ಪಳ್ಳತ್ತೂರು ಸೇತುವೆ ಸಮೀಪ ಪಾಲ ನಿರ್ಮಾಣ
Team Udayavani, Nov 3, 2018, 10:08 AM IST
ಈಶ್ವರಮಂಗಲ: ಕೇರಳದ ಲೋಕೋಪಯೋಗಿ ಇಲಾಖೆಯಿಂದ ಪಳ್ಳತ್ತೂರುನಲ್ಲಿ ಸರ್ವಋತು ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರ ಸಮೀಪವೇ ಅಡಿಕೆ ಮರವನ್ನು ಬಳಸಿ ಸ್ಥಳೀಯರು ಪಾಲ ನಿರ್ಮಾಣ ಮಾಡಿದ್ದು, ಇದರ ಮೂಲಕ ಕೊಟ್ಯಾಡಿ ಜಂಕ್ಷನ್, ಆದೂರುಗಳಿಗೆ ಹೋಗುವವರು ಮತ್ತು ಸ್ಥಳೀಯ ನಿವಾಸಿಗಳಿಗೆ ಬಹಳ ಅನುಕೂಲವಾಗಿದೆ.
ಹೊಳೆಯಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚು ಇತ್ತು. ಇಲ್ಲಿನ ಸ್ಥಳೀಯ ನಿವಾಸಿಗಳು ಸುತ್ತುಬಳಸಿ ಪಳ್ಳತ್ತೂರಿಗೆ ಬರಬೇಕಾಗಿತ್ತು. ಇದೀಗ ನೀರಿನ ಹರಿವು ಕಡಿಮೆ ಇರುವುದರಿಂದ ಸ್ಥಳೀಯರು ನಾಲ್ಕು ಅಡಿಕೆ ಮರವನ್ನು ಅಡ್ಡ ಹಾಕಿ ಪಾಲವನ್ನು ನಿರ್ಮಿಸಿದ್ದಾರೆ. ಕಬ್ಬಿಣದ ಸರಳನ್ನು ಉಪಯೋಗಿಸಿಕೊಂಡು ಹಿಡಿದುಕೊಂಡು ಹೋಗುವಂತೆ ಸರಳನ್ನು ಆಳವಡಿಸಿದ್ದಾರೆ. ಇದರ ಮೂಲಕ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಹೊಳೆಯಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ನೀರು ಇಂಗುವುದರಿಂದ ಆನಂತರ ಮಾರ್ಗ ಮಾಡಿ ಸಂಚ ರಿಸಲು ಸಾಧ್ಯವಾಗಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಕೊಟ್ಯಾಡಿ, ಆಡೂರು ಮೊದಲಾದ ಕಡೆಗೆ ಹೋಗುವ ಸರಕಾರಿ, ಖಾಸಗಿ ಬಸ್ಸುಗಳು ಸೇತುವೆಯ ಕಾಮಗಾರಿ ನಡೆಯುತ್ತಿರುವುದರಿಂದ ಪಳ್ಳತ್ತೂರು ವರೆಗೆ ಬಂದು ಹಿಂದಿರುಗಿ ಹೋಗುತ್ತಿದೆ. ಇಲ್ಲಿಂದ ಕೊಟ್ಯಾಡಿಗೆ ಕೇವಲ ಒಂದು ಕಿ.ಮೀ. ಇದೆ. ಇಲ್ಲಿಗೆ ಬಂದರೆ ಮುಳ್ಳೇರಿಯಾ, ಕಾಸರಗೋಡು, ಆಡೂರು ಕಡೆಗೆ ಹೋಗಬಹುದು. ಸೇತುವೆ ಬಳಿಯೇ ಕೇರಳ ಪ್ರದೇಶವಾಗಿರುವುದರಿಂದ ಇಲ್ಲಿ ರಿಕ್ಷಾ ಬಾಡಿಗೆ ಮಾಡಿ ಕೊಟ್ಯಾಡಿಗೂ ಹೋಗಬಹುದು. ಕೊಟ್ಯಾಡಿಯಿಂದ ನಡೆದುಕೊಂಡು ಹೋಗುವವರು ಪಳ್ಳತ್ತೂರುವಿಗೆ ಬಂದು ಸರಕಾರಿ, ಖಾಸಗಿ ಬಸ್ಸುಗಳನ್ನು ಅವಲಂಬಿಸಿ ಹೋಗಬಹುದು.
ಕೊಟ್ಯಾಡಿ-ಪಳ್ಳತ್ತೂರು ಹಾದಿ ಸುಗಮ!
ಪಳ್ಳತ್ತೂರು ಪ್ರದೇಶದಿಂದ ಸೇತುವೆ ಇದ್ದರೆ ಕೊಟ್ಯಾಡಿಗೆ ಕೇವಲ ಒಂದು ಕಿ.ಮೀ. ಆಗುತ್ತದೆ. ಆದರೆ ಈಗ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನದಲ್ಲಿ ಹೋಗುವುದಾದರೆ ಪಂಚೋಡಿ, ಕರ್ನೂರು, ಗಾಳಿಮುಖವಾಗಿ ಕೊಟ್ಯಾಡಿಗೆ ಬರಬೇಕಾಗುತ್ತದೆ. ಅದು 8 ಕಿ.ಮೀ. ದೂರದ ದಾರಿ. ಪಾಲ ರಚಿಸಿರುವುದರಿಂದ ಒಂದು ಕಿ.ಮೀ. ದೂರ ನಡೆದುಕೊಂಡು ಹೋದರೆ ಅಲ್ಲಿ ತಲುಪಬಹುದಾಗಿದೆ.
10 ನಿಮಿಷ ಸಾಕು
ಅಡಿಕೆ ಮರವನ್ನು ಉಪಯೋಗಿಸಿ ಕಾಲು ಸಂಕ (ಪಾಲ, ಪಾಪು) ಮಾಡಲಾಗಿದೆ. ಇದರಲ್ಲಿ ನಡೆದುಕೊಂಡು ಹೋದರೆ ಪಳ್ಳತ್ತೂರಿಗೆ ಕೇವಲ 10 ನಿಮಿಷ ಸಾಕಾಗುತ್ತದೆ. ಇಲ್ಲದಿದ್ದರೆ ಸುಮಾರು 8 ಕಿ.ಮೀ. ದೂರ ಸುತ್ತು ಬಳಸಿ ಹೋಗಬೇಕಾಗುತ್ತದೆ. ಇದರಿಂದ ಸಮಯ, ಹಣ ಉಳಿತಾಯವಾಗುತ್ತದೆ.
– ಪ್ರವೀಶ್ ಸ್ಥಳೀಯ ನಿವಾಸಿ
ಶೀಘ್ರ ಮುಗಿಸಿ
ಸೇತುವೆ ಕಾಮಗಾರಿ ಆರಂಭವಾದ ಕಾರಣ ಬಾಡಿಗೆ ಕಡಿಮೆಯಾಗಿದೆ. ಪಳ್ಳತ್ತೂರಿನಿಂದ ಕೊಟ್ಯಾಡಿಗೆ ಹೋಗುವವರು ನಡೆದುಕೊಂಡು ಹೋಗುತ್ತಾರೆ. ಕೆಲವರು ಮಾತ್ರ ವಾಹನವನ್ನು ಅವಲಂಬಿಸಿದ್ದಾರೆ. ಸೇತುವೆ ಕಾಮಗಾರಿ ವೇಗವಾಗಿ ನಡೆದು ಸಂಚಾರಕ್ಕೆ ಅನುವು ಮಾಡಿಕೊಡಬೇಕು.
- ಮೊಯಿದಿನ್ ವಾಹನ ಚಾಲಕ
ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ