ಕಾರು ಮಾರಾಟ ಪ್ರಕರಣ : ಸಿಐಡಿ ಅಧಿಕಾರಿ ಜತೆ ಆರೋಪಿ ಸಂಭಾಷಣೆ!
Team Udayavani, Mar 5, 2021, 7:08 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಇಬ್ಬರು ಅಧಿಕಾರಿಗಳ ಸಹಿತ ನಾಲ್ಕು ಮಂದಿ ಸಿಸಿಬಿ ಪೊಲೀಸರ ಅಮಾನತಿಗೆ ಕಾರಣವಾದ ಕಾರು ಮಾರಾಟ ಪ್ರಕರಣವು ದಿನಕ್ಕೊಂದು ಬೆಳವಣಿಗೆ ಪಡೆಯುತ್ತಿದ್ದು, ನಾಲ್ವರು ಆರೋಪಿಗಳ ಪೈಕಿ ಒಬ್ಟಾತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಯೊಬ್ಬರ ಜತೆ ಮೊಬೈಲ್ ಫೋನ್ನಲ್ಲಿ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ.
ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾರ್ಕೊಟಿಕ್ ಡ್ರಗ್ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಎಸ್ಐ ಕಬ್ಬಳ್ರಾಜ್, ಎಚ್ಪಿಸಿ ಅಶಿತ್ ಡಿ’ಸೋಜಾ ಮತ್ತು ರಾಜ ಅವರನ್ನು ಅಮಾನತು ಮಾಡಲಾಗಿದೆ. ಅವರಲ್ಲಿ ಒಬ್ಬರು ಸಿಐಡಿ ಅಧಿಕಾರಿಗೆ ಕರೆ ಮಾಡಿ ಮಾತನಾಡಿದ್ದು, ಇದು ಗೃಹ ಇಲಾಖೆ ಮತ್ತು ಹಿರಿಯ ಸಿಐಡಿ ಅಧಿಕಾರಿಗಳ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಕಾರು ಮಾರಾಟ ಮಾತ್ರವಲ್ಲದೆ 2019ರ ಅಕ್ಟೋಬರ್ನಲ್ಲಿ ಸಿಸಿಬಿ ಪೊಲೀಸರು ಮಹಿಳೆಯೊಬ್ಬರ ಹಾಲಿನ ಡೈರಿಗೆ ನುಗ್ಗಿ 86,000 ರೂ. ಹಣವನ್ನು ಕೊಂಡೊಯ್ದ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ಆ ಮಹಿಳೆ ದೂರಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ