ಸ್ವಾವಲಂಬಿ ಬದುಕಿಗೆ ಮಾದರಿ ಕಟ್ಟದಪಡ್ಪು ಆಟೋ ಚಾಲಕಿ


Team Udayavani, Jun 28, 2018, 2:40 AM IST

auto-driver-27-6.jpg

ಪುಂಜಾಲಕಟ್ಟೆ: ಸ್ವಾವಲಂಬಿ ಬದುಕಿಗಾಗಿ ಆಟೋರಿಕ್ಷಾ ಚಾಲನೆ ನಡೆಸುತ್ತ ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಜೀವನದಲ್ಲಿ ಸಾಧಿಸಬೇಕೆಂಬ ಆಕಾಂಕ್ಷೆ ಹೊಂದಿದವರಿಗೆ ಗ್ರಾಮೀಣ ಪ್ರದೇಶವಾದ ಮಣಿನಾಲ್ಕೂರು ಗ್ರಾಮದ ಮಾರ್ದಡ್ಕದ ‘ಶ್ರೀ ಭ್ರಾಮರಿ’ ಆಟೋರಿಕ್ಷಾ ಚಾಲಕಿ ಪೂರ್ಣಿಮಾ ಅವರು ತನ್ನ ಕುಟುಂಬ ನಿರ್ವಹಣೆಯ ಜತೆ ಸ್ವಾವಲಂಬಿ ಜೀವನ ನಡೆಸುತ್ತಾ ಆದರ್ಶಪ್ರಾಯರಾಗಿದ್ದಾರೆ. ಇವರು ತಾಲೂಕಿನ ಏಕೈಕ ಆಟೋರಿಕ್ಷಾ ಚಾಲಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಣಿನಾಲ್ಕೂರು-ಕಕ್ಯಪದವು ನಡುವಿನ ಕಟ್ಟದಪಡ್ಪು ಜಂಕ್ಷನ್‌ನಲ್ಲಿ ಆಟೋರಿಕ್ಷಾವನ್ನು ಪಾರ್ಕಿಂಗ್‌ ಮಾಡಿ, ಪ್ರಯಾಣಿಕರನ್ನು ಸಾಗಿಸುವ ಕಾರ್ಯ ಮಾಡುತ್ತಿರುವ ಪೂರ್ಣಿಮಾ ಅವರು ಇಲ್ಲಿನ ನಿವಾಸಿ ಜಯಾನಂದ ಶೆಟ್ಟಿ ಅವರ ಪತ್ನಿ.

ಪತಿಯಿಂದ ಚಾಲನೆ ತರಬೇತಿ
ಆಟೋರಿಕ್ಷಾ ಚಾಲಕರಾಗಿದ್ದ ಪತಿ ಜಯಾನಂದ ಶೆಟ್ಟಿ ಬೆನ್ನುನೋವಿನ ಕಾರಣಕ್ಕೆ ಆಟೋರಿಕ್ಷಾ ಚಾಲನೆ ಬಿಟ್ಟು ಬೇರೆ ಉದ್ಯೋಗ ಆರಿಸಿಕೊಂಡಾಗ, ಪೂರ್ಣಿಮಾ ಅವರಿಗೆ ರಿಕ್ಷಾ ಚಾಲನೆಯ ಆಸಕ್ತಿ ಹುಟ್ಟಿತು. ಅದಕ್ಕೆ ಪತಿಯ ಪ್ರೋತ್ಸಾಹವೂ ದೊರೆಯಿತು. ಅದರಂತೆ ಒಂದು ವಾರದಷ್ಟು ಕಾಲ ಪತಿಯಿಂದಲೇ ರಿಕ್ಷಾ ಚಾಲನೆಯ ತರಬೇತಿ ಪಡೆದುಕೊಂಡು ಇಂದು ಚಾಲಕಿಯಾಗಿದ್ದಾರೆ.

ಕಾಯಕದಲ್ಲಿ ಖುಷಿ
‘ನನಗೆ ಚಿಕ್ಕಂದಿನಿಂದಲೂ ವಾಹನಗಳನ್ನು ಕಂಡರೆ ಹೆದರಿಕೆ ಇತ್ತು. ಸೈಕಲ್‌ ತುಳಿದವಳು ನಾನಲ್ಲ. ಆದರೆ ಇಂದು ರಿಕ್ಷಾ ಚಾಲಕಿಯಾಗಿ ಗುರುತಿಸಿಕೊಂಡಿದ್ದೇನೆ’ ಎನ್ನುತ್ತಾರೆ ಪೂರ್ಣಿಮಾ. ಮದುವೆಗೆ ಮುಂಚೆ ಬೀಡಿ ಕಟ್ಟುವ ಕಾಯಕ, ಮದುವೆ ಬಳಿಕ ಮನೆ ಕೆಲಸದಲ್ಲೇ ನಿರತಳಾಗಿದ್ದೆ. ಮಗಳು ಶಾಲೆ ಸೇರುತ್ತಲೇ ನನಗೆ ಬೇರೆ ಕೆಲಸದ ಅಗತ್ಯ ಇದೆ ಎಂದೆನ್ನಿಸಿತು. ಪತಿಯ ಬಳಿಯಲ್ಲೇ ರಿಕ್ಷಾ ಚಾಲನೆ ಕಲಿತೆ’ ಎನ್ನುವ ಇವರಿಗೆ ಮುಂದೆ ಪಿಕಪ್‌ ವಾಹನ ಖರೀದಿಸಿ ಚಲಾಯಿಸುವ ಯೋಚನೆ ಇದೆ.

ವಯೋವೃದ್ಧರಿಗೆ ಉಚಿತ ಸೇವೆ
ಒಂದೂವರೆ ವರ್ಷದಿಂದ ರಿಕ್ಷಾ ಚಾಲನೆ ವೃತ್ತಿ ನಿರ್ವಹಿಸುವ ಪೂರ್ಣಿಮಾ, ತಮ್ಮ ಕಾರ್ಯತತ್ಪರತೆಯಿಂದ ಮಾದರಿಯಾಗಿದ್ದಾರೆ. ಪ್ರಯಾಣಿಕರ ಅಪೇಕ್ಷೆ ಮೇರೆಗೆ ಪುತ್ತೂರು, ದೇರಳಕಟ್ಟೆ, ಬೆಳ್ತಂಗಡಿವರೆಗೂ ರಿಕ್ಷಾ ಚಲಾಯಿಸಿದ ಅನುಭವ ಪಡೆದಿದ್ದಾರೆ. ರಾತ್ರಿ ಹೊತ್ತಿನಲ್ಲಿ ತುರ್ತು ಕರೆ ಬಂದಾಗ ಪತಿ ರಿಕ್ಷಾ ಚಾಲನೆ ಮಾಡುತ್ತಾರೆ. ವಯೋವೃದ್ಧರನ್ನು ತಮ್ಮ ರಿಕ್ಷಾದಲ್ಲಿ ಉಚಿತವಾಗಿ ಸಾಗಿಸುವ ಸಮಾಜಸೇವೆಯ ಕಳಕಳಿ ಅವರದು.

ಸ್ವಾವಲಂಬಿಗಳಾಗಿ
ನಮ್ಮ ಪರಿಸರದ ಯುವತಿಯರಿಗೂ ರಿಕ್ಷಾ ಚಾಲನೆ ಕಲಿಯಲು ಹೇಳುತ್ತಿದ್ದೇನೆ. ಯಾರೂ ಮುಂದೆ ಬರುತ್ತಿಲ್ಲ. ತನ್ನಂತೆಯೇ ಮಹಿಳೆಯರು ಸ್ವಾವಲಂಬಿಗಳಾಗಿ. ನಿಜವಾಗಿಯೂ ಇದು ಅತ್ಯಂತ ಸಂತಸದ ಕೆಲಸ.
– ಪೂರ್ಣಿಮಾ ಡಿ., ಆಟೋರಿಕ್ಷಾ ಚಾಲಕಿ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.