ಮೊಗರ್ಪಣೆ ಸೇತುವೆ ಶಿಥಿಲ: ದುರಸ್ತಿಯಿಲ್ಲ!
Team Udayavani, Sep 21, 2018, 12:07 PM IST
ಸುಳ್ಯ : ಮಾಣಿ-ಮೈಸೂರು ರಸ್ತೆಯ ಮೊಗರ್ಪಣೆ ಸೇತುವೆ ಮೇಲ್ಪದರ ದುರಸ್ತಿಗೆ ಸಂಬಂಧಿಸಿದ ಇಲಾಖೆ ಕೆಆರ್ ಡಿಸಿಎಲ್ ಮಳೆ ನೆಪದ ಕಾರಣವೊಡ್ಡಿ ಕಾಮಗಾರಿ ಮುಂದೂಡಿತ್ತು. ಈಗ ಮಳೆ ಬಿಟ್ಟು ಹತ್ತು ದಿನಗಳು ಕಳೆದಿವೆ. ಅದಾಗ್ಯೂ ದುರಸ್ತಿ ಕೈಗೆತ್ತಿಗೊಳ್ಳುವ ಬಗ್ಗೆ ಇಲಾಖೆ ಮನಸ್ಸು ಮಾಡಿಲ್ಲ.
ನಗರವನ್ನು ಬೆಸೆಯುವ ಪ್ರಮುಖ ಸೇತುವೆ ಇದಾಗಿದೆ. ದಿನಂಪ್ರತಿ ನೂರಾರು ವಾಹನ ಇಲ್ಲಿ ಸಂಚರಿಸುತ್ತಿವೆ. ಸೇತುವೆಯ ಮೇಲ್ಪದರ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಮೇಲೆದ್ದು, ಸೇತುವೆ ಗುಣಮಟ್ಟದ ಬಗ್ಗೆ ಆತಂಕ ಉಂಟಾಗಿತ್ತು.
ಬಳಿಕ ಕೆಎಆರ್ಡಿಸಿಎಲ್ ದುರಸ್ತಿ ಕೈಗೆತ್ತಿಕೊಂಡಿತ್ತು. ಜುಲೈ ತಿಂಗಳಲ್ಲಿ ಜಲ್ಲಿ ಮಿಶ್ರಿತ ಪರಿಕರ ಬಳಸಿ ದುರಸ್ತಿ ಮಾಡಿದ ಬೆನ್ನಲ್ಲೇ ಹೊಂಡ ಸೃಷ್ಟಿಯಾಗಿತ್ತು. ಮೂರು ನಾಲ್ಕು ಬಾರಿ ತೇಪೆ ಕಾಮಗಾರಿ ನಡೆಸಿದ್ದರೂ ಅದು ನಿಲ್ಲಲಿಲ್ಲ. ಮಳೆ ಕಡಿಮೆ ಆಗದೆ ದುರಸ್ತಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ದುರಸ್ತಿ ಕೆಲಸ ಸ್ಥಗಿತಗೊಳಿಸಿದ್ದರು.
ಈಗ ಮೌನ
ಬಿಸಿಲಿನ ವಾತಾವರಣ ಇದ್ದರೂ ಇಲಾಖೆ ದುರಸ್ತಿ ಕೈಗೆತ್ತಿಕೊಂಡಿಲ್ಲ. ಮೂರು ಕಡೆಗಳಲ್ಲಿ ಇದ್ದ ಬಿರುಕು ಈಗ ಐದಾರು ಕಡೆ ವ್ಯಾಪಿಸಿದೆ. ಜೋಡುಪಾಲ ಘಟನೆ ಅನಂತರ ಕೆಆರ್ಡಿಸಿಎಲ್ ಅಧಿಕಾರಿಗಳು ಈ ರಸ್ತೆಯಲ್ಲಿ ದಿನಂಪ್ರತಿ ಓಡಾಟ ನಡೆಸುತ್ತಾರೆ. ಆದಾಗ್ಯೂ ಮೇಲ್ಪದರ ಶಿಥಿಲವಾಗಿದ್ದನ್ನು ಗಮನಿಸಿಲ್ಲ. ಜತೆಗೆ ನಗರಾಡಳಿತ ಸೇರಿದಂತೆ ಜನಪ್ರತಿನಿಧಿಗಳು ಎಚ್ಚರಿಸುವ ಪ್ರಯತ್ನ ಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ