“ಪರಸ್ಪರ ವಿಶ್ವಾಸದಿಂದ ದೇಶದಲ್ಲಿ ಶಾಂತಿ ಸಾಧ್ಯ’
Team Udayavani, Jan 10, 2017, 3:45 AM IST
ಮಂಗಳೂರು: ಮನುಷ್ಯನ ಮಧ್ಯೆ ಪರಸ್ಪರ ವಿಶ್ವಾಸ ಇದ್ದಾಗ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಲು ಸಾಧ್ಯ. ನಮ್ಮನ್ನು ನಾವು ಧರ್ಮದ ಮೂಲಕ ಗುರುತಿಸಿಕೊಳ್ಳುವುದಕ್ಕಿಂತಲೂ ಭಾರತೀಯರಾಗಿ ಗುರುತಿಸಿಕೊಳ್ಳಬೇಕು. ಪ್ರತಿ ವ್ಯಕ್ತಿಯೊಳಗೂ ದೇವರಿದ್ದು, ನಾವೆಲ್ಲರೂ ದೇವರ ಅಂಶವಾಗಿದ್ದೇವೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಥ್ನ ಮಾರ್ಗದರ್ಶಕ ಇಂದ್ರೇಶ್ ಕುಮಾರ್ ಹೇಳಿದರು.
ಅವರು ಸೋಮವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ರೈಟ್ಸ್ ಅವೇರ್ನೆಸ್ ಆ್ಯಂಡ್ ನಾಲೆಡ್ಜ್
ಸೊಸೈಟಿ (ರ್ಯಾಂಕ್) ವತಿಯಿಂದ ಶಾಂತಿ, ಸೌಹಾರ್ದ ಹಾಗೂ ರಾಷ್ಟ್ರೀಯ ಭಾವೈಕ್ಯಕ್ಕಾಗಿ ನಡೆದ ಅಂತರ್ ಧರ್ಮೀಯ ಬೌದ್ಧಿಕ ಸಮಾವೇಶದಲ್ಲಿ ಮಾತನಾಡಿದರು.
ಕೆಲವೊಂದು ಸಂದರ್ಭ ನಮ್ಮ ಅಸ್ತಿತ್ವ ಬದಲಾಗದಿದ್ದರೂ ನಿಷ್ಠೆ ಬದಲಾಯಿಸಿಕೊಳ್ಳುತ್ತೇವೆ. ಇದು ಶಾಂತಿಗೆ ಭಂಗ ತರುತ್ತದೆ. ಹೀಗಾಗಿ ನಾವು ಜಾತಿ, ಧರ್ಮ ಬದಿಗಿಟ್ಟು ದೇಶಕ್ಕೆ ನಿಷ್ಠರಾಗಿ ಬದುಕಬೇಕು ಎಂದರು.
ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ನಿಸ್ವಾರ್ಥ ಶಾಂತಿಗೆ ಮೂಲವಾಗಿದ್ದು, ಸ್ವಾರ್ಥ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಶಾಂತಿ ನಮ್ಮ ಜೀವನದ ಪರಮ ಉದ್ದೇಶವಾಗಿರಬೇಕು. ಭಗವದ್ಗೀತೆಯಲ್ಲಿ ಕೃಷ್ಣನೂ ಅದನ್ನೇ ಹೇಳಿದ್ದಾನೆ.
ಭಾರತದಲ್ಲಿ ಹಲವು ಜಾತಿ-ಧರ್ಮಗಳಿದ್ದರೂ ಇಡೀ ಜಗತ್ತಿಗೆ ಶಾಂತಿ ಸಾರಿದ ಏಕೈಕ ರಾಷ್ಟ್ರ ಭಾರತ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದರು.
ಹೊಸದಿಲ್ಲಿಯ ಮುಖ್ಯ ಇಮಾಮ್ ಡಾ| ಇಮಾಮ್ ಉಮರ್ ಅಹ್ಮದ್ ಇಲಿಯಾಸ್ ಮಾತನಾಡಿ, ನಮ್ಮ ಜಾತಿ-ಧರ್ಮಗಳು ಕೇವಲ ನಮ್ಮ ಮನೆಗೆ ಸೀಮಿತವಾಗಬೇಕು. ಆದರೆ ಸಮಾಜದಲ್ಲಿ ನಾವು ಭಾರತೀಯರಾಗಿ ಸಹೋದರತೆಯಿಂದ ಬದುಕುವುದನ್ನು ಕಲಿಯಬೇಕು. ಪರಸ್ಪರ ಆತ್ಮೀಯತೆಯಿಂದ ಬದುಕಿದಾಗ ದೇಶಕ್ಕೂ ಅದರಿಂದ ಒಳಿತಾಗುತ್ತದೆ ಎಂದರು.
ದ.ಕ. ಖಾಝಿ ಶೈಖುನ್ನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಶಾಂತಿಯೇ ಇಸ್ಲಾಂ ಧರ್ಮದ ಮೂಲ ಮಂತ್ರ ಎಂದರು. ಮಿಲಾಗ್ರಿಸ್ ಚರ್ಚ್ನ ಧರ್ಮಗುರು ರೆ| ಫಾ| ವಲೇರಿಯನ್ ಡಿ’ಸೋಜಾ ಮಾತನಾಡಿ, ಧರ್ಮಕ್ಕಿಂತಲೂ ನಾವು ಮೊದಲು ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು ಎಂದರು.
ರಮೇಶ್ ಗುರೂಜಿ ಕಣ್ಣೂರು, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.ರ್ಯಾಂಕ್ನ ಅಧ್ಯಕ್ಷ ಡಾ| ಎಂ.ಎನ್. ಕೃಷ್ಣಮೂರ್ತಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’
Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ
Kerala “ವೆಸ್ಟ್ನೈಲ್’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ
ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ
Mulki ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯತಮನೂ ಆತ್ಮಹತ್ಯೆ