ರೈಲ್ನಲ್ಲಿ ಕಾಸರಗೋಡಿನ ಮಹಿಳೆಯ ಬ್ಯಾಗ್ ಕಸಿದು ಪರಾರಿ; ದೂರು
Team Udayavani, Jun 26, 2022, 11:45 PM IST
ಮಂಗಳೂರು : ಕಣ್ಣೂರು-ಯಶವಂತ ಪುರ ರೈಲ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೈಯಿಂದ ಬೆಳೆಬಾಳುವ ವಸ್ತುಗಳನ್ನು ಹೊಂದಿದ್ದ ವ್ಯಾನಿಟ್ ಬ್ಯಾಗ್ನ್ನು ಯುವಕನೋರ್ವ ಕಸಿದು ಪರಾರಿಯಾಗಿರುವ ಬಗ್ಗೆ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕಾಸರಗೋಡಿನ ಚಿನಗೋಲ ನಿವಾಸಿ ಗಣೇಶ್ ಪಿ. ಅವರು ಪತ್ನಿ ಹಾಗೂ ಮಗುವಿನೊಂದಿಗೆ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ಕೌಟುಂಬಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ಜೂ.24ರಂದು ಕಾಸರಗೋಡಿನಿಂದ ಕಣ್ಣೂರು-ಯಶವಂತ ಪುರ ರೈಲ್ ಮೂಲಕ ಪ್ರಯಾಣಿಸುತ್ತಿರುವಾಗ ಶ್ರವಣಬೆಳಗೊಳ ಬಳಿ ಕಳವು ಪ್ರಕರಣ ನಡೆದಿದೆ. ವ್ಯಾನಿಟಿ ಬ್ಯಾಗ್ನಲ್ಲಿ 2 ಸ್ಮಾರ್ಟ್ಫೋನ್,ನಗದು, 3 ಎಟಿಎಂ ಕಾರ್ಡ್ಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ದಾಖಲೆ ಪತ್ರಗಳು, ಮಗುವಿನ ಔಷಧಿ ಮುಂತಾದ ವಸ್ತುಗಳಿದ್ದವು.
ರೈಲು ನಸುಕಿನ ವೇಳೆ ಸುಮಾರು 3.30ರ ವೇಳೆಗೆ ಶ್ರವಣಬೆಳಗೊಳ ಸಮೀಪ ನಿಧಾನಗತಿಯಲ್ಲಿ ಸಂಚರಿಸುತ್ತಿತ್ತು. ನನ್ನ ಪತ್ನಿ ಎರಡನೇ ಬರ್ತ್ನಲ್ಲಿ ಮಲಗಿದ್ದರು. ನಾನು ಮೇಲಿನ ಬರ್ತ್ನಲ್ಲಿ ಮಲಗಿದ್ದೆ. ಪತ್ನಿ ದಿಡೀರ್ ಆಗಿ ಬೊಬ್ಬೆ ಹಾಕಿದ್ದು ನಾನು ತತ್ಕ್ಷಣ ಎದ್ದು ನೋಡುತ್ತಿದ್ದಾಗ ಸುಮಾರು 35 ವರ್ಷದ ಕೆಂಪು ಟೀಶರ್ಟ್ ಧರಿಸಿದ್ದ ವ್ಯಕ್ತಿಯೋರ್ವ ಪತ್ನಿಯ ಕೈಯಲ್ಲಿದ್ದ ವ್ಯಾನಿಟ್ ಬ್ಯಾಗ್ನ್ನು ಕಸಿದುಕೊಂಡು ಹೋಗುತ್ತಿದ್ದ, ನಾನು ಕೂಡಲೇ ರೈಲ್ನ ಚೈನ್ ಎಳೆದೆ. ಆದರೆ ಚೈನ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಕಳವು ಮಾಡಿದ್ದ ವ್ಯಕ್ತಿ ಚಲಿಸುತ್ತಿದ್ದ ರೈಲ್ನಿಂದ ಜಿಗಿದು ಪರಾರಿಯಾದ . ಘಟನೆ ನಡೆದ ತತ್ಕ್ಷಣ ನಾವು ರೈಲ್ನಲ್ಲಿ ಭದ್ರತಾ ಸಿಬ್ಬಂದಿ, ಟಿಸಿಗಾಗಿ ಹುಡುಕಾಡಿದೇವು.ಅದರೆ ಯಾರೂ ಸಿಗಲಿಲ್ಲ. ಎಂದು ಗಣೇಶ್ ತಿಳಿಸಿದ್ದಾರೆ.
ಬೆಳಗ್ಗೆ 5.30 ಕ್ಕೆ ಯಶವಂತ ಪುರ ರೈಲು ನಿಲ್ದಾಣಕ್ಕೆ ತಲುಪಿದ ಕೂಡಲೇ ರೈಲ್ವೆ ಪೊಲೀಸರಲ್ಲಿ ದೂರು ನೀಡಲು ಪ್ರಯತ್ನಿಸಿದೇವು. ಆದರೆ ಅವರಿಂದ ಪೂರಕ ಸ್ಪಂದನೆ ದೊರಕಲಿಲ್ಲ. ನಾವು ಜೂ.26 ರಂದು ಮಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದೇವೆ. ಇದೇ ರೀತಿ ಆ ರೈಲ್ನ ಇನ್ನೊಂದು ಬೋಗಿಯಲ್ಲೂ ಮಹಿಳೆಯ ವ್ಯಾನಿಟಿ ಬ್ಯಾಗ್ ಕಸಿದು ಪರಾರಿಯಾಗಿರುವ ವಿಷಯ ನಮಗೆ ತಿಳಿಯಿತು . ಇಂತಹ ಘಟನೆಗಳು ನಡೆಯದಂತೆ ರೈಲ್ನಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಮತ್ತು ಈ ರೀತಿಯ ಘಟನೆ ಸಂಭವಿಸಿದಾಗ ತತ್ಕ್ಷಣ ಯಾವ ನಂಬರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಬೋಗಿಯ ಪ್ರತಿಯೊಂದು ಕಂಪಾರ್ಟ್ಮೆಂಟ್ನಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ನಮೂದಿಸಬೇಕು ಎಂದು ಗಣೇಶ್ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು
ಫಾಝಿಲ್ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ
ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್
ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ
MUST WATCH
ಹೊಸ ಸೇರ್ಪಡೆ
ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಶಂಕಿತ ಸದಸ್ಯರಿಬ್ಬರ ಬಂಧನ
ಪೆನ್ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ: ಆರೋಪಿಗಳ ಬಂಧನ
Boycott ಎಫೆಕ್ಟ್: 7 ದಿನದಲ್ಲಿ 50 ಕೋಟಿ ರೂ. ಗಳಿಸಲು ವಿಫಲವಾದ “ಲಾಲ್ ಸಿಂಗ್ ಚಡ್ಡಾ”
ಆಲಮಟ್ಟಿ ಶಾಸ್ತ್ರೀ ಜಲಾಶಯದ ಪ್ರವಾಹ ನಿರ್ವಹಣೆಗೆ ಮಹಾ ಸಿ.ಎಂ. ಶ್ಲಾಘನೆ : ಕೋಳಕೂರ
ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ