್ಲಿನ ಮನೆ ಯಲ್ಲಿ ಇಂದಿಗೂ ವಾಸ್ತವ್ಯ ಹೊಂದಿವೆ.
ಐದು ಮುಳಿಹುಲ್ಲಿನ ಮನೆ
ಇಲಾಖೆ ಅಂಕಿಅಂಶ ಪ್ರಕಾರ ಬಂಟ್ವಾಳ ತಾ|ನಲ್ಲಿ 5 ಮುಳಿಹುಲ್ಲಿನ ಮನೆಗಳಿವೆ. ಪಂಜಿಕಲ್ಲು ಗ್ರಾಮದಲ್ಲಿ ಕೇಶವ ಭಂಡಾರಿ ಮುಳಿಹುಲ್ಲಿನ ಮನೆಯಲ್ಲಿ ಈಗಲೂ ವಾಸ್ತವ್ಯ ಇದ್ದಾರೆ. ಅವರಿಗೆ ಸ್ವಂತ ಜಮೀನು ಇದೆ. ಕೃಷಿ ಕೂಲಿ ಕಾರ್ಮಿಕರು. ಬಸವ ಹೆಚ್ಚುವರಿ ವಸತಿ ಯೋಜನೆಯ ಫಲಾನುಭವಿ ಆಗಿದ್ದರೂ ಅದೇ ಹಣದಿಂದ ಮನೆ ನಿರ್ಮಾಣ ಪೂರ್ಣ ಗೊಳಿಸಲು ಸಾಧ್ಯ ವಾಗಿಲ್ಲ. ಯೋಜನೆ ಹಣ ಮನೆ ನಿರ್ಮಾ ಣಕ್ಕೆ ಸಾಕಾಗುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಪುಣಚ ಗ್ರಾಮದ ದೇವಿನಗರದ ಯಮುನಾ ಕೊರಗಪ್ಪ ಮೇರ ಅವರು ಧಣಿಯ ಪಟ್ಟಾ ಜಮೀನಿನ ಮುಳಿಹುಲ್ಲಿನ ಮನೆಯಲ್ಲಿ ವಾಸ್ತವ್ಯ ಇದ್ದಾರೆ. ಸರಕಾರದಿಂದ ಅವರಿಗೆ ಜಮೀನು ಮಂಜೂರು ಆಗಿದೆ. ಮನೆ ನಿರ್ಮಿಸಲು ನೀಡಬೇಕಾದ ಯೋಜನೆ ವಿವಿಧ ಕಾರಣ ಗಳಿಂದ ಮಂಜೂರಾತಿ ಆಗಿಲ್ಲ. ಪುಣಚ ಗ್ರಾಮದ ಕಂಬಳಿಮೂಲೆ ನಿವಾಸಿ ವಸಂತಿ ಶಾಂತಪ್ಪ ಗೌಡ ಮುಳಿ ಹುಲ್ಲಿನ ಛಾವಣಿಗೆ ಪ್ಲಾಸ್ಟಿಕ್ ಹೊದೆಸಿ ಅದರಲ್ಲಿ ವಾಸ್ತವ್ಯ ಇದ್ದಾರೆ.
ಕಳ್ಳಿಗೆ ಗ್ರಾಮ ಪಚ್ಚಿನಡ್ಕ ಚಿತ್ರಕಲಾ ಬಿನ್ ಮೋಹನ ಅವರು ಮುಳಿಹುಲ್ಲಿನ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ. ಜಮೀನು ಹಕ್ಕುಪತ್ರ ಸಮರ್ಪಕ ಇಲ್ಲದ ಕಾರಣ ಅವರಿಗೆ ಸರಕಾರದ ಯೋಜನೆ ಅನುಷ್ಠಾನಿಸುವಲ್ಲಿ ವ್ಯವಸ್ಥೆಗಳು ಆಗಿಲ್ಲ.
ಕನ್ಯಾನ ಗ್ರಾಮದ ನಾರಾಯಣ ಮೂಲ್ಯ ಸರಕಾರಿ ಜಮೀನಿನಲ್ಲಿ ಇದ್ದಂತಹ ಮುಳಿಹುಲ್ಲಿನ ಮನೆಯಲ್ಲಿ ವಾಸ್ತವ್ಯ ಇದ್ದವರು. ಮಳೆಗಾಲದಲ್ಲಿ ಮುಳಿ ಹುಲ್ಲಿನ ಮನೆಗೆ ಪ್ಲಾಸ್ಟಿಕ್ ಹೊದೆಸಿದರೂ ಬಿದ್ದು ಹೋಗಿದ್ದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಸರಕಾರದಿಂದ ಪ್ರತ್ಯೇಕ ಜಮೀನು ಮಂಜೂರಾತಿ ನೀಡಲಾಗಿದೆ. ಛಾವಣಿ ಮನೆಯಾಗಿ ಪರಿವರ್ತಿಸುವುದಕ್ಕೆ ಕ್ರಮ ಆಗಿಲ್ಲ.
ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಅಂಕಿಅಂಶ ಪ್ರಕಾರ ತಾ|ನಲ್ಲಿ 4,350 ಮಂದಿ ಮನೆ ಇಲ್ಲದವರಿದ್ದಾರೆ. 9,620 ಮಂದಿ ನಿವೇಶನ ರಹಿತರಾಗಿದ್ದಾರೆ. ಒಟ್ಟು 13,970 ಮಂದಿ ವಸತಿ ರಹಿತರಾಗಿದ್ದಾರೆ. 21,905 ಸಂಖ್ಯೆ ವಸತಿ ಭಾಗ್ಯ ಪಡೆದವರಲ್ಲಿ 4,864 ಮಂದಿ ಮನೆ ನಿರ್ಮಿಸಿಕೊಂಡಿಲ್ಲ. ಮುಳಿಹುಲ್ಲಿನ ಮನೆಮಂದಿಯನ್ನು ಈಗಾಗಲೇ ಪಿಡಿಒ ಮೂಲಕ ಸಂಪರ್ಕಿಸಿ ಸರಕಾರದ ನಿಯಮಾನುಸಾರ ಮನೆ ನೀಡುವ ಕ್ರಮವನ್ನು ಮಾಡಲಾಗಿದೆ. ವಿಷಯ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ರಾಜಣ್ಣ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ
ಫಲಾನುಭವಿಗಳನ್ನು ಸಂಪರ್ಕಿಸಿ ಕ್ರಮ
ಮುಳಿಹುಲ್ಲಿನ ಮನೆಯನ್ನು ಛಾವಣಿ ಮನೆಯಾಗಿ ಪರಿವರ್ತಿಸಲು ಸರಕಾರದಿಂದ ಸಾಕಷ್ಟು ಯೋಜನೆಗಳು ಇವೆ. ನಿಯಮಾನುಸಾರ ಕ್ರಮ ಆಗುವುದು ಅವಶ್ಯ. ಫಲಾನುಭವಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಗಮನ ಹರಿಸುತ್ತೇನೆ. ಬಡವರಿಗೆ ನೆರವಾಗುವಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮದ ಬದಲು ಹೊಂದಾಣಿಕೆ ಒಡಂಬಡಿಕೆಯಲ್ಲಿ ಕೆಲಸ ಸಾಧಿಸಬೇಕು.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು,
ಶಾಸಕರು
ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ