ಮಂಗಳೂರಿನಲ್ಲಿ ಘಮ ಘಮ ಹಲಸಿನ ಹಬ್ಬ !


Team Udayavani, Jul 16, 2018, 11:51 AM IST

16-july-6.jpg

ಮಹಾನಗರ: ನಗರದ ಸಾವಯವ ಕೃಷಿಕ ಗ್ರಾಹಕರ ಬಳಗದ ವತಿಯಿಂದ ಶ್ರೀ ಶರವು ಮಹಾಗಣಪತಿ ದೇವಸ್ಥಾನ ಹತ್ತಿರದ ಬಾಳಂಭಟ್‌ ಹಾಲ್‌ನಲ್ಲಿ ರವಿವಾರ ಆಯೋಜಿಸಲಾಗಿದ್ದ ಮೂರನೇ ವರ್ಷದ ‘ಹಲಸು ಹಬ್ಬ’ ಮಂಗಳೂರಿಗರ ಮನ ತಣಿಸಿದೆ. ನಗರದಲ್ಲಿ ಮಳೆ ಸುರಿಯುತ್ತ, ಆಹ್ಲಾದಕರ ಗಾಳಿ ಬೀಸುತ್ತಿದ್ದಂತೆ, ಹಲಸು ಮೂಡಿಸಿದ ಘಮ ಘಮ ಸುವಾಸನೆಯನ್ನು ನಗರದ ಸಾವಿರಾರು ಜನರು ಆಸ್ವಾದಿಸಿದರು. ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ತಿಳಿ ಕೇಸರಿ, ಪ್ರಕಾಶ್‌ಚಂದ್ರ ಹಲಸು, ಬ್ರೆಜಿಲ್‌ 365… ಹೀಗೆ ನಾನಾ ವಿಧದ ಹಲಸು ಇಲ್ಲಿದ್ದರೆ, ಅದರ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳಾದ ಐಸ್‌ಕ್ರೀಂ, ಹೋಳಿಗೆ, ಪಾನಕ ಕೂಡ ಅಲ್ಲಿ ಭಾಗವಹಿಸಿದ್ದ ಜನರಿಗೆ ಮಹದಾನಂದ ನೀಡಿತು. 

ಮೇಳದಲ್ಲಿ ಸುಮಾರು 40 ಆಹಾರ ಮಳಿಗೆಗಳು, ಎರಡು ಗಿಡ ಮಾರಾಟದ ಮಳಿಗೆಗಳಿದ್ದವು. ಮಂಚೂರಿ, ಚಿಲ್ಲಿ,  ರೋಸ್ಟ್‌, ಕೇಸರಿಬಾತ್‌, ಬರ್ಫಿ,  ಅಂಬಡೆ, ಬನ್ಸ್‌, ಗಟ್ಟಿ, ಪಾಯಸ, ಗಾರಿಕೆ, ಚಿಪ್ಸ್‌, ಹಪ್ಪಳ, ಕಬಾಬ್‌, ಚಿಕ್ಕಿ, ಉಪ್ಪಿನಕಾಯಿ, ಜಾಮೂನ್‌ ಹೀಗೆ ಹಲವು ವಿಧದ ಹಲಸಿನ ಮೌಲ್ಯವರ್ಧಿತ
ಉತ್ಪನ್ನಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾದವು. ಇದರ ಜತೆಗೆ ಸಾವಯವ ತರಕಾರಿ, ಹಣ್ಣು ಹಂಪಲು ಮಾರಾಟ, ಹಲಸಿಗೆ ಸಂಬಂಧಿಸಿದ ಪುಸ್ತಕಗಳು, ವಿವಿಧ ತಳಿಯ ಗಿಡ, ಬೀಜಗಳ ಮಾರಾಟ ನಡೆಯಿತು.

ಹಲಸಿನ ಐಸ್‌ಕ್ರೀಮ್‌!
ಪುತ್ತೂರು ಮರಿಕೆಯ ಸುಹಾಸ್‌- ಮಾನಸ ಯುವಕರ ತಂಡದಿಂದ ಹಲಸಿನ ಐಸ್‌ಕ್ರೀಮ್‌, ಉಪ್ಪಿನಂಗಡಿ ಇಳಂತಿಲ ಆದರ್ಶ ಐಸ್‌ಕ್ರೀಮ್‌ ತಯಾರಿಸಿ ಭಾಗವಹಿಸಿದ್ದು ಗಮನಸೆಳೆಯಿತು.

ಹಲಸಿನ ಪಾಯಸ!
ಉಪ್ಪಿನಂಗಡಿಯ ಮಂಜುನಾಥ ಭಟ್‌ ಅವರು ಹಲಸಿನ ಬೀಜದ ಪಾಯಸ ಹಂಚಿದರು. ಪದವಿನಂಗಡಿಯ ವಿನೋದ್‌ ಅವರು ಹಲಸಿನ ಬೀಜದ ಚಟ್ನಿ ಹುಡಿ ಮಾರಾಟ ಮಾಡಿದರು. ಮೂಡುಶೆಡ್ಡೆ ಹಾಗೂ ಉಪ್ಪಿನಂಗಡಿಯಿಂದ ಬಂದಿದ್ದ ವ್ಯಾಪಾರಿಗಳು ಸ್ಥಳದಲ್ಲಿಯೇ ಬಿಸಿಬಿಸಿ ಹೋಳಿಗೆಗಳನ್ನು ರೆಡಿ ಮಾಡುತ್ತಿದ್ದರು. ಹಲಸಿನ ಉತ್ಪನ್ನಗಳಲ್ಲಿ ಕೆಲವೊಂದನ್ನು ಮೊದಲೇ ತಯಾರಿಸಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತಿತ್ತು. ಮಾರಾಟಗಾರರು ತೆಂಗಿನ ಎಣ್ಣೆ ಉಪಯೋಗಿಸಿಯೇ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಸಾವಯವ ಬಳಗದಿಂದ ಮೊದಲೇ ಸೂಚನೆ ನೀಡಲಾಗಿತ್ತು. ಗ್ರಾಹಕರೂ ಖರೀದಿಸುವಾಗ ಪರಿಶೀಲಿಸಿ ಖರೀದಿಸುವಂತೆ ಆಯೋಜಕರು ಸೂಚಿಸುತ್ತಿದ್ದರು. 

ಹಲಸಿನ ಸವಿಯುಂಡ ಸಾವಿರಾರು ಮಂದಿ
ಬೆಳಗ್ಗೆ ಸುಮಾರು 7 ಗಂಟೆಗೆ ಹಲಸು ಹಬ್ಬ ಆರಂಭವಾಯಿತು. ಆ ಕ್ಷಣದಿಂದಲೇ ಭಾರೀ ಸಂಖ್ಯೆಯಲ್ಲಿ ಜನರು ಹಬ್ಬದಲ್ಲಿ ಪಾಲ್ಗೊಂಡರು. ಸಂಜೆಯವರೆಗೆ ಸಾವಿರಾರು ಜನರು ಬಂದು ಹಲಸು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕೆಲವರು ಸ್ಥಳದಲ್ಲೇ ಹಲಸಿನ ವಿವಿಧ ಉತ್ಪನ್ನಗಳನ್ನು ಸವಿದರೆ, ಇನ್ನು ಕೆಲವರು ಹಲಸು, ಹಲಸಿನ ಉತ್ಪನ್ನಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು. ಅಂತೂ, ಮನೆ ಮಂದಿ ಹಲಸಿನ ಹಬ್ಬದಲ್ಲಿ ಭಾಗ ವಹಿಸಿ ‘ಸಂಡೇ’ ಎಂಜಾಯ್‌ ಮಾಡಿದರು. 

ತೂಬುಗೆರೆಯಿಂದ ಬಂದಿತ್ತು ಹಲಸು!
ಸಾವಯವ ಕೃಷಿಕ-ಗ್ರಾಹಕರ ಬಳಗದ ಸಂಘಟನ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ಮಾತನಾಡಿ, ಬೆಂಗಳೂರಿನ ಗ್ರಾಮೀಣ ಜಿಲ್ಲೆಯ ತೂಬುಗೆರೆಯ ಪ್ರಸಿದ್ಧ ಕೆಂಪುತೊಳೆಯ ರುದ್ರಾಕ್ಷಿ ಹಲಸಿನ ಪ್ರದರ್ಶನ ಈ ಬಾರಿ ವಿಶೇಷವಾಗಿತ್ತು. ದೇಶದಲ್ಲಿಯೇ ಪ್ರಥಮ ಹಲಸು ಬೆಳೆಗಾರರ ಸಂಘದ ಎಂ.ಜಿ. ರವಿಕುಮಾರ್‌ ಹಾಗೂ ತಂಡದವರು ಸುಮಾರು 2 ಟನ್‌ ಕೆಂಪು ತೊಳೆಯ ರುದ್ರಾಕ್ಷಿ ಹಲಸಿನ ಹಣ್ಣು ತಂದು ಮಾರಾಟ ಮಾಡಿದರು. ಸಣ್ಣ ಗಾತ್ರದ ಹಣ್ಣುಗಳು ಗ್ರಾಹಕರ ವಿಶೇಷ ಆಕರ್ಷಣೆಗೆ ಕಾರಣವಾಗಿದ್ದವು. ಶಿವಮೊಗ್ಗದ ರಿಪ್ಪನ್‌ಪೇಟೆಯ ಅನಂತ ಮೂರ್ತಿ ಜವಳಿ ಹಾಗೂ ಅಮೋಘ ಜವಳಿ ಅವರು ಹಲಸಿನ ಸಸಿಗಳ ಮಾರಾಟ ಮಾಡಿದರು.

ಟಾಪ್ ನ್ಯೂಸ್

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

2-thirthahalli

ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.