ಕರ್ಣಾಟಕ ಬ್ಯಾಂಕ್: 2 ಐಬಿಎ ಪ್ರಶಸ್ತಿ
Team Udayavani, Feb 23, 2017, 12:07 PM IST
ಮಂಗಳೂರು: ಕರ್ಣಾಟಕ ಬ್ಯಾಂಕಿಗೆ ಐಬಿಎ- ಬ್ಯಾಂಕಿಂಗ್ ಟೆಕ್ನಾಲಜಿಯ ಎರಡು ಪ್ರತಿಷ್ಠಿತ ಪ್ರಶಸ್ತಿಗಳಾದ 1). ಶ್ರೇಷ್ಠ ವಿತ್ತೀಯ ಸೇರ್ಪಡೆ ಸಾಧನೆಯ (ಸಣ್ಣ ಬ್ಯಾಂಕ್ ವಿಭಾಗ) ವಿಜೇತ (ವಿನ್ನರ್); 2). ಡಿಜಿಟಲ್ ಹಾಗೂ ಚಾನೆಲ್ಸ್ ಟೆಕ್ನಾಲಜಿ ಬಳಕೆಯ (ಸಣ್ಣ ಬ್ಯಾಂಕ್ ವಿಭಾಗ) ದ್ವಿತೀಯ (ರನ್ನರ್ ಅಪ್) ಸ್ಥಾನ ಲಭಿಸಿದೆ. ಕಳೆದ ವರ್ಷದ ಗಣನೀಯ ತಾಂತ್ರಿಕತೆ ಮತ್ತು ವ್ಯವಹಾರ ಲಾಭ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ಎಂ. ಎಸ್., ಜನರಲ್ ಮ್ಯಾನೇಜರ್ ರಾಘವೇಂದ್ರ ಭಟ್ ಎಂ. ಅವರು ರಿಸರ್ವ್ ಬ್ಯಾಂಕ್ನ ಉಪ ಗವರ್ನರ್ ಡಾ| ವಿರಾಲ್ ವಿ. ಆಚಾರ್ಯ, ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ| ರಘುನಾಥ್ ಮಾಶೇಲ್ಕರ್ರಿಂದ ಮುಂಬಯಿಯಲ್ಲಿ ಫೆ. 21ರಂದು ಪ್ರಶಸ್ತಿ ಸ್ವೀಕರಿಸಿದರು. ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಚಂದಾ ಕೊಚ್ಚಾರ್ ಉಪಸ್ಥಿತರಿದ್ದರು.
“ಭಾರತ ಸರಕಾರದ ವಿತ್ತೀಯ ಸೇರ್ಪಡೆ ಯೋಜನೆ ಮತ್ತು ಡಿಜಿಟಲ್ ತಾಂತ್ರಿಕತೆಯಲ್ಲಿ ಕರ್ಣಾಟಕ ಬ್ಯಾಂಕಿನ ಯಶಸ್ವೀ ಸಾಧನೆಗಳಿಗೆ ಈ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ