ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು
Team Udayavani, Aug 18, 2022, 8:21 AM IST
ಸುರತ್ಕಲ್ : ಒಂದು ತಿಂಗಳಿನಿಂದ ಸುರತ್ಕಲ್ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆ ಏರ್ಪಡಿಸಿದೆ. ಈ ನಡುವೆ ಸುರತ್ಕಲ್, ಕಾಟಿಪಳ್ಳ, ಕೋಡಿಕೆರೆ ಸೇರಿದಂತೆ ಹಲವೆಡೆ ವಾಹನಗಳ ಗಾಜಿನ ಮೇಲೆ ಟಿಂಟ್ ಅಳವಡಿಸಿಕೊಂಡು ಸಂಚರಿಸುವ ಶೋಕಿ ಹೆಚ್ಚಾಗಿದ್ದು, ಅಂಥ ವಾಹನಗಳ ಮೇಲೆ ಪೊಲೀಸರ ಕಣ್ಣು ನೆಟ್ಟಿದೆ.
ಜಿಲ್ಲೆಯಲ್ಲಿ ಮೂವರ ಹತ್ಯೆ ಪ್ರಕರಣ, ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ ವಿಚಾರವಾಗಿ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಅಪರಾಧ ತಡೆಗೆ ಮತ್ತೆ ಚೆಕ್ ಪಾಯಿಂಟ್ ನಿರ್ಮಿಸಿ ವಾಹನ ತಪಾಸಣೆ ತೀವ್ರಗೊಳಿಸಿರುವ ಪೊಲೀಸರು ದಂಡ ವಿಧಿಸಿ ಟಿಂಟ್ ತೆಗೆಸುತ್ತಿದ್ದಾರೆ.
ಕಳೆದ ವರ್ಷ ಟ್ರಾಫಿಕ್ ಚೆಕ್ ಡ್ರೈವ್ ಮಾಡಿದ ಸಂದರ್ಭ ನೂರಾರು ವಾಹನಗಳ ಟಿಂಟ್ ತೆಗೆಯಲಾಗಿದ್ದರೂ ಇದೀಗ ಮತ್ತಷ್ಟು ವಾಹನಗಳಲ್ಲಿ ಕಂಡು ಬರುತ್ತಿದೆ. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಸಾವಿರಾರು ವಾಹನಗಳಿದ್ದು ದರೋಡೆ, ಜಾನುವಾರು ಸಾಗಾಟ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರು, ಜೀಪು ಮತ್ತಿತರ ವಾಹನಗಳ ಗಾಜು ಪಾರದರ್ಶಕವಾಗಿರಬೇಕೆಂಬುದು ಸಂಚಾರ ವಿಭಾಗದ ನಿರ್ಧಾರವಾಗಿದೆ. ಸುರತ್ಕಲ್ನಲ್ಲಿ ಮಂಗಳವಾರ ಹಲವಾರು ವಾಹನಗಳನ್ನು ತಡೆದು ಟಿಂಟ್ ತೆಗೆಯಲಾಗಿದೆ.
ಇದನ್ನೂ ಓದಿ : ಫಾಝಿಲ್ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ