ಮಂಗಳೂರು : ಟಾರ್ಗೆಟ್ ಗ್ರೂಪ್ನ ಇಲ್ಯಾಸ್ ಬರ್ಬರ ಹತ್ಯೆ
Team Udayavani, Jan 13, 2018, 10:44 AM IST
ಮಂಗಳೂರು: ನಗರದಲ್ಲಿ ಕುಖ್ಯಾತಿ ಪಡೆದಿರುವ ಟಾರ್ಗೆಟ್ ಗ್ರೂಪ್ನ ನಟೋರಿಯಸ್ ರೌಡಿ ಇಲ್ಯಾಸ್ ನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.
ಶನಿವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಆತನ ಮನೆಯಲ್ಲೇ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದ್ದು, ಇದು ಒಂದೇ ಕೋಮಿನವರ ಗ್ಯಾಂಗ್ವಾರ್ ನಲ್ಲಿ ಹತ್ಯೆ ಗೈಯಲಾಗಿದೆ ಎಂದು ಹೇಳಲಾಗಿದೆ.
ಕಳೆದ 2 ದಿನಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಇಲ್ಯಾಸ್ ಜಪ್ಪಿನಮೊಗರು ಅಪಾರ್ಟ್ಮೆಂಟ್ನಲ್ಲಿದ್ದ ವೇಳೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ.
ದಾಳಿ ವೇಳೆ ಇಲ್ಯಾಸ್ ಎದೆಗೆ ಇಬ್ಬರು ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದು, ಆತನನ್ನು ಕೂಡಲೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಇಲ್ಯಾಸ್ ಸಚಿವ ಯು.ಟಿ.ಖಾದರ್ ಅವರೊಂದಿಗಿದ್ದ ಫೋಟೋ ವೈರಲ್ ಆಗಿ ಭಾರೀ ಸುದ್ದಿಯಾಗಿತ್ತು. ಇಲ್ಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನೂ ಆಗಿದ್ದ.
ಈ ಬಗ್ಗೆ ಸಚಿವ ಖಾದರ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ನೀಡಿದ್ದರು. ನನಗೂ ಇಲ್ಯಾಸ್ಗೂ ಯಾವುದೇ ವ್ಯವಹಾರವಾಗಲಿ ನಂಟಾಗಲಿ ಇಲ್ಲ ಎಂದಿದ್ದರು.
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಸಫ್ವಾನ್ ಗ್ಯಾಂಗ್ ನಡುವೆ ಈತನಿಗೆ ವೈಷಮ್ಯವಿತ್ತು ಎನ್ನಲಾಗಿದ್ದು ಆತನ ಬೆಂಬಲಿಗರೆ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.
ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಕುಮಾರ್ ಅವರು ಹತ್ಯೆ ನಡೆದ ಇಲ್ಯಾಸ್ ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಕೃತ್ಯ ನಡೆದ ವೇಳೆ ಮನೆಯಲ್ಲಿ ಇಲ್ಯಾಸ್ ಸಹೋದರ, ತಾಯಿ ಮತ್ತು ಇಲ್ಯಾಸ್ನ 2 ವರ್ಷದ ಪುತ್ರಿ ಇದ್ದರು ಪತ್ನಿ ಅನಾರೋಗ್ಯದ ನಿಮಿತ್ತ ಔಷಧಿ ತರಲೆಂದು ತೆರಳಿದ್ದರು. ಈ ವೇಳೆ ಬಂದ ಇಬ್ಬರು ಆಗಂತುರಕರು ಮನೆಯ ಕಾಲಿಂಗ್ ಬೆಲ್ ಒತ್ತಿ ಮನಗೆ ನುಗ್ಗಿ ಬೆಡ್ರೊಂನಲ್ಲಿದ್ದ ಇಲ್ಯಾಸ್ನ ಎದೆಗೆ ಇರಿದು ಪರಾರಿಯಾಗಿದ್ದಾರೆ’ ಎಂದು ಟಿ.ಸುರೇಶ್ ತಿಳಿಸಿದರು.
ಈ ಹಿಂದೆ ಟಾರ್ಗೆಟ್ ಗ್ರೂಪ್ನಲ್ಲಿ ದ್ದ ಸಫ್ವಾನ್ ಮತ್ತು ದಾವೂದ್ ನಡೆವೆ ವೈಮನಸ್ಸು ಇದ್ದು ಅವರೇ ಕೊಲೆ ಮಾಡಿರುವ ಶಂಕೆ ಯನ್ನು ಇಲ್ಯಾಸ್ ಪತ್ನಿ ವ್ಯಕ್ತಪಡಿಸಿರುವುದಾಗಿ ಸುರೇಶ್ ತಿಳಿಸಿದರು.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ