ಜೂ.1ರಿಂದ ಖಾಸಗಿ ಬಸ್ ಆರಂಭಕ್ಕೆ ನಿರ್ಧಾರ
ದ.ಕ. ಉಡುಪಿ: ಶೇ.50ರಷ್ಟು ಖಾಸಗಿ, ಸಿಟಿ ಬಸ್ ಕಾರ್ಯಾಚರಣೆ
Team Udayavani, May 25, 2020, 7:51 AM IST
ಸಾಂದರ್ಭಿಕ ಚಿತ್ರ
ಮಂಗಳೂರು/ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜೂನ್ 1ರಿಂದ ಖಾಸಗಿ ಮತ್ತು ಸಿಟಿ ಬಸ್ಗಳು ಸಂಚರಿಸಲಿದೆ. ದ.ಕ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಶೇ.50ರಷ್ಟು ಬಸ್ಗಳನ್ನು ರಸ್ತೆಗಿಳಿಸಲು ಮಾಲಕರ ಸಂಘ ನಿರ್ಧರಿಸಿದೆ. ಉಡುಪಿಯಲ್ಲಿ ಮೇ 25ರಿಂದ ಒಂದು ವಾರ ಉಚಿತ ಸಿಟಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಜೂ.1ರ ಬಳಿಕ ಹಂತ ಹಂತವಾಗಿ ಬಸ್ ರಸ್ತೆಗಿಳಿಯಲು ಸಿಟಿ ಬಸ್ ಮಾಲಕರ ಸಂಘ ನಿರ್ಧರಿಸಿದೆ.
ಸಾಮಾನ್ಯ ದಿನಗಳಲ್ಲಿ ಮಂಗಳೂರು ನಗರದಲ್ಲಿ 325 ಸಿಟಿ ಬಸ್ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದು, ಇದರಲ್ಲಿ ಸುಮಾರು 150 ಬಸ್ಗಳನ್ನು ಜೂನ್ 1 ರಿಂದ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಬುಧವಾರ ಬಸ್ ಮಾಲಕರ ಸಭೆ ನಡೆಯ ಲಿದ್ದು, ಇಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಅವರು ಪ್ರತಿಕ್ರಿಯಿಸಿ “ಜೂನ್ 1 ರಿಂದ ಶೇ.50ರಷ್ಟು ಸಿಟಿ ಬಸ್ಗಳು ರಸ್ತೆಗಿಳಿಯಲಿವೆ. ಹೀಗಿದ್ದಾಗ ಒಂದು ರೂಟ್ನಲ್ಲಿ ಸರಾಸರಿ 4 ಬಸ್ಗಳು ಸಂಚರಿಸಿದಂತಾಗುತ್ತದೆ. ಯಾವ ರೀತಿ ಬಸ್ ಕಾರ್ಯಾಚರಣೆ ನಡೆಸಬೇಕು ಎಂಬುವುದರ ಬಗ್ಗೆ ಜಿಲ್ಲಾಡಳಿತದ ಮಾರ್ಗಸೂಚಿ ನಿರೀಕ್ಷೆಯಲ್ಲಿದ್ದೇವೆ’ ಎಂದು ತಿಳಿಸಿದ್ದಾರೆ.
ಉಡುಪಿಯಲ್ಲಿ ಮೇ 25ರಿಂದ ನಗರದ ವಿವಿಧ ಭಾಗಗಳಿಗೆ ಬಸ್ ಸಂಚಾರ ಪ್ರಾರಂಭವಾಗಲಿದೆ. ಒಂದು ವಾರ ಉಚಿತ ಸೇವೆ ಇರಲಿದೆ. 15 ನಿಮಿಷಗಳಿಗೆ ಒಂದರಂತೆ ಬಸ್ಗಳು ಸಂಚರಿಸಲಿದೆ. ಜೂ.1 ರ ಬಳಿಕ ಹಂತ ಹಂತ ಸಿಟಿ ಹಾಗೂ ಸರ್ವಿಸ್ ಬಸ್ಗಳು ರಸ್ತೆಗೆ ಇಳಿಯಲಿದೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ, ಕೆನರಾ ಬಸ್ ಮಾಲಕರ ಸಂಘದ ಪ್ರ.ಕಾರ್ಯದರ್ಶಿ ಕೆ.ಸುರೇಶ್ ನಾಯಕ್ ತಿಳಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಈಗಾಗಲೇ ಬಸ್ ಮಾಲಕರ ಸಭೆ ಕರೆದು ಸರಕಾರದ ನಿರ್ದೇಶನ ಪ್ರಕಾರ ಬಸ್ಗಳನ್ನು ಓಡಿಸಲು ಸೂಚಿಸಿದ್ದಾರೆ.
ಸದ್ಯದಲ್ಲೇ ನರ್ಮ್ ಬಸ್ ಸಂಚಾರ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಈಗಾಗಲೇ ಮುಡಿಪು ಭಾಗಕ್ಕೆ ನರ್ಮ್ ಬಸ್ ಕಾರ್ಯಚರಣೆ ನಡೆಸಲಾಗಿದೆ. ಉಳಿದ ರೂಟ್ಗಳಲ್ಲಿ ಯಾವ ರೀತಿ, ಎಷ್ಟು ಬಸ್ ಕಾರ್ಯಾಚರಣೆ ನಡೆಸಬೇಕು ಎಂಬುವುದರ ಬಗ್ಗೆ ಒಂದೆರಡು ದಿನಗ
ಳಲ್ಲಿ ತೀರ್ಮಾನಿಸಲಾಗುವುದು’ ಎಂದು ಹೇಳಿದ್ದಾರೆ.
ಸದ್ಯದಲ್ಲೇ ಮಾರ್ಗಸೂಚಿ
ಖಾಸಗಿ ಬಸ್ ಓಡಾಟದ ಹಿನ್ನೆಲೆಯಲ್ಲಿ ಆರ್ಟಿಒ ಹಾಗೂ ಬಸ್ ಮಾಲಕರ ಜೊತೆ ಸಭೆ ನಡೆಸಲಾಗುವುದು. ಬಸ್ ಚಾಲಕರು, ನಿರ್ವಾಹಕರು ಹಾಗೂ ಪ್ರಯಾಣಿಕರು ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು.
– ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ