ಇಡ್ಯಾದಲ್ಲಿ ತೋಡುಗಳ ಪುನರುಜ್ಜೀವನ ಅಗತ್ಯ


Team Udayavani, Jun 7, 2018, 12:48 PM IST

7-june-5.jpg

ಸುರತ್ಕಲ್‌ : ಇಡ್ಯಾ ಗ್ರಾಮದಲ್ಲಿ (ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವದಿಕ್ಕಿನಲ್ಲಿ) ಅನಾದಿಯಿಂದಲೂ ಮಳೆನೀರು ಹರಿದು ಹೋಗಲು ಉತ್ತಮ ರೀತಿಯ ಪ್ರಕೃತಿ ನಿರ್ಮಿತ ತೋಡುಗ ಳಲ್ಲಿ ಹೂಳು ತುಂಬಿ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದು, ಸುರಿಯುವ ಸಾಮಾನ್ಯ ಮಳೆಗೂ ಕೃತಕ ನೆರೆ ಉದ್ಭವಿಸಲು ಕಾರಣವಾಗುತ್ತಿದೆ.

ಈ ಹಿಂದೆ ಎತ್ತರದ ಪ್ರದೇಶದಿಂದ ಸಮುದ್ರ ಸೇರುತ್ತಿದ್ದ ಮಳೆ ನೀರು ಇದೀಗ ಅಡೆ ತಡೆಗಳಿಂದ ಹರಿದು ಹೋಗದೆ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಪೂರ್ವ ದಿಕ್ಕಿನ ಬೃಹತ್‌ ಪ್ರಮಾಣದ ಮಳೆನೀರು ಕೂಡ ಈ ತೋಡುಗಳಲ್ಲೇ ಹರಿದು ಹೋಗುತ್ತಿದ್ದು, ಈಗಲೂ ಈ ವ್ಯವಸ್ಥೆ
ಮುಂದುವರಿದಿದೆ. ಈ ಎಲ್ಲ ನೀರು ಹಲವು ತೋಡುಗಳ ನೆಟ್‌ವರ್ಕ್‌ ಮೂಲಕ ಒಟ್ಟು ಸೇರಿ ಮುಂದೆ ಸಾಗಿದಂತೆ ತೋಡುಗಳು ಕೂಡ ಅಗಲವಾಗುತ್ತಾ ಸಮುದ್ರವನ್ನು ಸೇರುತ್ತಿದ್ದುವು. ಯಾವುದೇ ರೀತಿಯ ಕೃತಕ ನೆರೆಗಳೂ ಆಗ ಇರುತ್ತಿರಲಿಲ್ಲ.

ಅಗಲ ಕಿರಿದಾದ ಚರಂಡಿ
ಇದೀಗ ಈ ಎಲ್ಲ ಚರಂಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಅಗಲ ಕಿರಿದಾಗಿವೆ. ಮೊದಲು ಇಲ್ಲಿನ ರೈತಾಪಿ ಜನರು ತೋಡುಗಳನ್ನು ಸುಸ್ಥಿತಿಯಲ್ಲಿ ಇಡುತ್ತಿದ್ದರು. ಆದರೆ ಈಗ ಗದ್ದೆಗಳೆಲ್ಲ ಮನೆ ನಿವೇಶನಗಳಾಗಿ ಪರಿವರ್ತಿತವಾದ ಕಾರಣ ಅವುಗಳ ನಿರ್ವಹಣೆ ಮಾಡುವ ರೈತರೂ ಇಲ್ಲ ವಾಗಿದ್ದಾರೆ. ಜತೆಗೆ ಆ ತೋಡುಗಳು ಹೂಳಿನಿಂದ ತುಂಬಿವೆ. ಕೆಲವೆಡೆ ಒತ್ತುವರಿಗೊಂಡು ಅಗಲಕಿರಿದಾಗಿವೆ. ಅದರಿಂದಾಗಿ ಸಣ್ಣ ಸಣ್ಣ ಮಳೆಗಳೂ ಕೃತಕ ನೆರೆಯನ್ನು ಉಂಟುಮಾಡುವ ಪರಿಸ್ಥಿತಿ ಬಂದಿದೆ.

ಪುನರುಜ್ಜೀವನಗೊಳಿಸಿ
ನಗರದ ನರನಾಡಿಗಳಂತಿರುವ ಈ ಪ್ರಾಕೃತಿಕ ತೋಡುಗಳ ಸರಮಾಲೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಅಗಲಗೊಳಿಸುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ಕೆಲವು ಕಡೆ ಚರಂಡಿಗಳೇ ಮಾಯವಾಗುವ ಪರಿಸ್ಥಿತಿ ಇದೆ. ಈ ಕಾರ್ಯವನ್ನು ಮನಪಾ ಮತ್ತು ಒಳಚರಂಡಿ ಮಂಡಳಿ ಆದ್ಯತೆಯ ನೆಲೆಯಲ್ಲಿ ಮಾಡುವ ಆವಶ್ಯಕತೆ ಇದೆ.

ಕಾಮಗಾರಿ ಪ್ರಗತಿಯಲ್ಲಿ
ಈಗಾಗಲೇ ಮಳೆ ನೀರು ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೂಳು ತುಂಬಿದ ತೋಡುಗಳನ್ನು ಸರಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.
 - ಖಾದರ್‌,
ಜೆ.ಇ., ಸುರತ್ಕಲ್‌, ಮನಪಾ

ಸೂಕ್ತ ಕ್ರಮ ಕೈಗೊಳ್ಳಿ
ಸುರತ್ಕಲ್‌ ಪ್ರದೇಶದಲ್ಲಿ ನೆರೆ ಅಪರೂಪವಾಗಿತ್ತು.ಆದರೆ ಇದೀಗ ಚರಂಡಿ, ತೋಡುಗಳು ಒತ್ತುವರಿಯಾಗಿ ಅಗಲ ಕಿರಿದಾದ ಕಾರಣ ಕೃತಕ ನೆರೆ ಉಂಟಾಗುತ್ತಿದೆ. ಪಾಲಿಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಈ ಅನಾಹುತ ತಪ್ಪಿಸಬಹುದು.
  - ಪ್ರೊ| ರಾಜ್‌ಮೋಹನ್‌  ರಾವ್‌,
     ಸುರತ್ಕಲ್‌

ಟಾಪ್ ನ್ಯೂಸ್

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

12

The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

12

The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.