ಮೋದಿಗೆ ಮೂಡೆ, ನೀರುದೋಸೆ  ಉಣಬಡಿಸಿದ ಮಂಗಳೂರು


Team Udayavani, Dec 20, 2017, 6:45 AM IST

20-2.jpg

ಮಂಗಳೂರು: ತುಳು ನಾಡಿನ ಸಾಂಪ್ರದಾಯಿಕ ಖಾದ್ಯಗಳಾದ ಮೂಡೆ, ನೀರುದೋಸೆ,  ಸಜ್ಜಿಗೆ- ಬಜಿಲ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೋಡಿ ಮಾಡಿವೆ. ಹೀಗಾಗಿಯೇ ಅವರು ಎರಡೆರಡು ಬಾರಿ ಇವುಗಳನ್ನು ಹಾಕಿಸಿಕೊಂಡರು, ಸವಿದರು ಮತ್ತು ಕರಾವಳಿಯ ಈ ವಿಶೇಷ ತಿನಿಸುಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು!

ನಗರದ ಕದ್ರಿಹಿಲ್ಸ್‌ನ ಸಕೀìಟ್‌ ಹೌಸ್‌ನಲ್ಲಿ ವಾಸ್ತವ್ಯವಿದ್ದ ಪ್ರಧಾನಿ ಮೋದಿ ಮಂಗಳವಾರ ಮುಂಜಾನೆ ಉಪಾಹಾರ ಸೇವಿಸಿದರು. ಬಳಿಕ ತಿನಿಸು ಗಳ ಬಗ್ಗೆ ತನ್ನ ಸತ್ಕಾರಕ್ಕಾಗಿ ನೇಮಕಗೊಂಡಿದ್ದ ಸಿಬಂದಿ ಬಳಿ ಪ್ರಶಂಸೆ ವ್ಯಕ್ತ ಪಡಿಸಿದರು. ಪ್ರಧಾನಿಗಾಗಿ ಬೆಳಗ್ಗಿನ ಉಪಾಹಾರ ತಯಾರಿಸಿ, ಬಡಿಸಿದ ನಗರದ ಖಾಸಗಿ ಹೊಟೇಲ್‌ನ ಸಿಬಂದಿ ಹೇಳುವಂತೆ, ಮೋದಿಯವರ ಉಪಾಹಾರಕ್ಕೆ ಮೂಡೆ, ನೀರುದೋಸೆ, ಇಡ್ಲಿ, ಕೇಸರಿಬಾತ್‌, ಚಪಾತಿ, ವಡೆ, ಸಂಜೀರ, ಬಿಸ್ಕಾಟ್‌ ರೊಟ್ಟಿ; ವ್ಯಂಜನ ಗಳಾಗಿ  ಸಾಂಬಾರ್‌, ದಾಳಿತೋವೆ, ಚಟ್ನಿ; ತಾಜಾ ಹಣ್ಣಿನ ರಸ, ಚಹಾ ಸಿದ್ಧಪಡಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಮೋದಿ ಅವರು ಉಪಾಹಾರ ಸೇವಿಸಲು ಕುಳಿತಾಗ ಸ್ಥಳೀಯ ಖಾದ್ಯ ಬಡಿಸು ವಂತೆ ಕೋರಿದರು.

ಹೀಗಾಗಿ ನೀರುದೋಸೆ, ಮೂಡೆ, ದಾಳಿತೋವೆ, ಸಜ್ಜಿಗೆ ಬಜಿಲ್‌, ಸಂಜೀರ ಹಾಗೂ ಬಿಸ್ಕಾಟ್‌ ರೊಟ್ಟಿ, ರಾಗಿ ಮಣ್ಣಿಗಳನ್ನು ಒದಗಿಸಲಾಯಿತು.

ಕರಾವಳಿಯ ಸ್ಪೆಷಲ್‌ ಆಗಿರುವ ಮೂಡೆ, ನೀರುದೋಸೆ ಹಾಗೂ ಸಜ್ಜಿಗೆ – ಅವಲಕ್ಕಿಗೆ ಮಾರುಹೋದ ಪ್ರಧಾನಿ ಮೋದಿ ಇವನ್ನು ಹೆಚ್ಚು ಇಷ್ಟಪಟ್ಟು ಸವಿದರು. ಅಲ್ಲದೆ ಇನ್ನೊಂದು ಬಾರಿ ಹಾಕಿಸಿಕೊಂಡು ಚಪ್ಪರಿಸಿದರು. ಜತೆಗೆ ಬಿಸ್ಕಾಟ್‌ ರೊಟ್ಟಿ
ಹಾಗೂ ಸಂಜೀರಗಳನ್ನು ಕೂಡ ತಿಂದರು. ಬಳಿಕ ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಸೇವಿಸಿದರು. ಇದಕ್ಕೆ ಮುನ್ನಬೆಳಗ್ಗೆ ಎದ್ದ ಕೂಡಲೇ ಯೋಗಾಭ್ಯಾಸ ನಡೆಸಿದ ಅವರು, ಅನಂತರ ಶುಂಠಿ ಚಹಾ ಹಾಗೂ ಬಿಸ್ಕತ್‌ ಸೇವಿಸಿದ್ದರು ಎಂದು ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಗೊಳಿಸಿದ್ದ ಸಿಬಂದಿ “ಉದಯ ವಾಣಿ’ಗೆ ತಿಳಿಸಿದ್ದಾರೆ. 

ತೂಕ 2 ಕಿಲೋ ಜಾಸ್ತಿಯಾದರೆ?
ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರವನ್ನು ಸ್ವಲ್ಪ ಹೆಚ್ಚೇ ಸೇವಿಸುತ್ತಾರಂತೆ. ನಗರದಲ್ಲಿ ತನಗೆ ಉಪಾಹಾರವಾಗಿ ತಯಾರಿಸಲಾಗಿದ್ದ ತಿನಿಸುಗಳಲ್ಲಿ ಸ್ಥಳೀಯ ರುಚಿಗಳನ್ನು ಸ್ವಲ್ಪ ಜಾಸ್ತಿಯಾಗಿಯೇ ಸೇವಿಸಿದ ಬಳಿಕ ಜತೆಗಿದ್ದವರ ಜತೆ ಖುಷಿ ಹಂಚಿಕೊಂಡ ಮೋದಿ, “ಇಂದು ಹೆಚ್ಚು ತಿಂಡಿ ತಿಂದಿದ್ದೇನೆ. ತೂಕ ಎರಡು ಕಿಲೋ ಜಾಸ್ತಿಯಾಗಬಹುದೇನೋ’ ಎಂದು ನಗೆ ಚಟಾಕಿ ಹಾರಿಸಿದರು.

ಉಪಾಹಾರವನ್ನು ಮಂಗಳೂರಿನ ಓಶಿಯನ್‌ ಪರ್ಲ್ ಹೊಟೇಲ್‌ನವರು ಸಿದ್ಧಪಡಿಸಿದ್ದರು. ಸಕೀìಟ್‌ ಹೌಸ್‌ನ ಹಳೆ ಕಟ್ಟಡದಲ್ಲಿರುವ ಭೋಜನಶಾಲೆಯಲ್ಲಿ ಉಪಾಹಾರ ತಯಾರಿಸಲಾಗಿತ್ತು. ಬಾಣಸಿಗರು ಸೋಮವಾರ ರಾತ್ರಿಯೇ ಸಕೀìಟ್‌ ಹೌಸ್‌ನಲ್ಲಿ ತಂಗಿದ್ದು, ಉಪಾಹಾರ ತಯಾರಿಗೆ ಅವಶ್ಯವಿರುವ ಸಿದ್ಧತೆಗಳನ್ನು ಮಾಡಿದ್ದರು. ಚಟ್ನಿ ಹಾಗೂ ಸಾಂಬಾರು ಹೊರತುಪಡಿಸಿ ಉಳಿದೆಲ್ಲ ತಿನಿಸುಗಳನ್ನು ಸ್ಥಳದಲ್ಲೇ ಮುಂಜಾನೆ ತಯಾರಿಸಲಾಗಿತ್ತು. ಆಹಾರ ತಯಾರಿ ಸ್ಥಳದಲ್ಲಿ ರಾಜ್ಯ ಆಹಾರ ಸುರಕ್ಷತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಅಧಿಕಾರಿಗಳು ಅಡುಗೆ ತಯಾರಕ ಸಿಬಂದಿ ಜತೆಗೆ ರಾತ್ರಿಯಿಂದಲೇ ಇದ್ದರು.

ಓಶಿಯನ್‌ ಪರ್ಲ್ ಹೊಟೇಲ್‌ನ ಎಕ್ಸಿಕ್ಯೂಟಿವ್‌ ಚೆಫ್ ದೇವಬ್ರತ ಮಂಡಲ್‌ ಅವರ ನೇತೃತ್ವದ ತಂಡ ಬೆಳಗ್ಗಿನ ಉಪಾಹಾರವನ್ನು ಸಿದ್ಧಪಡಿಸಿತ್ತು. ಬಿ. ಎನ್‌. ಗಿರೀಶ್‌, ಕೆ. ಪಿ. ಸಿಂಗ್‌, ಪ್ರೇಮ್‌ ಕುಮಾರ್‌ ಸೇರಿದಂತೆ ಎಂಟು ಮಂದಿಯ ತಂಡ ಪ್ರಧಾನಿಯವರ ಉಪಚಾರ ನೋಡಿಕೊಂಡಿತ್ತು.

ಮೂಲತಃ ಪ. ಬಂಗಾಲದವರಾದ ದೇವಬ್ರತ ಈ ಹಿಂದೆ ರಾಷ್ಟ್ರಪತಿಯಾಗಿದ್ದ ಪ್ರಣವ್‌ ಮುಖರ್ಜಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಂತಾದ ಅತೀ ಗಣ್ಯರಿಗೆ ಭೋಜನ ಹಾಗೂ ಉಪಾಹಾರ ಸಿದ್ಧಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಓಶಿಯನ್‌ ಪರ್ಲ್ ಹೊಟೇಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೂಟ್‌ ನಂ.1ರಲ್ಲಿ  ಪ್ರಧಾನಿ
ಹೊಸ ಸಕೀìಟ್‌ ಹೌಸ್‌ನ 1ನೇ ನಂಬರ್‌ ಸೂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಿದ್ದರು. ಪಕ್ಕದ 2ನೇ ನಂಬರ್‌ ಸೂಟ್‌ನಲ್ಲಿ ಅವರ ಆಪ್ತ ಸಹಾಯಕರಾದ ದೀಪಕ್‌ ಜೋಶಿ ಹಾಗೂ ಬದ್ರಿ ಮೀನಾ ವಾಸ್ತವ್ಯವಿದ್ದರು. ಇದರ ಪಕ್ಕದ ಕೊಠಡಿಯಲ್ಲಿ ಆಪ್ತ ಕಾರ್ಯದರ್ಶಿ ಸಂಜೀವ್‌ ಸಿಂಗ್‌ ಉಳಿದು ಕೊಂಡಿದ್ದರು. ಇನ್ನುಳಿದ ಕೊಠಡಿಗಳಲ್ಲಿ ಪ್ರಧಾನಿ ಕಾರ್ಯಾಲಯದ ಹೆಚ್ಚುವರಿ ಕಾರ್ಯದರ್ಶಿ ತರುಣ್‌ ಬಗ್ಗಲ್‌, ಪ್ರಧಾನಿಯವರ ಪಿಪಿ ನಮಿತ್‌ ವಿಗ್‌, ಎಂಟಿಎಸ್‌ಗಳಾದ ಯು. ಜಿ. ಜೋಶಿ, ಅನೀಸ್‌ ಕುಮಾರ್‌, ಎಸ್‌ಪಿಜಿ ನಿರ್ದೇಶಕ ಅರುಣ್‌ ಕುಮಾರ್‌ ಸಿನ್ಹಾ ಮೊದಲಾದವರು ವಾಸ್ತವ್ಯ ಹೂಡಿದ್ದರು. ಈ ಕಟ್ಟಡದಲ್ಲಿ ಒಟ್ಟು 3 ಸೂಟ್‌ಗಳು (ಐಷಾರಾಮಿ ಕೊಠಡಿ) ಹಾಗೂ ಇತರ 8 ಕೊಠಡಿಗಳಿವೆ.

ಉಪಾಹಾರ ತಯಾರಿಸಿದವರ ಜತೆ ಫೋಟೋ 
ಉಪಾಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಬಳಿಕ ಅದನ್ನು ಸಿದ್ಧಪಡಿಸಿದ ಮತ್ತು ಬಡಿಸಿದ ಎಲ್ಲ ಸಿಬಂದಿ ಜತೆ ಫೋಟೋ ತೆಗೆಸಿಕೊಂಡು ಸರಳತೆಯನ್ನು ಮೆರೆದರು. ಪ್ರಧಾನಿಯವರ ಜತೆಗೆ ಫೋಟೋ ತೆಗೆಸಿಕೊಳ್ಳಲು ಒದಗಿದ ಅವಕಾಶ ಸಿಬಂದಿಯನ್ನು ಪುಳಕಿತಗೊಳಿಸಿತು. ಇದು ಬದುಕಿನ ಅತ್ಯಂತ ಮಹಣ್ತೀದ ದಿನ ಎಂದು ಅವರು ಸಂಭ್ರಮ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.