ಇನ್ನು ಬೋರ್ ವೆಲ್ ತೋಡುವುದು ಕಷ್ಟ! ಮುಷ್ಕರ ಹೂಡಲಿರುವ ಕೊಳವೆ ಬಾವಿ ತೋಡುವ ಯಂತ್ರಗಳು!
Team Udayavani, Feb 11, 2021, 5:15 PM IST
ಪಣಂಬೂರು: ಈ ಹಿಂದೆ ಬಾವಿ ತೋಡುತ್ತಿದ್ದ ದಿನಗಳಿದ್ದವು. ಆದರೆ ಇತ್ತೀಚಿಗೆ ಎಷ್ಟು ಆಳಕ್ಕೆ ಹೋದರೂ ಅಂತರ್ಜಲ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ದಿನ ತಿಂಗಳು ಗಟ್ಟಲೆ ಬಾವಿ ತೋಡಿ ನೀರು ಸಿಗದಿದ್ದರೆ ಶ್ರಮ ವ್ಯರ್ಥ. ಇದಕ್ಕೆ ಪರ್ಯಯವಾಗಿ ಬಂದ ಬೋರುವೆಲ್ (ಕೊಳವೆ ಬಾವಿ) ತೋಡುವ ಕ್ರಮದಿಂದ ರೈತರು ಸೇರಿದಂತೆ ಹಲವರು ಪ್ರಯೋಜನ ಪಡೆದಿದ್ದಾರೆ. ಆದರೆ ಇದೀಗ ಕೊಳವೆ ಬಾವಿ ತೋಡುವ ಸಂಸ್ಥೆಗಳು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕೋವಿಡ್ ಹೊಡೆತ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 80ಕ್ಕೂ ಮಿಕ್ಕಿ ಕೊಳವೆಬಾವಿ ತೋಡುವ ಯಂತ್ರಗಳು (ರಿಗ್) ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಿವೆ. ವಾಹನಗಳನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನು ಮಾಲಕರು ತಲುಪಿದ್ದು ಈ ನಿರ್ಧಾರಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ವ್ಯಾಲಂಟೈನ್ಸ್ ಡೇ ಗೆ ಹುಡುಗಿಯರ ಕಾಟ ತಪ್ಪಿಸಲು 5 ದಿನ ರಜೆ ಕೊಡಿ ಸರ್.. ರಜಾರ್ಜಿ ವೈರಲ್
ಇದರಿಂದ ಅವಿಭಜಿತ ಜಿಲ್ಲೆಯಲ್ಲಿ ಯಾವುದೇ ಕೊಳವೆ ಬಾವಿ ತೋಡುವುದು ಸ್ಥಗಿತಗೊಳ್ಳಲಿದೆ. ಕೋವಿಡ್ ಬಳಿಕ ಏರಿದ ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳು ಸಿಗದೆ ಸಮಸ್ಯೆ, ಮುಖ್ಯವಾಗಿ ಉತ್ತರ ಭಾರತದ ಕಾರ್ಮಿಕರನ್ನು ಇಲ್ಲಿಗೆ ಕರೆ ತರುವುದು ಒಂದು ಸವಾಲಾದರೆ, ಅವರ ವೇತನ, ಭತ್ಯೆ, ವಸತಿಯದ್ದು ಮತ್ತೊಂದು ಸಮಸ್ಯೆಯಾಗಿದೆ.
ಸರಕಾರಿ ಯೋಜನೆ ಸೇರಿದಂತೆ, ಕೊಳವೆ ಬಾವಿಗಳಿಗೆ ನಾಡಿನಾದ್ಯಂತ ಇದೀಗ ಬೇಡಿಕೆ ಹೆಚ್ಚಿದ್ದರೂ ಕೊಳವೆ ಯಂತ್ರಗಳನ್ನು ಅದೇ ದರದಲ್ಲಿ ನಡೆಸಲು ಸಾಧ್ಯವಾಗದ ಸ್ಥಿತಿಯಿದೆ. ಹೀಗಾಗಿ ನಷ್ಟ ಮಾಡಿಕೊಳ್ಳುವುದಕ್ಕಿಂತ ಕೆಲಸ ನಿಲ್ಲಿಸಿ ತಮ್ಮ ಸಂಕಷ್ಟಗಳನ್ನು ಸರಿಪಡಿಸಿಕೊಳ್ಳಲು ಮಾಲಿಕರು ಮುಂದಾಗಿದ್ದಾರೆ.
ಇದನ್ನೂ ಓದಿ: ಮುಂದುವರಿದ ರಾಗಿಂಗ್ ಹಾವಳಿ: ಮಂಗಳೂರಿನಲ್ಲಿ 11 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ಪ್ರತಿ ಯಂತ್ರದಲ್ಲಿ 30 ಮಂದಿ ಕಾರ್ಮಿಕರು ಬೇಕಾಗುತ್ತದೆ. ಇವರಲ್ಲಿ ಉತ್ತರ ಭಾರತದವರೇ ಹೆಚ್ಚಿದ್ದಾರೆ. ಇನ್ನೊಂದೆಡೆ ತೀವ್ರಗತಿಯಲ್ಲಿ ಏರುತ್ತಿರುವ ಇಂಧನ ಬೆಲೆ ನಮ್ಮನ್ನು ಕಂಗಾಲು ಮಾಡಿದೆ. ಇತ್ತ ಕೊಳವೆ, ಬಿಡಿ ಭಾಗಗಳು ದುಬಾರಿಯಾಗಿದೆ. ಕೊಳವೆ ಬಾವಿ ತೋಡಲು ಈಗಿರುವ ದರಕ್ಕಿಂತ ಶೇ40ರಷ್ಟು ಹೆಚ್ಚು ಮಾಡಿದರೆ ಮಾತ್ರ ಯಂತ್ರ ಮತ್ತೆ ಪುನರಾರಂಭ ಮಾಡಬಹುದು ಎಂದು ದ.ಕ ಉಡುಪಿ ಜಿಲ್ಲಾ ರಗ್ ಮಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ