ರೈಲಿನಲ್ಲಿ ಸಾಗಿಸುತ್ತಿದ್ದ 40 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ: ಬದಿಯಡ್ಕ ನಿವಾಸಿಯ ಬಂಧನ
Team Udayavani, Jan 7, 2023, 9:50 PM IST
ಕಾಸರಗೋಡು: ರೈಲು ಗಾಡಿಯಲ್ಲಿ ಸಾಗಿಸುತ್ತಿದ್ದ 40.80 ಲಕ್ಷ ರೂ. ಮೌಲ್ಯದ 204 ಗ್ರಾಂ ಎಂಡಿಎಂಎ ಸಹಿತ ಬದಿಯಡ್ಕ ಕಡಂಬಳದ ಮೊಹಮ್ಮದ್ ಹಾರೀಫ್(26)ನನ್ನು ಕಣ್ಣೂರು ಆರ್ಪಿಎಫ್, ಅಬಕಾರಿ ದಳ ಹಾಗು ಪಾಲ್ ಘಾಟ್ ಆರ್ಪಿಎಫ್ ಕ್ರೈಂ ಪ್ರಿವೆನ್ಶನ್ ಡಿಟೆಕ್ಷನ್ ಸ್ಕ್ವಾಡ್ ಸಂಯುಕ್ತ ಕಾರ್ಯಾಚರಣೆಯಲ್ಲಿ ಬಂದಿಸಿದೆ.
ಚೆನ್ನೈಯಿಂದ ಮಂಗಳೂರು ಎಗ್ಮೂರ್ ಎಕ್ಸ್ಪ್ರೆಸ್ ರೈಲುಗಾಡಿಯಲ್ಲಿ ಈತನನ್ನು ಮಾಲು ಸಹಿತ ಬಂಧಿಸಲಾಗಿದೆ. ಬೆಂಗಳೂರಿನಿಂದ ಕೊಯಂಬತ್ತೂರು ಮೂಲಕ ಪಾಲ್ ಘಾಟ್ ಗೆ ತಂದು ಎಗ್ಮೂರ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಸರಗೋಡಿಗೆ ತರುತ್ತಿದ್ದ ವೇಳೆ ಕಣ್ಣೂರಿನಲ್ಲಿ ಬಂಧಿಸಲಾಯಿತು. ಬಂಧಿತನ ಮೊಬೈಲ್ ಫೋನ್, ಎಟಿಎಂ ಕಾರ್ಡ್, ಪ್ರಯಾಣ ಟಿಕೆಟ್ ಮತ್ತು ಬ್ಯಾಗನ್ನು ತನಿಖಾ ತಂಡ ವಶಪಡಿಸಿದೆ. ಈತನ ಮೊಬೈಲ್ ಫೋನ್ನ್ನು ಅಧಿಕಾರಿಗಳು ಸಮಗ್ರ ಪರಿಶೀಲಿಸುತ್ತಿದ್ದಾರೆ. ಇಷ್ಟೊಂದು ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳುತ್ತಿರುವುದು ಉತ್ತರ ಕೇರಳದಲ್ಲೇ ಪ್ರಥಮವಾಗಿದೆ. ಇದನ್ನು ಯಾರಿಗಾಗಿ ತಲುಪಿಸಲು ಉದ್ದೇಶಿಸಲಾಗಿತ್ತು ಮತ್ತು ಅದರ ಹಿಂದಿನ ವಿತರಣಾ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ