ಕಾಂತಮಂಗಲ ಸೇತುವೆ ದುರಸ್ತಿ: ಇಂದಿನಿಂದ ಸಂಚಾರ ನಿಷೇಧ
Team Udayavani, Sep 7, 2018, 10:36 AM IST
ಸುಳ್ಯ: ಅಜ್ಜಾವರ ಗ್ರಾಮ ಸಂಪರ್ಕಿಸುವ ಮಾರ್ಗ ನಡುವೆ ಇರುವ ಕಾಂತಮಂಗಲ ಸೇತುವೆ ಶಿಥಿಲಗೊಂಡಿದ್ದು, 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಆಗುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ಸೆ. 7ರಿಂದ ಈ ಮಾರ್ಗದಲ್ಲಿ ಸಂಚಾರ ನಿಷೇಧಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗ ತಿಳಿಸಿದೆ. ಒಂದು ತಿಂಗಳ ಕಾಲ ಕಾಮಗಾರಿ ನಡೆಯಲಿದೆ. ಸೇತುವೆ ಮೇಲ್ಭಾಗವನ್ನು ಅಗೆದು, ಕಬ್ಬಿಣದ ಬೆಲ್ಟ್ಗಳನ್ನು ಅಳವಡಿಸಿ, ಬಳಿಕ ಮೂರು ಇಂಚಿನಲ್ಲಿ ಕಾಂಕ್ರೀಟ್ ಹಾಕಿ ಸೇತುವೆ ಸರಿಪಡಿಸುವ ಕಾಮಗಾರಿ ನಡೆಯಲಿದೆ.
ಬದಲಿ ಮಾರ್ಗ ವ್ಯವಸ್ಥೆ
ಮಂಡೆಕೋಲು, ಅಜ್ಜಾವರ ಗ್ರಾಮದ ಜನರು ಸುಳ್ಯ ನಗರ ತಲುಪಲು ಕಾಂತಮಂಗಲ ಸೇತುವೆಯನ್ನು ಅವಲಂಬಿಸಿದ್ದಾರೆ. ಕಾಮಗಾರಿಯಿಂದ ಸಂಚಾರ ನಿಷೇಧವಾಗುವುದರಿಂದ ಜನರು ಬದಲಿ ಮಾರ್ಗವನ್ನು ಬಳಸಬೇಕಿದೆ. ಮಂಡೆಕೋಲು- ಮುರೂರು- ಜಾಲ್ಸೂರು ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಬಹುದು. ಅಡ್ಪಂಗಾಯ- ಪೇರಾಲು-ಬೈತಡ್ಕ ಮಾರ್ಗವಾಗಿ ಸುಳ್ಯ, ಅಜ್ಜಾವರ- ಪೇರಾಲು- ಬೈತಡ್ಕ- ಸುಳ್ಯ, ಅಜ್ಜಾವರ- ನಾರ್ಕೋಡು- ಸುಳ್ಯ ರಸ್ತೆಯನ್ನು ಬಳಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ