ಮಳಲಿ ಮಸೀದಿ ವಿವಾದ: ಪ್ರಚೋದನಕಾರಿ ಹೇಳಿಕೆ ನಿರ್ಲಕ್ಷಿಸಿ; ಮಾತುಕತೆಯಿಂದಲೇ ಸಮಸ್ಯೆ ಪರಿಹಾರ
Team Udayavani, May 30, 2022, 1:32 AM IST
ಪಣಂಬೂರು: ಮಳಲಿ ಮಸೀದಿಯ ವಿಚಾರದಲ್ಲಿ ಗ್ರಾಮಸ್ಥರು ಐಕ್ಯಮತದಿಂದ ಇದ್ದಾರೆ. ಯಾವುದೇ ಗೊಂದಲವಿಲ್ಲ. ಹೊರಗಿನ ಎಸ್ಡಿಪಿಐ, ಕಾಂಗ್ರೆಸ್ ಮುಖಂಡರ ವಾತಾವರಣ ಕೆಡಿಸುವ ಹೇಳಿಕೆಗಳನ್ನು ನಿರ್ಲಕ್ಷಿಸಿ. ಶಾಂತಿಯನ್ನು ಎಲ್ಲರೂ ಕಾಪಾಡಿಕೊಂಡು ಬರಬೇಕು ಎಂದು ಶಾಸಕ ಡಾ| ಭರತ್ ಶೆಟ್ಟಿ ಹೇಳಿದರು.
ಅವರು ರವಿವಾರ ಮಳಲಿ ಮಸೀದಿ ಆಡಳಿತ ಸಮಿತಿ ಮುಖ್ಯಸ್ಥರು, ವಿಎಚ್ಪಿ, ಬಜರಂಗದಳ, ಹಿಂದೂ ಸಂಘಟನೆಗಳ ಮುಖಂಡರ ಸಭೆ ನಡೆಸಿ ಮಾತನಾಡಿದರು.
ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿ., ಸಿದ್ದರಾಮಯ್ಯ ವಿಚಾರ ತಿಳಿಯದೆ ಹೇಳಿಕೆ ನೀಡಿದ್ದಾರೆ. ಎಸ್ಡಿಪಿಐ ಸಮಾವೇಶದ ಹೆಸರಿನಲ್ಲಿ ಮುಸ್ಲಿಂ ಸಮುದಾಯ ವನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಇದನ್ನು ಮುಸಲ್ಮಾನ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಸಹಕಾರವಿದ್ದರೆ ಮಾತುಕತೆಯ ಮೂಲಕ ಶಾಂತಿಯಿಂದ ಈ ವಿಚಾರ ಇತ್ಯರ್ಥದ ವಿಶ್ವಾಸವಿದೆ ಎಂದರು.
400 ವರ್ಷಗಳಿಂದ ನಮಗೆ ಇದರ ಇತಿಹಾಸ ತಿಳಿದಿದ್ದು, ನಾವು ನಮ್ಮ ಧಾರ್ಮಿಕ ಆಚರಣೆ ಮಾಡಿ ಕೊಂಡು ಬರುತ್ತಿದ್ದೇವೆ. ಪಾರಂಪ ರಿಕ ವಾಗಿ ಬಂದ ಬಗ್ಗೆಯೂ ಹಿರಿ ಯರ ಮಾತಿನಂತೆ ದಾಖಲೆ ಇರಿಸಿ ಕೊಂಡಿದ್ದೇವೆ ಎಂದು ಮಸೀದಿ ಆಡಳಿತ ಸಮಿತಿಯ ಪ್ರಮುಖರು ಮಾಹಿತಿ ನೀಡಿದರು.
ನಾವು ನಮ್ಮ ಧಾರ್ಮಿಕ ನಂಬಿಕೆ ಯಂತೆ ತಾಂಬೂಲ ಪ್ರಶ್ನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಇತರರ ಪ್ರಚೋದನೆಗೆ ಒಳಗಾಗಿ ಸಂಘರ್ಷಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. ಮಳಲಿಯ ಹಿಂದೂ, ಮುಸ್ಲಿಂ ಸಮುದಾಯ, ಆಡಳಿತ ಸಮಿತಿ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ ಎಂದು ವಿಎಚ್ಪಿ ಬಜರಂಗದಳ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.
ಹಿಂದೂ ಸಂಘಟನೆಯ ಶಿವಾನಂದ ಮೆಂಡನ್, ಭುಜಂಗ ಕುಲಾಲ್, ಸೋಹನ್ ಅತಿಕಾರಿ, ಚಂದ್ರಹಾಸ್ ನಾರ್ಲ, ಸೀತಾರಾಮ್ ಪೂಜಾರಿ, ವಜ್ರಾಕ್ಷ, ನಾರಾಯಣ ಅಂಚನ್, ಮಸೀದಿ ಆಡಳಿತ ಸಮಿ ತಿಯ ಅಧ್ಯಕ್ಷ ಮಾಮು ಮನೇಲ್, ಕಾರ್ಯದರ್ಶಿ ಸರ್ಫರಾಜ್ , ಮುಸ್ತಾಫಾ, ರಝಾಕ್,ಇಕ್ಬಾಲ್, ಮಯ್ಯದ್ದಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
MUST WATCH
ಹೊಸ ಸೇರ್ಪಡೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ