ಮಂಗಳೂರು: ವಾಷಿಂಗ್ ಮೆಷಿನ್ ರಿಪೇರಿಗೆ ಬಂದವರಿಗೆ ಹಲ್ಲೆ
Team Udayavani, Jul 17, 2023, 11:52 PM IST
ಮಂಗಳೂರು: ವಾಷಿಂಗ್ ಮೆಷಿನ್ ದುರಸ್ತಿಗೆ ಬಂದ ಟೆಕ್ನೀಶಿಯನ್ಗೆ ಹಲ್ಲೆ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೇಶವ ಅವರು ಎಲ್.ಜಿ. ಕಂಪೆನಿಯ ಸರ್ವಿಸ್ ಸೆಂಟರ್ನಲ್ಲಿ ಟೆಕ್ನೀಶಿಯನ್ ಆಗಿದ್ದು, ಕೆತ್ತಿಕಲ್ಲಿನ ಸುಚಿತ್ರಾ ವಾಷಿಂಗ್ ಮೆಷಿನ್ ಕೆಟ್ಟು ಹೋಗಿರುವ ಬಗ್ಗೆ ಕಂಪೆನಿಗೆ ದೂರು ನೀಡಿದ್ದರು. ಕೇಶವ ಅವರು ಹೋಗಿ ನೋಡಿದಾಗ ವಾಷಿಂಗ್ ಮೆಷಿನ್ ಕೆಟ್ಟು ಹೋಗಿತ್ತು. ವಯರ್ ಮತ್ತು ಪೈಪ್ ಅನ್ನು ಇಲಿ ತುಂಡು ಮಾಡಿತ್ತು. ಕಂಪೆನಿಯವರೇ ರಿಪೇರಿ ಮಾಡುವಂತೆ ಮನೆಯವರು ತಿಳಿಸಿದ್ದರು. ಅದರಂತೆ ಕೇಶವ ಅವರು ರವಿವಾರ ಮಧ್ಯಾಹ್ನ ಸಾಮಗ್ರಿಗಳನ್ನು ತೆಗೆದುಕೊಂಡು ಸುಚಿತ್ರಾ ಅವರ ಮನೆಗೆ ಹೋದಾಗ ಒಂದು ಪಾರ್ಟ್ ವಾಷಿಂಗ್ ಮೆಷಿನ್ ಗೆ ಸರಿ ಹೊಂದದೆ ಇದ್ದುದರಿಂದ ಮರುದಿನ ಹಾಕುವುದಾಗಿ ತಿಳಿಸಿದ್ದರು. ಆಗ ಸುಚಿತ್ರಾ ಮನೆಯಲ್ಲಿದ್ದ ಆರೋಪಿತನು ಕೇಶವ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ