ಪೈಲಟ್‌ಗಳಿಗೆ ಅನಾರೋಗ್ಯ: ದುಬಾೖ ವಿಮಾನ 15 ತಾಸು ವಿಳಂಬ!


Team Udayavani, Aug 2, 2018, 10:47 AM IST

dubai-flight.png

ಮಂಗಳೂರು: ದುಬಾೖಗೆ ತೆರಳಬೇಕಿದ್ದ ಸ್ಪೆ „ಸ್‌ ಜೆಟ್‌ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಬರೋಬ್ಬರಿ 15 ತಾಸು ವಿಳಂಬವಾಗಿ ಪ್ರಯಾಣ ಆರಂಭಿಸಿದೆ. 

ಇದಕ್ಕೆ ಕಾರಣವಾಗಿದ್ದು ತಾಂತ್ರಿಕ ದೋಷವಲ್ಲ, ಬದಲಿಗೆ ಇಬ್ಬರೂ ಪೈಲಟ್‌ಗಳ ಅನಾರೋಗ್ಯ. 180 ಪ್ರಯಾಣಿಕರಿದ್ದ ಸ್ಪೈಸ್‌ ಜೆಟ್‌ ಬೋಯಿಂಗ್‌ ವಿಮಾನ (ಎಸ್‌ಜಿ 59) ಮಂಗಳವಾರ ರಾತ್ರಿ 12.45ಕ್ಕೆ ಮಂಗಳೂರಿಂದ ನಿರ್ಗಮಿಸಬೇಕಿತ್ತು. ಬೋರ್ಡಿಂಗ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಪೈಲಟ್‌ಗೆ ಮಲೇರಿಯಾ ಜ್ವರ ಪತ್ತೆಯಾಗಿದ್ದು, ಹಾರಾಟರದ್ದುಗೊಳಿಸಿ ರಾತ್ರಿ 2 ಗಂಟೆಗೆ ಪ್ರಯಾಣಿಕರನ್ನು ಹೊಟೇಲ್‌ಗೆ ಕರೆತರಲಾಗಿತ್ತು. ಬಳಿಕ  ಬುಧವಾರ ಬೆಳಗ್ಗೆ 7.30ಕ್ಕೆ ಮರು ಪ್ರಯಾಣಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ವಿಚಿತ್ರ ಅಂದರೆ, ಮಾರನೇ ದಿನ ಬೋರ್ಡಿಂಗ್‌ ವೇಳೆ ಬಂದಿದ್ದ ಮುಖ್ಯ ಪೈಲಟ್‌ಗೂ ಅನಾರೋಗ್ಯವಾಗಿದೆ. ಈ ಮಧ್ಯೆ ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು 20 ಮಂದಿ ಟಿಕೆಟ್‌ ರದ್ದುಪಡಿಸಿ ಬೇರೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕೊನೆಗೆ ಬುಧವಾರ ಸಂಜೆ ವಿಮಾನ ದುಬಾೖಗೆ ತೆರಳಿದೆ. 

ಇಬ್ಬರು ಪೈಲಟ್‌ಗಳಿಗೂ ಅನಾರೋಗ್ಯ ಹೇಗೆ? 
ಸಾಮಾನ್ಯವಾಗಿ ಬೋರ್ಡಿಂಗ್‌ಗೆ 
1 ತಾಸು ಮೊದಲು ಪೈಲಟ್‌ಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ವಿಮಾನ ಚಲಾಯಿಸಲು ಅನುಮತಿ ನೀಡಲಾಗುವುದಿಲ್ಲ. ಮದ್ಯಪಾನ ಸಂಶಯ ಇದ್ದರೂ ಅನುಮತಿ ನೀಡಲಾಗುವುದಿಲ್ಲ. ಇನ್ನು  ಪೈಲಟ್‌ಗಳು ತಾವಾಗಿಯೇ ಅನಾರೋಗ್ಯ ಇರುವುದಾಗಿ ಹೇಳಿ ಹಿಂದೆ ಸರಿದರೇ ಅಥವಾ ತಪಾಸಣೆ ವೇಳೆ ಫಿಟ್‌ ಇಲ್ಲ ಎಂದು ವೈದ್ಯಕೀಯ ವರದಿ ಹೇಳಿತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ನಾವೆಲ್ಲ ಮಂಗಳವಾರ ರಾತ್ರಿ ದುಬಾೖ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಬೋರ್ಡಿಂಗ್‌ ಆಗಬೇಕೆನ್ನುವಷ್ಟರಲ್ಲಿ ಪೈಲಟ್‌ ಅನಾರೋಗ್ಯದಿಂದ ಮರುದಿನ ಪ್ರಯಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಮತ್ತೆ ಬಂದ ಪೈಲಟ್‌ಗೂ ಫಿಟ್‌ನೆಸ್‌ ಕ್ಲಿಯರ್‌ ಆಗಿಲ್ಲ ಎಂದು ಮತ್ತೆ ಹೊಟೇಲ್‌ಗೆ ಕರೆತಂದರು. ಮಹಿಳೆಯೊಬ್ಬರಿಗೆ ಬುಧವಾರ ಬೆಳಗ್ಗೆ 10 ಗಂಟೆಗೆ ದುಬಾೖನಲ್ಲಿ ತುರ್ತಾಗಿ ವೈದ್ಯರ ಭೇಟಿ ಮಾಡಬೇಕಿತ್ತು. ಹಲವರು ನಿಗದಿತ ಸಮಯಕ್ಕೆ ತಲುಪಲಾಗದ ಆತಂಕದಲ್ಲಿದ್ದರು.
– ಭಟ್ಕಳ ಮೂಲದ ಓರ್ವ ಪ್ರಯಾಣಿಕ

ಮಂಗಳೂರು-ದುಬಾೖ ವಿಮಾನ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ತೊಂದರೆಯಾಗಿರುವುದು ನಿಜ. ಬಳಿಕ ಎಲ್ಲ ರೀತಿಯ ಪರ್ಯಾಯ ವ್ಯವಸ್ಥೆ ಮಾಡಿ ಬುಧವಾರ ಸಂಜೆ 5 ಗಂಟೆಗೆ ದುಬಾೖ ವಿಮಾನ ನಿರ್ಗಮಿಸಿದೆ. ಪೈಲಟ್‌ಗಳ ಅನಾರೋಗ್ಯ ಅಚ್ಚರಿ ಮೂಡಿಸಿದೆ. ಈ ವಿಮಾನ ಟರ್ಕಿಯ ಕೊರಿಯಂಡನ್‌ ಏರ್‌ಲೈನ್ಸ್‌ಗೆ ಸೇರಿದ್ದು, ಅದರ ಪೈಲಟ್‌ ಹಾಗೂ ಸಿಬಂದಿಯನ್ನು ಅದೇ ಕಂಪನಿ ನಿಯೋಜಿಸುತ್ತದೆ. ಇದಕ್ಕಾಗಿ ಬದಲಿ ಪೈಲಟ್‌ ಬರುವವರೆಗೆ ಕಾಯಬೇಕಾಯ್ತು.
– ಆನಂದ್‌, ಸ್ಪೈಸ್‌ ಜೆಟ್‌ನ ಮಾಧ್ಯಮ ವಿಭಾಗ

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.