ಕರಾವಳಿ ಭಾಗದ ಅಪರಾಧ ಸುದ್ಧಿಗಳು
Team Udayavani, Jul 11, 2019, 5:48 AM IST
ಕಲ್ಪನಾರಲ್ಲಿ ವಂಡ್ಸೆಗೆ ಹೋಗುವ ದಾರಿ ಯಾವುದೆಂದು ಕೇಳಿ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ಕಳವಾದ ಚಿನ್ನದ ಸರ 8 ಗ್ರಾಂ ತೂಕದ್ದಾಗಿದ್ದು, ಅಂದಾಜು 30 ಸಾ. ರೂ. ಮೌಲ್ಯದ್ದಾಗಿದೆ. ಮೊಬೈಲ್ 13 ಸಾ. ರೂ. ಬೆಲೆಯದ್ದಾಗಿದೆ ಎಂದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೇಲ್ನ ಟೆಲ್ ಅವಿವ್ನಲ್ಲಿ ಉದ್ಯೋಗದಲ್ಲಿದ್ದ ಅವರು ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಹೊರಟು ಜು. 9ರಂದು ಬೆಳಗ್ಗೆ ಮುಂಬಯಿ ವಿಮಾನಕ್ಕೆ ತಲುಪಿದ್ದು, ಅಲ್ಲಿಂದ ಮಂಗಳೂರು ವಿಮಾನ ಹತ್ತಲು ಸಿದ್ಧತೆ ನಡೆಸುತ್ತಿದ್ದಾಗ ಘಟನೆ ಸಂಭವಿಸಿದೆ. ಮುಂಬಯಿಯಿಂದ ಮಂಗಳೂರಿಗೆ ಬರುವ ಪ್ರಯಾಣಿಕರ ಒತ್ತಡದಿಂದ ಇವರಿಗೆ ಸಕಾಲದಲ್ಲಿ ವಿಮಾನದ ಟಿಕೆಟ್ ಸಿಕ್ಕಿರಲಿಲ್ಲ ಎಂದು ಹೇಳಲಾಗುತ್ತಿದೆ.
ಉದ್ಯಾವರ: ವಿವಾಹಿತ ನಾಪತ್ತೆ
ಕಾಪು: ಮಲ್ಪೆಯಲ್ಲಿ ಮೀನುಗಾರಿಕಾ ಉದ್ಯಮದಲ್ಲಿ ಪಾಲುದಾರರಾಗಿದ್ದ ಉದ್ಯಾವರ ಸೌಂದರ್ಯ ಕಾಂಪ್ಲೆಕ್ಸ್ ನಿವಾಸಿ ತೀರ್ಥರಾಜ್ ಸಾಲ್ಯಾನ್ (59) ಅವರು ಜು. 9ರಿಂದ ನಾಪತ್ತೆಯಾಗಿದ್ದಾರೆ. ಅವರು ಜು. 9ರಂದು ಮಧ್ಯಾಹ್ನ ಉಡುಪಿಗೆ ಹೋಗಿದ್ದು, ಪತ್ನಿ ಮತ್ತು ಮಗನಿಗೆ ದೂರವಾಣಿ ಕರೆಮಾಡಿ ತಡವಾಗಿ ಬರುವುದಾಗಿ ತಿಳಿಸಿದ್ದರು.ಬುಧವಾರ ಸಂಜೆಯಾದರೂ ಮರಳದ ಕಾರಣ ಪತ್ನಿ ಸುನಂದಾ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂದೂರ್ವೆಲ್ ನಿವಾಸಿ ಡೆವಿನ್ ಪಿಂಟೋ (29) ಬಂಧಿತ ಆರೋಪಿ. ಈತ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ್ದ ಎಂದು ಆರೋಪಿಸಲಾಗಿದೆ.
ಯುವತಿ ಬೊಬ್ಬೆ ಹಾಕಿದಾಗ ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಯಾನ್ಸಿ ಪಿಂಟೋ, ಕಿಶೋರ್ ಕುಮಾರ್, ವಿಠಲ, ಯೋಗೀಶ್, ಭಾಸ್ಕರ, ಸುಂದರ ಮತ್ತು ಮಹಮ್ಮದ್ ಶಾಯಿದ್ ಬಂಧಿತರು.
ಖಚಿತ ಮಾಹಿತಿ ಪಡೆದ ಮೂಲ್ಕಿ ಎ.ಎಸ್.ಐ. ಚಂದ್ರಶೇಖರ್ ಅವರು ತಮ್ಮ ತಂಡದ ಜತೆಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಹೋಗಿ ಆರೋಪಿಗಳನ್ನು ಬಂಧಿಸಿ, ಅವರಿಂದ 7,500 ರೂ. ಅನ್ನು ವಶಪಡಿಸಿಕೊಂಡಿದ್ದಾರೆ.
ಜು. 8ರಂದು ಮಣಿಪಾಲದಲ್ಲಿ ಕೋಟೇಶ್ವರದ ಸುಮಂತ್ ಮಯ್ಯ (23) ಮತ್ತು ಇಂದ್ರಾಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಗಂಗೊಳ್ಳಿಯ ಸಂದೀಪ ಖಾರ್ವಿ(26) ಹಾಗೂ ಜು.9ರಂದು ಮಣಿಪಾಲ ವಿ.ಪಿ.ನಗರದಲ್ಲಿ ಮಹಮ್ಮದ್ ಹಮ್ದನ್ ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಗೋಣಿಕೊಪ್ಪಲು: ಗಾಂಜಾ ಸೇವಿಸುತ್ತಿದ್ದ ಏಳು ಮಂದಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಪೊನ್ನಂಪೇಟೆ ಜೂನಿಯರ್ ಕಾಲೇಜು ಜಂಕ್ಷನ್ ಬಳಿಯಿಂದ ನಿಸರ್ಗ ನಗರದ ಸಿ.ಜೆ. ರತನ್, ಐ.ಎಸ್. ಮನು, ಹಳ್ಳಿಗಟ್ಟು ಗ್ರಾಮದ ಬಿ. ನಿಂಗರಾಜು, ಜನತಾ ಕಾಲನಿ ನಿವಾಸಿ ಪಿ.ಎ. ಮುಬಾರ್ ಮತ್ತು ಪೊನ್ನಂಪೇಟೆ ಆಶ್ರಮ ಶಾಲೆಯ ಬಸ್ಸು ತಂಗುದಾಣದ ಬಳಿಯಿಂದ ಕಾಟ್ರಕೊಲ್ಲಿ ಪೈಸಾರಿ ನಿವಾಸಿ ವಿ. ಎಚ್. ಫೈಸಲ್, ನಿಸರ್ಗ ನಗರದ ಟಿ.ಜಿ. ಕಾರ್ಯಪ್ಪ, ಬಿ. ವಿ. ವರುಣ್ ಅವರನ್ನು ಬಂಧಿಸಲಾಗಿದೆ.
ಕಾರು ಪಲ್ಟಿ
ಗಂಗೊಳ್ಳಿ: ಮುಳ್ಳಿಕಟ್ಟೆ ರಾ.ಹೆದ್ದಾರಿ 66ರಲ್ಲಿ ದನ ಅಡ್ಡ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದ ಕಾರು ಪಲ್ಟಿಯಾದ ಘಟನೆ ಜು. 10 ರಂದು ಸಂಭವಿಸಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು: ಮಾಣಿಕೋತ್ ಮತ್ತು ಮೊಗ್ರಾಲ್ಪುತ್ತೂರಿನಲ್ಲಿ ಸಂಭವಿಸಿದ ಅಪಘಾತ ದಲ್ಲಿ ಇಬ್ಬರು ಸಾವಿಗೀಡಾಗಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮಾಣಿಕೋತ್ ಕೆಎಸ್ಟಿಪಿ ರಸ್ತೆಯಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ವೆಳ್ಳಿಕೋತ್ ಅಡೋಟ್ ಕುಂಞಿಪ್ಪುರಯಿಲ್ ಕುಂಞಿಕಣ್ಣನ್ ಅವರ ಪುತ್ರ ಕೆ.ಪಿ. ಅಭಿಲಾಷ್ (28) ಸಾವಿಗೀಡಾದರು.
ಮೊಗ್ರಾಲ್ಪುತ್ತೂರಿನಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸಹಸವಾರ, ಕುಂಬಳೆ ಅಕಾಡೆಮಿಯ ಪ್ಲಸ್ ಟು ವಿದ್ಯಾರ್ಥಿ ನೂಅಮಾನ್ (17) ಸಾವಿಗೀಡಾಗಿ, ಸವಾರ ಮೊಗ್ರಾಲಿನ ಮುನಾಸಿರ್ (27) ಗಂಭೀರ ಗಾಯಗೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ