ಭಾರೀ ಗಾಳಿ ಮಳೆಗೆ ಕಡಲ ಕಿನಾರೆಗೆ ಬಂದು ನಿಂತ ಮೀನುಗಾರಿಕಾ ಬೋಟ್ ಗಳು!
Team Udayavani, Mar 30, 2021, 9:32 AM IST
ಮಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ನಡೆದ ಸುರಿದ ಧಾರಾಕಾರ ಗಾಳಿ ಮಳೆಗೆ ಮಂಗಳೂರನ ಹಳೆಯ ಧಕ್ಕೆಯಲ್ಲಿ ಲಂಗರು ಹಾಕಿದ ಬೋಟುಗಳ ಹಗ್ಗ ತುಂಡಾಗಿ ಹಲವಾರ ಬೋಟುಗಳು ಗಾಳಿಗೆ ಪಣಂಬೂರು ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಸಮುದ್ರ ಕಿನಾರೆಗೆ ಬಂದ ಘಟನೆ ನಡೆದಿದೆ.
ಇದರಿಂದಾಗಿ ಹಲವಾರು ಬೋಟುಗಳು ಹಾಳಾಗಿದ್ದು, ಮೀನುಗಾರರು ತುಂಬಾ ನಷ್ಟ ಅನುಭವಿಸಿದ್ದಾರೆ.
ಇದನ್ನೂ ಓದಿ:ಕರಾವಳಿ ಅಭಿವೃದ್ಧಿಗೆ ವಿಷನ್ ಗ್ರೂಪ್ ರಚನೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ, ಉಡುಪಿ ಜಿಲ್ಲೆಯ ಕೆಲವೆಡೆ ಸೋಮವಾರ ಅಪರಾಹ್ನ ಮತ್ತು ರಾತ್ರಿ ಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿದಿದೆ.
ಇದನ್ನೂ ಓದಿ: ಸೂಯೆಜ್: ಸಾಗರದ ಶತಮಾನಗಳ ಪ್ರಮುಖ ಕೊಂಡಿ
ಕೆಲವೆಡೆ ಮರ ಬಿದ್ದು ಸಂಚಾರ ಸಮಸ್ಯೆ ಎದುರಾಯಿತು. ಜತೆಗೆ ಭಾರೀ ಗಾಳಿಯ ಹಿನ್ನೆಲೆಯಲ್ಲಿ ಕೆಲವೆಡೆ ಮರದ ಕೊಂಬೆ ಬಿದ್ದು ಸಮಸ್ಯೆ ಉಂಟಾಯಿತು. ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ.